ಎಲೆಕ್ಟ್ರಿಕ್​ ಕೇಬಲ್​ ತಗುಲಿ ಬಸ್​ಗೆ ಬೆಂಕಿ: ಆರು ಮಂದಿ ಸಜೀವ ದಹನ

ಜೈಪುರ: ಎಲೆಕ್ಟ್ರಿಕ್​ ಕೇಬಲ್​ಗೆ ತಾಗಿ ಬಸ್​ಗೆ ಬೆಂಕಿ ತಗುಲಿ ಆರು ಮಂದಿ ಸಜೀವವಾಗಿ ಸುಟ್ಟುಹೋಗಿರುವ ಘಟನೆ ರಾಜಸ್ಥಾನದ ಜಾಲೋರ್‌ ಜಿಲ್ಲೆಯಲ್ಲಿ ನಡೆದಿದೆ.  ಖಾಗಿ ಬಸ್​ ಒಂದು ಮಂಡೋರ್‌ನಿಂದ ಬ್ಯಾವರ್‌ಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಮಹೇಶ್​ಪುರ ಗ್ರಾಮದ ಬಳಿ ಬಸ್​ ನಿಲುಗಡೆ ಮಾಡಲಾಗಿತ್ತು. ಬಸ್​ನ ಮೇಲ್ಭಾಗ ಎಲೆಕ್ಟ್ರಕ್​ ಕೇಬಲ್​ಗೆ ತಗುಲಿತ್ತು. ಇದು ಚಾಲಕನ ಗಮನಕ್ಕೆ ಬಂದಿರಲಿಲ್ಲ. ಕೇಬಲ್​ನಲ್ಲಿ ವಿದ್ಯುತ್​ ಪ್ರಸರಣವಾಗುತ್ತಿದ್ದುದರಿಂದ ಅದು ಬಸ್​ಗೆ ತಗುಲಿದ್ದು, ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ. ಬಸ್​ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ … Continue reading ಎಲೆಕ್ಟ್ರಿಕ್​ ಕೇಬಲ್​ ತಗುಲಿ ಬಸ್​ಗೆ ಬೆಂಕಿ: ಆರು ಮಂದಿ ಸಜೀವ ದಹನ