ಮುಂಬೈ : ಪ್ರೇಯಸಿ ಕೈಕೊಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಕೇರಳದ ಭಗ್ನಪ್ರೇಮಿಯೊಬ್ಬನನ್ನು ಟ್ವಿಟರ್ ಉಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಡಿಪ್ಲೋಮಾ ಯುವಕನೊಬ್ಬನಿಗೆ ಆತನ ಸ್ನೇಹಿತೆ ಕೈಕೊಟ್ಟಿದ್ದಾಳೆ. ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಬೇಸತ್ತ ಯುವಕ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್ ನಲ್ಲಿ ‘ಸಾಯುತ್ತೇನೆ’ ಎಂದು ಪೋಸ್ಟ್ ಹಾಕಿದ್ದಾನೆ.
ಕೇರಳದ ಈ ಯುವಕ ಮುಂಬೈನ ದಾದರ್ನಲ್ಲಿರುವ ಹೋಟೆಲ್ಗೆ ರೂಮ್ ಬುಕ್ ಮಾಡಿದ್ದನು. ಅಲ್ಲಿಂದಲೇ ಆತ ಪೋಸ್ಟ್ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಟ್ವಿಟರ್ಗೆ ಈ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಆತ ಎಲ್ಲಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಲಾಗಿದೆ. ನಂತರ ಹೋಟೆಲ್ನಲ್ಲಿ ಇರುವುದು ತಿಳಿದಿದೆ.
ಇನ್ಸ್ಪೆಕ್ಟರ್ ಸಂಜಯ್ ಗೋವಿಲ್ಕರ್ ಮತ್ತು ಹೋಟೆಲ್ ಮ್ಯಾನೇಜರ್ ನೇತೃತ್ವದ ತಂಡ ನಕಲಿ ಕೀಲಿಯೊಂದಿಗೆ ಕೊಠಡಿಯನ್ನು ತೆರೆದಿದೆ. ಆ ಸಮಯದಲ್ಲಿ ಯುವಕ ಕೈಯಲ್ಲಿ ಚಾಕು ಹಿಡಿದು ನಿಂತಿದ್ದ. ಕೂಡಲೇ ಆತನನ್ನು ರಕ್ಷಣೆ ಮಾಡಲಾಗಿದೆ. ಖಿನ್ನತೆಗೆ ಜಾರಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಕೌನ್ಸೆಲಿಂಗ್ ನೀಡಲಾಗಿದೆ. ಯುವಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಯುವಕರೇ ಹುಷಾರ್! ಫಸ್ಟ್ ನೈಟೇ ಶಾಕ್ ಕೊಟ್ಟ ಸುಂದರಿ- ಟೆರೇಸ್ ಹಾರಿ ಎಸ್ಕೇಪ್!
VIDEO: ಸಚಿವರು ಹುಟ್ಟು ಹಾಕಿದ್ದೇ ಹಾಕಿದ್ದು, ದೋಣಿ ಮಾತ್ರ ಕದಲಲೇ ಇಲ್ಲ: ಜಾಲತಾಣದಲ್ಲಿ ಭಾರಿ ಟ್ರೋಲ್