ಬೆಂಗಳೂರು : ಬಾಡಿಗೆ ಮನೆಗೆ ಬರುವ ನೆಪದಲ್ಲಿ ಕಟ್ಟಡ ಮಾಲೀಕನನ್ನು ನಂಬಿಸಿ ಮುಂಗಡ ಹಣ ಪಾವತಿ ಮಾಡುವುದಾಗಿ ಹೇಳಿ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳ 50 ಸಾವಿರ ರೂ. ಕನ್ನ ಹಾಕಿದ್ದಾನೆ.
ಎಚ್ಎಎಲ್ನ ಬಸವನಗರದ ಮಹೇಶ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸಚಿನ್ ಶರ್ಮಾ ಎಂಬಾತನ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಒಂದರ ವೆಬ್ಸೈಟ್ನಲ್ಲಿ ಮನೆ ಬಾಡಿಗೆ ಇರುವ ಬಗ್ಗೆ ಮಹೇಶ್ ಜಾಹೀರಾತು ಹಾಕಿದ್ದರು. ಇದನ್ನು ಗಮನಿಸಿದ ಸೈಬರ್ ಕಳ್ಳ, ಜಾಹೀರಾತಿನಲ್ಲಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಮಹೇಶ್ ಸ್ವೀಕರಿಸಿದ್ದಾರೆ. ಆಗ ಮನೆ ಫೋಟೋ ಮತ್ತು ವಿಡಿಯೋವನ್ನು ಕಳುಹಿಸುವಂತೆ ವಂಚಕ ಪಡೆದಿದ್ದು, ಎಲ್ಲವನ್ನು ನೋಡಿ ತನಗೆ ಇಷ್ಟವಾಗಿದೆ. ಬಾಡಿಗೆಗೆ ಮುಂಗಡ ಪಾವತಿ ಮಾಡುತ್ತೇನೆ. ವ್ಯಾಲೆಟ್ಗೆ ಲಿಂಕ್ ಆಗಿರುವ ಮೊಬೈಲ್ ಕೊಡುವಂತೆ ಕೇಳಿದ್ದಾನೆ. ಅದಕ್ಕೆ ಒಪ್ಪಿ ಮಹೇಶ್, ಮೊಬೈಲ್ ನಂಬರ್ ಕಳುಹಿಸಿದ್ದಾರೆ.
ಆ ನಂಬರ್ಗೆ 10 ರೂ. ವರ್ಗಾವಣೆ ಮಾಡಿದ ಸೈಬರ್ ಕಳ್ಳ, ಪರೀಕ್ಷೆ ಮಾಡಲು ಹಣ ಕಳುಹಿಸಿದ್ದೆನೆ. 10 ರೂ. ಬಂದಿದ್ದರೇ 30 ಸಾವಿರ ರೂ. ಕಳುಹಿಸುವುದಾಗಿ ಹೇಳಿದ್ದಾನೆ. ಮಹೇಶ್, 10 ರೂ. ಬಂದಿರುವುದಾಗಿ ಖಚಿತ ಪಡಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಆರೋಪಿ ಸಚಿನ್, ನಿಮ್ಮ ಮೊಬೈಲ್ಗೆ ಲಿಂಕ್ ಕಳುಹಿಸುತ್ತೆನೆ. ಅದರ ಮೇಲೆ ಒಮ್ಮೆ ಒತ್ತಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ ಎಂದು ಹೇಳಿ ಲಿಂಕ್ ಕಳುಹಿಸಿದ್ದಾನೆ. ಮಹೇಶ್, ಲಿಂಕ್ ಮೇಲೆ ಒತ್ತಿ ಅದರಲ್ಲಿ ಕೇಳಿದ ಕೆಲ ಮಾಹಿತಿಯನ್ನು ತುಂಬಿದಾಗ ಹಂತ ಹಂತವಾಗಿ 50 ಸಾವಿರ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಎಚ್ಚೆತ್ತ ಮಹೇಶ್, ಖಾತೆ ಬ್ಲಾಕ್ ಮಾಡಿದ್ದಾರೆ. ವಂಚನೆಗೆ ಒಳಗಾಗಿರುವುದು ಖಚಿತವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ವೈಟ್ಫೀಲ್ಡ್ ವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಮನೆ ಸಮೀಪ ಲಸಿಕಾ ಕೇಂದ್ರ ಎಲ್ಲಿದೆ ಎಂದು ತಿಳಿಸಲಿದೆ ವಾಟ್ಸ್ಆ್ಯಪ್: ಮಾಡಬೇಕಾದುದು ಇಷ್ಟು…
ಮಗನ ಭರ್ಜರಿ ಗೆಲುವಿನ ಬೆನ್ನಲ್ಲೇ ಕೊನೆಯುಸಿರೆಳೆದ ಅಪ್ಪ- ಕೇರಳ ಕಾಂಗ್ರೆಸ್ನ ಸ್ಥಾಪಕ ಅಧ್ಯಕ್ಷ ಪಿಳ್ಳೈ ನಿಧನ