ವಿಜಯನಗರ: ಕರೊನಾ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ನಡುವೆಯೇ ವಿಜಯನಗರದ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ವಿವಾದಿತ ಘಟನೆಯೊಂದು ನಡೆದಿದೆ.
ಅದೇನೆಂದರೆ ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಜಿ. ಕರುಣಾಕರ್ ರೆಡ್ಡಿ ಅವರು ನೆರವೇರಿಸಿದ ಭೂಮಿಯ ಪೂಜೆಯಲ್ಲಿ ಆಗಿರುವ ಗಲಾಟೆ ಇದು. ಕರೊನಾ ನಿಯಮವನ್ನು ತಾವೂ ಪಾಲಿಸಿ, ಜನರಿಗೆ ಬುದ್ಧಿ ಹೇಳಬೇಕಿದ್ದ ಶಾಸಕರು ಈ ಬಿಕ್ಕಟ್ಟಿನ ದಿನಗಳಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ಅದೂ ನಿಷೇಧಾಜ್ಞೆ ಜಾರಿಯಲ್ಲಿ ಇರುವಾಗ.
ಬರೀ ಸನ್ಮಾನವಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಇಲ್ಲಿ ಆಗಿದ್ದೇ ಬೇರೆ. ಕರೊನಾ ನಿಯಮಗಳು ಜಾರಿ ಇದ್ದರೂ ಶಾಸಕ ರೆಡ್ಡಿ ಅವರು ತಮ್ಮ ಅಭಿಮಾನಿಗಳಿಂದ ಸೇಬು ಹಣ್ಣಿನ ಹಾರ ಹಾಕಿಸಿಕೊಂಡಿದ್ದಾರೆ. ಭೂಮಿಪೂಜೆಯ ನಂತರ ಅಲ್ಲಿ ಹಾಕಿರುವ ಬೋರ್ಡ್ಗೆ ಈ ಹಾರವನ್ನು ಹಾಕಲಾಗಿದೆ. ದುರದೃಷ್ಟಕರ ಸಂಗತಿ ಎಂದರೆ ಕರೊನಾದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಾರದಿಂದ ಸೇಬುಹಣ್ಣನ್ನು ತಿನ್ನಲು ಜನರು ಮುಗಿಬಿದಿದ್ದಾರೆ! ಬುದ್ಧಿ ಹೇಳಬೇಕಿರುವ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಹೇಗೆ ಎಂದು ಜನರು ಗರಂ ಆಗಿದ್ದಾರೆ.
ನೀವೂ ನೋಡಿ ಈ ವಿಡಿಯೋ:
ವಿಜಯನಗರದ ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಜಿ. ಕರುಣಾಕರ್ ರೆಡ್ಡಿ ಅವರು ನೆರವೇರಿಸಿದ ಭೂಮಿಯ ಪೂಜೆಯಲ್ಲಿ ಹಾಕಿಸಿಕೊಂಡಿರುವ ಸೇಬಿನ ಹಾರದಲ್ಲಿನ ಹಣ್ಣು ಕಿತ್ತು ತಿನ್ನಲು ಜನರು ಮುಗಿಬಿದ್ದಿದ್ದಾರೆ! pic.twitter.com/AVRH8oCawn
— Vijayavani (@VVani4U) June 13, 2021
ಡಿಎಲ್ ಪಡೆಯಲು ಇನ್ನು ಏಜೆಂಟೂ ಬೇಡ, ಆರ್ಟಿಒಗೆ ಹೋಗೋ ಅಗತ್ಯವೂ ಇಲ್ಲ- ಆನ್ಲೈನ್ನಲ್ಲಿಯೂ ಲಭ್ಯ
ಪಿಯುಸಿ ಪರೀಕ್ಷೆ ರದ್ದು- ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ: ಸಚಿವರ ಭರವಸೆಯನ್ನೂ ಕೇಳಲಿಲ್ಲ ಈಕೆ!
ಎರಡು ವರ್ಷಗಳಿಂದ ಆದಾಯ ತೆರಿಗೆ ಕಟ್ಟಿಲ್ವಾ? ಹಾಗಿದ್ದರೆ ನಿಮಗೆ ಬೀಳಲಿದೆ ದುಪ್ಪಟ್ಟು ಟಿಡಿಎಸ್