More

    11 ಮಹಿಳೆಯರ ಸಾವಿಗೆ ಕಾರಣ ಅಶೋಕ್​ ಖೇಣಿ: ಅವರನ್ನು ಬಂಧಿಸಿ ಎಂದು ಸರ್ಕಾರಕ್ಕೆ ಆಗ್ರಹ

    ಧಾರವಾಡ: ಮೊನ್ನೆ  ಶುಕ್ರವಾರ ಧಾರವಾಡದ ಬಳಿ ನಡೆದ ಭೀಕರ ಅಪಘಾತದಲ್ಲಿ ಪ್ರವಾಸಕ್ಕೆ ಹೊರಟಿದ್ದ 11 ಮಂದಿ ಮಹಿಳೆಯರು ಪ್ರಾಣ ಕಳೆದುಕೊಳ್ಳುವುದಕ್ಕೆ ನೇರ ಕಾರಣವಾಗಿರುವುದು ನೈಸ್​ (ನಂದಿ ಇನ್​ಫ್ರಾಸ್ಟ್ರಕ್ಚರ್​ ಕಾರಿಡಾರ್​) ಸಂಸ್ಥೆ ಮಾಲೀಕ ಅಶೋಕ ಖೇಣಿಯೇ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹುಬ್ಬ​ಳ್ಳಿ-ಧಾರ​ವಾಡ ಬೈಪಾಸ್‌ ರಸ್ತೆಯ ಇಟಗಟ್ಟಿ ಕ್ರಾಸ್‌ ಬಳಿ ನಡೆದಿರುವ ಈ ದುರಂತಕ್ಕೆ ಖೇಣಿ ಅವರನ್ನೇ ನೇರ ಹೊಣೆ ಮಾಡಬೇಕು ಎಂದು ಐಸಿಸಿ ಸದಸ್ಯ ದೀಪಕ ಚಿಂಚೋರೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

    ಮೊನ್ನೆ ಶುಕ್ರವಾರ ನಡೆದಿರುವ ದುರಂತ ಮಾತ್ರವಲ್ಲ. ಇದೇ ಸ್ಥಳದ ಆಸುಪಾಸಿನಲ್ಲಿ ಹಲವಾರು ಅಪಘಾತಗಳು ನಡೆದಿದ್ದು ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ರಸ್ತೆ ನಿರ್ಮಾಣ, ನಿರ್ವಹಣೆ ಹಾಗೂ ಶುಲ್ಕ ಸಂಗ್ರಹಿಸುತ್ತಿರುವ ನೈಸ್​ ಸಂಸ್ಥೆ ಮಾತ್ರ ಕಣ್ಮುಚ್ಚಿ ಕುಳಿತುಕೊಂಡಿದೆ. ಇಷ್ಟು ಬಲಿಯಾದರೂ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಎಲ್ಲಾ ಸಾವಿಗೂ ಖೇಣಿಯವರೇ ನೇರ ಹೊಣೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

    ಅಶೋಕ ಖೇಣಿ ಅವರಿಗೆ ಈ ರಸ್ತೆ ನಿರ್ಮಾಣ, ನಿರ್ವಹಣೆ ಹಾಗೂ ಶುಲ್ಕ ಸಂಗ್ರಹ ಆಧಾರದ ಮೇಲೆ ನೀಡಲಾಗಿದೆ. ಇವರು ಇಲ್ಲಿ ರಸ್ತೆಯನ್ನು ವಿಸ್ತರಣೆ ಮಾಡದಂತೆ ತಡೆಯುತ್ತಲೇ ಬಂದಿದ್ದಾರೆ. ಪ್ರತಿ ತಿಂಗಳು ಕೋಟ್ಯಂತರ ರುಪಾಯಿ ಟೋಲ್‌ ಸಂಗ್ರಹಿಸುತ್ತಿರುವ ಇವರು ಅಧಿಕಾರಿಗಳಿಗೆ ಬ್ಲ್ಯಾಕ್​ಮೇಲ್​ ಮಾಡುತ್ತಾ ವಿಸ್ತರಣೆಗೆ ತಡೆಯೊಡ್ಡುತ್ತಿದ್ದಾರೆ ಎಂದು ಚಿಂಚೋರೆ ಆರೋಪಿಸಿದ್ದಾರೆ.

    ಈ ವಿಷ​ಯ​ದಲ್ಲಿ ಖೇಣಿ ಜತೆಗೆ ಮಾತು​ಕತೆ ಆಗು​ತ್ತಿದೆ ಎಂದು ಹಲವು ವರ್ಷ​ಗ​ಳಿಂದಲೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಸಚಿವ ಜಗ​ದೀಶ ಶೆಟ್ಟರ್‌ ಹೇಳು​ತ್ತಲೇ ಬಂದಿದ್ದಾರೆ. ಆದರೆ ಏನೊಂದೂ ಕೆಲಸವಾಗಿಲ್ಲ. ಬರೀ ಆಶ್ವಾ​ಸ​ನೆಗಳಷ್ಟೇ ಸಿಕ್ಕಿವೆ. ಆದ್ದರಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಜನರ ಜೀವ ಉಳಿ​ಸಲು ಶೀಘ್ರ ರಸ್ತೆ ವಿಸ್ತರಣೆ ಅಗತ್ಯವಾಗಿದೆ ಎಂದಿರುವ ಅವರು, ಈ ಕುರಿತು ಹೈಕೋ​ರ್ಟ್‌​ನಲ್ಲಿ ಸಾರ್ವ​ಜ​ನಿಕ ಹಿತಾ​ಸಕ್ತಿ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.

    ಹೃತಿಕ್​​- ಕಂಗಾನ ನಡುವೆ ಲೈಂಗಿಕ ಸಂಬಂಧ: ಗೋಸ್ವಾಮಿ ಚಾಟ್​ ಸೋರಿಕೆ

    ಎಲೆಕ್ಟ್ರಿಕ್​ ಕೇಬಲ್​ ತಗುಲಿ ಬಸ್​ಗೆ ಬೆಂಕಿ: ಆರು ಮಂದಿ ಸಜೀವ ದಹನ

    ಪತ್ನಿ ಮೊಬೈಲ್​ನಲ್ಲಿ, ತಿನ್ನೋದ್ರಲ್ಲಿ, ಅಲಂಕಾರ ಮಾಡಿಕೊಳ್ಳೋದ್ರಲ್ಲಿ ಕಾಲ ಕಳೀತಾಳೆ: ವಿಚ್ಛೇದನ ಸಿಗತ್ತಾ?

    ನಿಮ್ಮ ಪ್ರಶ್ನೆ ಓದಿ ನಗ್ಬೇಕೋ, ಅಳ್ಬೆಕೋ ಗೊತ್ತಾಗ್ತಿಲ್ವಲ್ಲಾ ಸ್ವಾಮಿ… ಯಾವ ಕಾಲದಲ್ಲಿದ್ದೀರಿ ನೀವು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts