More

    ಅವಳಿಲ್ಲದೇ ನಾನು ಬದುಕಲಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿಯ ಕಾಪಾಡಿದ ಟ್ವಿಟರ್​!

    ಮುಂಬೈ : ಪ್ರೇಯಸಿ ಕೈಕೊಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಕೇರಳದ ಭಗ್ನಪ್ರೇಮಿಯೊಬ್ಬನನ್ನು ಟ್ವಿಟರ್​ ಉಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಡಿಪ್ಲೋಮಾ ಯುವಕನೊಬ್ಬನಿಗೆ ಆತನ ಸ್ನೇಹಿತೆ ಕೈಕೊಟ್ಟಿದ್ದಾಳೆ. ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಬೇಸತ್ತ ಯುವಕ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ ನಲ್ಲಿ ‘ಸಾಯುತ್ತೇನೆ’ ಎಂದು ಪೋಸ್ಟ್ ಹಾಕಿದ್ದಾ‌ನೆ.

    ಕೇರಳದ ಈ ಯುವಕ ಮುಂಬೈನ ದಾದರ್‌ನಲ್ಲಿರುವ ಹೋಟೆಲ್‌ಗೆ ರೂಮ್ ಬುಕ್ ಮಾಡಿದ್ದನು. ಅಲ್ಲಿಂದಲೇ ಆತ ಪೋಸ್ಟ್​ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಟ್ವಿಟರ್​ಗೆ ಈ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಆತ ಎಲ್ಲಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಲಾಗಿದೆ. ನಂತರ ಹೋಟೆಲ್​ನಲ್ಲಿ ಇರುವುದು ತಿಳಿದಿದೆ.

    ಇನ್ಸ್‌ಪೆಕ್ಟರ್ ಸಂಜಯ್ ಗೋವಿಲ್ಕರ್ ಮತ್ತು ಹೋಟೆಲ್ ಮ್ಯಾನೇಜರ್ ನೇತೃತ್ವದ ತಂಡ ನಕಲಿ ಕೀಲಿಯೊಂದಿಗೆ ಕೊಠಡಿಯನ್ನು ತೆರೆದಿದೆ. ಆ ಸಮಯದಲ್ಲಿ ಯುವಕ ಕೈಯಲ್ಲಿ ಚಾಕು ಹಿಡಿದು ನಿಂತಿದ್ದ. ಕೂಡಲೇ ಆತನನ್ನು ರಕ್ಷಣೆ ಮಾಡಲಾಗಿದೆ. ಖಿನ್ನತೆಗೆ ಜಾರಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಕೌನ್ಸೆಲಿಂಗ್​ ನೀಡಲಾಗಿದೆ. ಯುವಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಯುವಕರೇ ಹುಷಾರ್​! ಫಸ್ಟ್​ ನೈಟೇ ಶಾಕ್ ಕೊಟ್ಟ ಸುಂದರಿ​- ಟೆರೇಸ್​ ಹಾರಿ ಎಸ್ಕೇಪ್​!

    VIDEO: ಸಚಿವರು ಹುಟ್ಟು ಹಾಕಿದ್ದೇ ಹಾಕಿದ್ದು, ದೋಣಿ ಮಾತ್ರ ಕದಲಲೇ ಇಲ್ಲ: ಜಾಲತಾಣದಲ್ಲಿ ಭಾರಿ ಟ್ರೋಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts