More

    ದೇವಾಲಯದ ಮೇಲೆ ಅರ್ಧಚಂದ್ರಾಕೃತಿ ಬರೆದ ಪೇಂಟರ್‌: ಗ್ರಾಮಸ್ಥರಿಗೆ ಸಿಕ್ಕಿಬೀಳ್ತಿದ್ದಂತೆಯೇ ಹೇಳಿದ್ದೇನು ಗೊತ್ತಾ?

    ಬಾಗಲಕೋಟೆ: ಇಲ್ಲಿಯ ಹನುಮಾನ ದೇವಸ್ಥಾನದ ಕಂಪೌಂಡ್ ಮೇಲೆ ಅರ್ಧಚಂದ್ರಾಕೃತಿ 786 ಎಂದು ಬರೆದು ಅದರ ಮೇಲೆ ಅಸಿಫ್ ಎಂದು ಯುವಕನೊಬ್ಬ ಬರೆದದ್ದು ಭಾರಿ ಕೋಲಾಹಲ ಸೃಷ್ಟಿಸಿರುವ ಘಟನೆ ನಡೆದಿದೆ.

    ಈ ರೀತಿ ದುಷ್ಕೃತ್ಯ ಎಸೆಯುತ್ತಲೇ ಯುವಕನನ್ನು ಮರಕ್ಕೆ ಕಟ್ಟಿದ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ. ಬಾಗಲಕೋಟೆ ‌ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರು ತೋಟದ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ‌

    ಅಸಿಫ್ ಮನಗೂಳಿ ಎಂಬ ಯುವಕನಿಂದ‌ ಈ ಕೃತ್ಯ ನಡೆದಿದೆ. ಈತನನ್ನು ಮರಕ್ಕೆ ಕಟ್ಟಿ ಛೀಮಾರಿ ಹಾಕಿದ ನಂತರ ತಾನು ಮಾಡಿರುವುದು ತಪ್ಪು ಎಂದು ಯುವಕ ಒಪ್ಪಿಕೊಂಡಿದ್ದಾನೆ. ಆದರೆ ತಾನು ಈ ರೀತಿ ಬೇಕಂತಲೇ ಮಾಡಿಲ್ಲ. ಬದಲಿಗೆ ಹೆಸರು ಬರೆಯೋದಕ್ಕೆ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ ಎಂದಿದ್ದಾನೆ!

    ಪ್ರ್ಯಾಕ್ಟೀಸ್ ಮಾಡೋದಕ್ಕೆ ದೇವಸ್ಥಾನವೇ ಬೇಕಿತ್ತಾ ಎಂದು ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ. ಆಸಿಫ್‌ ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ಜಮಖಂಡಿ ನಿವಾಸಿಯಾಗಿದ್ದಾನೆ. ಸದ್ಯ ಈತ ಸೇರಿದಂತೆ ಈತನ ಸಹಾಯಕ ಪೆಂಟರ್ ಗಳಾದ ಜಮಖಂಡಿ ಯ ಲಕ್ಷ್ಮಣ ಯಲ್ಲಪ್ಪ ಮಾಳಿ, ಮತ್ತೋರ್ವ ಜಮಖಂಡಿ- ಕುಂಬಾರಹಳ್ಳದ ನಿವಾಸಿ ಮಲ್ಲು ಅಂಬಿ ಮೂವರ ವಿರುದ್ಧ ಕೇಸ್‌ ದಾಖಲಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಿಜ್ಞಾನ, ವೈದ್ಯಲೋಕವನ್ನೇ ದಂಗುಬಡಿಸಿರೋ ಬಾಲಕ: ಮೊಬೈಲ್‌ ಮುಟ್ಟಿದರೆ ಸಾಕು ಡಾಟಾ ಖಾಲಿ!

    ಎಟಿಎಂ ಕಾರ್ಡ್‌ ನೆಪದಲ್ಲಿ ಲಕ್ಷಾಂತರ ರೂ. ವಂಚಿಸಿದ ‘ಬ್ಯಾಂಕ್‌ ಮ್ಯಾನೇಜರ್‌’- ಹಣ ಕಳಕೊಂಡ ಗುಜರಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts