ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಹೆಚ್ಚುವರಿ ಗಳಿಕೆಗಾಗಿ ಗಾಂಜಾ ವ್ಯಾಪಾರ ಮಾಡಿ ಸಿಕ್ಕಿಬಿದ್ದಿದ್ದಾರೆ. ಡ್ರಗ್ ಪೆಡ್ಲರ್ಗಳಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ಗಳನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿಗಳ ಮನೆ ಇರುವ ಆರ್.ಟಿ. ನಗರದ ಬಳಿಯೇ ಇವರ ಡೀಲ್ ನಡೆಯುತ್ತಿತ್ತು!
ಶಿವಕುಮಾರ್ ಹಾಗೂ ಸಂತೋಷ್ ಎಂಬ ಪೇದೆಗಳು ಗಾಂಜಾ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರು, ಗಾಂಜಾ ಪೆಡ್ಲರ್ಗಳ ಮೂಲಕ ಗಾಂಜಾ ತರಿಸಿಕೊಂಡು ಮಾರಾಟಕ್ಕೆ ಮಾಡುತ್ತಿದ್ದರು. ಇವರು ಮೋಸ್ಟ್ ವಾಂಟೆಡ್ ಪೆಡ್ಲರ್ಗಳಾದ ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್ ಬಳಿ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇವರು, ಈ ಮೊದಲು ಡ್ರಗ್ ಪೆಡ್ಲರ್ಗಳ ಜತೆ ಸಂಪರ್ಕ ಹೊಂದಿದ್ದರು. ಆ ಸಮಯದಲ್ಲಿ ಮಾದಕ ವಸ್ತು ತರಿಸಿ ಮಾರಾಟ ಮಾಡುತ್ತಿದ್ದರು. ಒಮ್ಮೆ ಸಿಸಿಬಿ ಪೊಲೀಸರ ಕೈಗೂ ಸಿಕ್ಕಿಬಿದ್ದಿದ್ದರು ಎಂದು ತಿಳಿದುಬಂದಿದೆ.
ತಿಳಿದುಬಂದದ್ದು ಹೇಗೆ?
ಅಖಿಲ್ ರಾಜ್ ಮತ್ತು ಅಮ್ಜದ್ ಖಾನ್ ಬಳಿ ಇವರಿಬ್ಬರು ಗಾಂಜಾ ಖರೀದಿ ಮಾಡಿದ್ದರು. ಆದರೆ ದುಡ್ಡು ಕೊಟ್ಟಿರಲಿಲ್ಲ. ಇದೇ ವಿಷಯವಾಗಿ ಜಗಳವಾಗಿತ್ತು. ಪರಿಸ್ಥಿತಿ ಮಿತಿ ಮೀರಿ ಇವರಿಬ್ಬರೂ ಪೆಡ್ಲರ್ಗಳ ಹಲ್ಲೆಗೆ ಮುಂದಾಗಿದ್ದರು. ಇವೆಲ್ಲವೂ ಮುಖ್ಯಮಂತ್ರಿಗಳ ಮನೆ ಸಮೀಪ ನಡೆದಿದೆ. ಆ ಸಂದರ್ಭದಲ್ಲಿ ಸಿಎಂ ಮನೆ ಬಳಿ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಈ ಬಗ್ಗೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ. ಆಗ ವಿಷಯ ಬೆಳಕಿಗೆ ಬಂದಿದೆ!
ಇವರು ಮುಖ್ಯಮಂತ್ರಿಗಳ ನಿಯೋಜನೆಗೆ ಇರುವ ವಿಷಯ ತಿಳಿದಾಗ ಖುದ್ದು ಪೊಲೀಸರಿಗೇ ಶಾಕ್ ಆಗಿದೆ.
ವಿಚ್ಛೇದನದಿಂದ ಭಾರಿ ಸುದ್ದಿಮಾಡಿದ್ದ ಆಮೀರ್ ದಂಪತಿ ಮತ್ತೆ ಒಂದಾದ್ರು! ಕಾರಣ ಕೇಳಿ ‘ವಿಚಿತ್ರ’ ಎಂದ ನೆಟ್ಟಿಗರು…
ಮಾವನ ಎದುರಾಳಿಯಾದ ಸೊಸೆ? ಬಿಜೆಪಿ ತತ್ವಕ್ಕೆ ಮನಸೋತು ಎಸ್ಪಿ ಬಿಟ್ಟ ಮುಲಾಯಂ ಮಗನ ಪತ್ನಿ…