More

    ಚೆನ್ನೈಗೆ ಎಂಟ್ರಿ ಕೊಡುತ್ತಲೇ ಸರ್ಕಾರ ಶಶಿಕಲಾಗೆ ನೀಡಿತು ಬಿಗ್​ ಶಾಕ್​! ಚಿಂತಾಕ್ರಾಂತರಾದ ಚಿನ್ನಮ್ಮ

    ಚೆನ್ನೈ: ಅಕ್ರಮ ಆಸ್ತಿ ಸಂಪಾದನೆ ಮಾಡಿ ನಾಲ್ಕು ವರ್ಷ ಜೈಲು ಸೇರಿ ಕೊನೆಗೂ ಶಶಿಕಲಾ ಬಿಡುಗಡೆಯಾಗಿದೆ. ಆಪ್ತ ಸ್ನೇಹಿತೆ ತಮಿಳುನಾಡಿನ ಅಮ್ಮಾ ಜಯಲಲಿತಾ ಅವರ ಸ್ಥಾನವನ್ನು ಏರಲು ಇತ್ತ ಶಶಿಕಲಾ ನಟರಾಜನ್​ ಎಲ್ಲಾ ರೀತಿಯ ಸರ್ಕಸ್​ ಮಾಡುತ್ತಿರುವ ನಡುವೆಯೇ ತಮಿಳುನಾಡು ಸರ್ಕಾರ ಅವರಿಗೆ ಬಿಗ್​ ಶಾಕ್​ ನೀಡಿದೆ.

    ತಮಿಳುನಾಡಿನಲ್ಲಿ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಅಲ್ಲಿ ರಾಜಕೀಯ ಗರಿಗೆದರಿದೆ. ಈ ಚುನಾವಣೆಯಲ್ಲಿ ತಮ್ಮ ತಾಕತ್ತನ್ನು ತೋರಿಸಲು ಜೈಲಿನಲ್ಲಿ ಕುಳಿತೇ ಶಶಿಕಲಾ ಎಲ್ಲಾ ರೀತಿಯ ಸ್ಕೆಚ್​ ರೆಡಿ ಮಾಡಿದ್ದಾರೆ. ಅದರಂತೆಯೇ ಅವರು ಯೋಜನೆ ರೂಪಿಸಲು ಇದೀಗ ಮುಂದಾಗಿದ್ದಾರೆ. ಜ್ಯೋತಿಷಿಯ ಸಲಹೆಯಂತೆ ಶುಭಗಳಿಗೆಯಲ್ಲಿ ಚೆನ್ನೈಗೆ ಎಂಟ್ರಿ ಕೊಟ್ಟೂ ಆಗಿದೆ.

    ಆದರೆ ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಶಶಿಕಲಾ ಸಂಬಂಧಿಗಳಾದ ಇಳವರಸಿ ಮತ್ತು ‌ಸುಧಾಕರನ್ ‌ಹೆಸರಲ್ಲಿದ್ದ 800 ಎಕರೆ ಭೂಮಿಯನ್ನು ಜಪ್ತಿ ಮಾಡಿದೆ. ತೂತುಕುಡಿ ಜಿಲ್ಲೆಯಲ್ಲಿ‌ ಇರುವ ಈ ಆಸ್ತಿಯನ್ನು ಜಪ್ತಿ ಮಾಡುವ ಮೂಲಕ ಚಿನ್ನಮ್ಮಗೆ ಸರ್ಕಾರ ಬಿಗ್​ ಶಾಕ್​ ನೀಡಿದೆ.

    ಇತ್ತೀಚಿಗೆ ಚೆನ್ನೈನಲ್ಲಿ 6 ಕಡೆಗಳಲ್ಲಿ ನೂರಾರು ‌ಕೋಟಿ ಆಸ್ತಿಗಳನ್ನು ಜಪ್ತಿ‌ ಮಾಡಲಾಗಿತ್ತು. ಅದರ ಬೆನ್ನಲ್ಲೇ ಇದೀಗ ಸುಪ್ರೀಂಕೋರ್ಟ್​ 2017ರಲ್ಲಿ ನೀಡಿದ್ದ ತೀರ್ಪಿನ ಮೇರೆಗೆ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

    ಬೆಂಗಳೂರಿಗೆ ಬೈ ಬೈ: ಜ್ಯೋತಿಷಿಯ ಅಣತಿಯಂತೆ ಚೆನ್ನೈನತ್ತ ಚಿನ್ನಮ್ಮ- ಕುಂಬಳಕಾಯಿ ಸ್ವಾಗತ

    ತಂಗಿಯ ಮದುವೆಗೆ ಮೃತಪಟ್ಟ ತಂದೆಯನ್ನು ಕರೆತಂದ ಅಕ್ಕ- ಸಹೋದರಿ ಪ್ರೀತಿಗೆ ವಿವಾಹ ಮಂಟಪದಲ್ಲಿ ಕಣ್ಣೀರಧಾರೆ

    ‘ಹಿಂದುಸ್ತಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವ ಹೆಮ್ಮೆ ನನ್ನದು- ಸ್ನೇಹಪರತೆ ಮೋದಿಯಿಂದ ಕಲಿಯಬೇಕು’

    ಕಾಂಗ್ರೆಸ್​ ನಾಯಕನಿಗೆ ವಿದಾಯ- ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ಪ್ರಧಾನಿ ನರೇಂದ್ರ ಮೋದಿ

    ಕುಡಿದ ಅಮಲಲ್ಲಿ ಮರ್ಮಾಂಗವನ್ನೇ ಕಚ್ಚಿ ತುಂಡರಿಸಿದ ಭೂಪ- ಅದನ್ನು ಹಿಡಿದುಕೊಂಡೇ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts