ಢಾಕಾ (ಬಾಂಗ್ಲಾದೇಶ): ಮಧ್ಯ ಬಾಂಗ್ಲಾದೇಶದಲ್ಲಿ ಎರಡು ದೋಣಿಗಳು ಮುಖಾಮುಖಿಯಾದ ಪರಿಣಾಮ ಡಿಕ್ಕಿ ಹೊಡೆದಿದ್ದು, ಈ ಘರ್ಷಣೆಯಲ್ಲಿ ಕನಿಷ್ಠ 25 ಜನರು ಮೃತಪಟ್ಟಿದ್ದಾರೆ.
ಶಿಬ್ಚಾರ್ ಪಟ್ಟಣದ ಸಮೀಪವಿರುವ ಪದ್ಮಾ ನದಿಯಲ್ಲಿ ಈ ಘಟನೆ ನಡೆದಿದೆ. ಸುಮಾರು 30 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ದೋಣಿ ಮತ್ತು ಮರಳು ಸಾಗಿಸುವ ದೋಣಿ ನಡುವೆ ಢಿಕ್ಕಿ ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆ ವೇಳೆ 25 ಮೃತದೇಹಗಳು ಪತ್ತೆಯಾಗಿದ್ದು, ಐವರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಮಿರಾಜ್ ಹೊಸೇನ್ ಮಾಹಿತಿ ನೀಡಿದ್ದಾರೆ. ನಾವು ಐದು ಜನರನ್ನು ರಕ್ಷಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಹಲವು ಮಂದಿ ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ನಾರಾಯಣಗಂಜ್ನಿಂದ ಪ್ರಯಾಣಿಸುತ್ತಿದ್ದ ದೋಣಿ ದೊಡ್ಡ ಸರಕು ಹಡಗಿಗೆ ಡಿಕ್ಕಿ ಹೊಡೆದಾಗ 30ಕ್ಕೂ ಹೆಚ್ಚು ಮೃತಪಟ್ಟಿದ್ದು, ಇದುವರೆಗೆ ಇಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ಪಳನಿಸ್ವಾಮಿ ರಾಜೀನಾಮೆ- ನಾಲ್ಕು ವರ್ಷಗಳ ಅಧಿಕಾರಕ್ಕೆ ತೆರೆ
ಮಗನ ಭರ್ಜರಿ ಗೆಲುವಿನ ಬೆನ್ನಲ್ಲೇ ಕೊನೆಯುಸಿರೆಳೆದ ಅಪ್ಪ- ಕೇರಳ ಕಾಂಗ್ರೆಸ್ನ ಸ್ಥಾಪಕ ಅಧ್ಯಕ್ಷ ಪಿಳ್ಳೈ ನಿಧನ
ಟಿಎಂಸಿಯ ಕೋಟಿವೀರನ ಎದುರು ಮನೆಕೆಲಸದಾಕೆಯ ರೋಚಕ ಗೆಲುವು-ಬಿಜೆಪಿ ಶಾಸಕಿಗೆ ಶ್ಲಾಘನೆಗಳ ಸುರಿಮಳೆ!