ಕಾಸರಗೋಡು: ತಾಸೆ ಕಲಾವಿದ, ಯುವಕ ಹೃದಯಾಘಾತದಿಂದ ಸೋಮವಾರ ದೇರಳಕಟ್ಟೆಯಲ್ಲಿ ನಿಧನರಾಗಿದ್ದಾರೆ. ಬಾಯಾರು ಕಲ್ಲಗದ್ದೆ ನಿವಾಸಿ ದೇರಳಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಮೌನೇಶ್ ಜೋಗಿ(23) ಸಾವಿಗೀಡಾದವರು.
ಬಾಯಾರು ಕಲ್ಲಗದ್ದೆಯ ವರದರಾಜ್-ನಂದಿತಾ ದಂಪತಿಯ ಪುತ್ರ ಮೌನೇಶ್ ಜೋಗಿ ಮಂಗಳೂರಿನ ತಂಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು ಭಾನುವಾರ ರಾತ್ರಿ ಕಾರ್ಯಕ್ರಮ ಮುಗಿಸಿ ಸೋಮವಾರ ಬೆಳಗ್ಗೆ ದೇರಳಕಟ್ಟೆಯ ಕೊಠಡಿಗೆ ಆಗಮಿಸಿದ ಅಲ್ಪಹೊತ್ತಿನಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಜತೆಗಿದ್ದವರು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.