ಪುದುಚೇರಿ: ಸಂಗೀತ ಲೋಕ ಕಂಡ ಅಪರೂಪದ ಗಾಯಕ, ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿ ನಾಳೆಗೆ (ಡಿ.25) ಮೂರು ತಿಂಗಳು ಕಳೆದಿದೆ. ಕರೊನಾ ವೈರಸ್ನಿಂದ ಚೇತರಿಸಿಕೊಂಡರೂ ನಂತರ ಕಳೆದ ಸೆಪ್ಟೆಂಬರ್ 25ರಂದು ಕೊನೆಯುಸಿರೆಳೆದಿದ್ದಾರೆ.
ಇವರಿಗಾಗಿ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಬಯಸಿದ್ದ ಪುದುಚೇರಿಯಲ್ಲಿ ಅಪೋಪುಲರ್ ಬೇಕರಿಯು ಎಸ್ಪಿಬಿ ಅವರ ಚಾಕೊಲೇಟ್ ಪ್ರತಿಮೆ ಮಾಡಿದೆ. ಅತ್ಯಂತ ಸುಂದರವಾದ ಪ್ರತಿಮೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
339 ಕಿಲೋ ತೂಗುವ ಈ ಪ್ರತಿಮೆಯು ಸಂಪೂರ್ಣ ಚಾಕಒಲೇಟ್ಮಯವಾಗಿದ್ದು, 5.8 ಅಡಿ ಎತ್ತರವಿದೆ. ಜುಕಾ ಚಾಕೊಲೇಟ್ ಕೆಫೆಯಲ್ಲಿ ಕೆಲಸ ಮಾಡುತ್ತಿರುವ ಮುಖ್ಯ ಬಾಣಸಿಗ ರಾಜೇಂದ್ರನ್ ಅವರ ನೇತೃತ್ವದಲ್ಲಿ ಈ ಪ್ರತಿಮೆಯನ್ನು ರಚಿಸಲಾಗಿದೆ. ಈ ಪ್ರತಿಮೆ ರಚಿಸಲು ತಮಗೆ 161 ಗಂಟೆಗಳು ಹಿಡಿದಿರುವುದಾಗಿ ತಂಡ ಹೇಳಿದೆ.
ಇದೇ ತಂಡ, ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಮತ್ತು ಚಲನಚಿತ್ರ ನಟ ರಜನಿಕಾಂತ್ ಅವರ ಚಾಕೊಲೇಟ್ ಪ್ರತಿಮೆಗಳನ್ನು ತಯಾರಿಸಿ ಹೆಸರು ಮಾಡಿದೆ.
ಈ ನಡುವೆಯೇ ಕೊಯಮತ್ತೂರಿನಲ್ಲಿ ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಮಿನಿ ಫಾರೆಸ್ಟ್ ನಿರ್ಮಿಸಲಾಗಿದೆ. ಎಸ್ಪಿಬಿಯವರು ಚಲನಚಿತ್ರಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ, ಸಿರತುಲಿ ಎಂಬ ಸ್ವಯಂಸೇವಾ ಸಂಸ್ಥೆಯು ಇದನ್ನು ಆರಂಭಿಸಿದೆ. ಇದರಲ್ಲಿ ಹಲವಾರು ಗಿಡಗಳನ್ನು ನೆಡಲಾಗಿದೆ.
ಹಲಸು, ಮಾವು, ತೇಗ, ರೋಸ್ವುಡ್, ಬಿದಿರು, ಮಹೋಗಾನಿ ಸೇರಿಂದ ಒಟ್ಟೂ 9 ವಿವಿಧ ಬಗೆಯ ಹಲವಾರು ಗಿಡಗಳನ್ನು ನೆಡುವ ಮೂಲಕ ಅಗಲಿದ ಗಾಯಕನಿಗೆ ನಮನ ಸಲ್ಲಿಸಲಾಗಿದೆ. ಕಳೆದ ಅಕ್ಟೋಬರ್ 15ರಂದು ಇದನ್ನು ಬಾಲಸುಬ್ರಹ್ಮಣ್ಯಂ ಅವರ ಪುತ್ರ ಪುತ್ರ ಎಸ್ಪಿ ಚರಣ್ ಮತ್ತು ಸಹೋದರಿ ಎಸ್ಪಿ ಶೈಲಜಾ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಅಮ್ಮನಿಗಾಗಿ ಪ್ರೀತಿ ಬಲಿಕೊಟ್ಟು ಮಾವನಮಗನ ಮದ್ವೆಯಾಗಿ ಜೀವನವೇ ನರಕವಾಗಿದೆ- ಏನು ಮಾಡಲಿ?
ಎದೆಯ ಮೇಲೆ ಪುರುಷರಂತೆ ಕೂದಲುಬೆಳೆಯುತ್ತಿದೆ- ಮದುವೆಯಾಗಲು ಭಯವಾಗುತ್ತಿದೆ; ಪರಿಹಾರವೇನು?
ಹನಿಮೂನ್ನಲ್ಲೂ ದೂರವಿದ್ದ, ಔಷಧ ಕೊಟ್ರೂ ಹತ್ರ ಬರಲಿಲ್ಲ- ಪತಿಯ ವಿರುದ್ಧ ಪೊಲೀಸರಲ್ಲಿ ದೂರು!