More

    ರೈಲಿನಿಂದ ಆಯತಪ್ಪಿ ಬಿದ್ದು ಸಾವಿನ ಬಾಯಲ್ಲಿದ್ದ ವೃದ್ಧನ ಜೀವ ಕಾಪಾಡಿದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ

    ಕಲ್ಯಾಣ್​ (ಮಹಾರಾಷ್ಟ್ರ): ಆಯಸ್ಸು ಗಟ್ಟಿಯಿದ್ದರೆ ಸಾವಿನ ಬಾಯಿಯಿಂದಲೂ ಯಾರಾದರೂ ಬಂದು ಕಾಪಾಡುತ್ತಾರೆ ಎಂಬ ಮಾತಿದೆ. ಈ ಮಾತನ್ನು ಇಲ್ಲೊಂದು ಘಟನೆ ಅಕ್ಷರಶಃ ಸಾಬೀತು ಮಾಡಿದೆ.

    ಮಹಾರಾಷ್ಟ್ರದ ಕಲ್ಯಾಣ್​ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಮನ್ಸೂರ್​ ಅಹಮದ್​ ಎಂಬ ಸುಮಾರು 75 ವರ್ಷದ ವೃದ್ಧರೊಬ್ಬರು ರಾತ್ರಿ 8 ಗಂಟೆ ಸುಮಾರಿಗೆ ಚಲಿಸುತ್ತಿರುವ ರೈಲನ್ನು ಹತ್ತಲು ಮುಂದಾಗಿದ್ದಾರೆ. ಈ ವೇಳೆ ರೈಲು ಚಲಿಸಿಬಿಟ್ಟಿದೆ. ಇದನ್ನು ತಿಳಿಯದ ಅವರು ಹತ್ತಲು ಮುಂದಾದಾಗ ಆಯತಪ್ಪಿ ಬಿದ್ದುಬಿಟ್ಟಿದ್ದಾರೆ. ಜತೆಗೆ ಅವರ ಬಳಿ ಇದ್ದ ಸಾಮಾನು ಕೂಡ ಬಿದ್ದುಹೋಗಿದೆ.

    ಅರೆ ಕ್ಷಣವಾಗಿದ್ದರೂ ರೈಲಿನ ಅಡಿಯಲ್ಲಿ ವೃದ್ಧ ಸಿಲುಕಿರುತ್ತಿದ್ದರು. ರೈಲು ಹೊರಟಿತ್ತು. ಇದೇ ವೇಳೆ ಅಲ್ಲಿದ್ದ ರಕ್ಷಣಾ ಪಡೆಯ ಸಿಬ್ಬಂದಿ ದೌಡಾಯಿಸಿ ವೃದ್ಧನನ್ನು ಎಳೆದು ಈಚೆಗೆ ತಂದಿದ್ದಾರೆ, ಜತೆಗೆ ಅವರ ಬಳಿ ಇದ್ದ ಚೀಲವನ್ನೂ ಈಚೆಗೆ ಎಳೆದಿದ್ದಾರೆ.

    ಇಬ್ಬರು ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಚಲಿಸುತ್ತಿರುವ ರೈಲಿನಲ್ಲಿ ಹತ್ತಲು ಹೋಗಿ ಫ್ಲಾಟ್​ಫಾರ್ಮ್​ನಲ್ಲೇ ಬಿದ್ದ 76 ವರ್ಷದ ವೃದ್ಧನ ಜೀವವನ್ನ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಥಾಣೆಯ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ 76 ವರ್ಷದ ವೃದ್ಧ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ವೃದ್ಧ ಚಲಿಸುತ್ತಿರುವ ರೈಲಿಗೆ ತುಂಬಾ ಹತ್ತಿರದಲ್ಲೇ ಬಿದ್ದಿದ್ದರು. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರು. ಆದರೆ ಆದರೆ ರೈಲ್ವೆ ರಕ್ಷಣಾ ಪಡೆಯ ಜೀತೇಂದ್ರ ಗುಜಾರ್​ ಹಾಗೂ ಎಸ್​ಸಿ ಯಾದವ್​ ಅವರ ಪ್ರಾಣ ಕಾಪಾಡಿದ್ದಾರೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್​ ಆಗಿದೆ.

    ಒಂದು ಕ್ಷಣವಾಗಿದ್ರೂ ಈತನ ದೇಹ ಬೈಕ್​ನಂತೆ ಪೀಸ್​ ಪೀಸ್​ ಆಗಿರ್ತಿತ್ತು: ಭಯಾನಕ ವಿಡಿಯೋ ವೈರಲ್​

    ಕೆಜಿಎಫ್​-2 ಬಿಡುಗಡೆ ದಿನ ರಜಾ ಬೇಕು… ಅಭಿಮಾನಿಗಳಿಂದ ಪ್ರಧಾನಿ ಮೋದಿಗೆ ಹೀಗೊಂದು ಮನವಿ…

    ದೊಡ್ಡಪ್ಪನಿಗೆ ಮಕ್ಕಳಿಲ್ಲ- ಅವರನ್ನು ನೋಡಿಕೊಂಡ ನಮಗೆ ಆಸ್ತಿ ಸಿಗುತ್ತಾ ಅಥವಾ ಸಾಕುಮಗನಿಗೆ ಹೋಗುತ್ತಾ?

    ಹಣಕ್ಕಾಗಿ ಪೀಡಿಸಿದರೆ ಅದು ಕಿರುಕುಳವಾಗಲ್ಲ- ‘ವಿವಾದಿತ’ ಲೇಡಿ ಜಡ್ಜ್​ನಿಂದ ಹೊರಟಿತು ಆದೇಶ

    ಅವಳ ಕೈಬಿಡಲಾರೆ, ಆದ್ರೆ ಮದ್ವೆಯಾದರೆ ಸಾಯ್ತೇನೆ ಅಂತಿದ್ದಾರೆ ಅಮ್ಮ- ಪ್ಲೀಸ್​ ಪರಿಹಾರ ಹೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts