ಬೆಂಗಳೂರು: ಬಿಗ್ಬಾಸ್ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರು ಮತ್ತೆ ಸುದ್ದಿಯಲ್ಲಿದ್ದಾರೆ. ಸರ್ಪ್ರೈಸ್ ಆಗಿ ಮದುವೆಯಾಗಿ, ಮದುವೆಯಾದ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿ ನಂತರ ಅಲ್ಲಿಂದ ಆತ್ಮಹತ್ಯೆಗೆ ಯತ್ನಿಸಿ… ಹೀಗೆ ಸಾಲು ಸಾಲಾಗಿ ಸುದ್ದಿಯಾಗಿದ್ದ ಚೈತ್ರಾ ಈಗ ಮತ್ತೊಮ್ಮೆ ಜನರ ಗಮನ ಸೆಳೆದಿದ್ದಾರೆ.
ಅದು ಫೇಸ್ಬುಕ್ಗೆ ಪೋಸ್ಟ್ ಮಾಡುವ ಮೂಲಕ. ಅದರಲ್ಲಿಯೂ ಸಕಾರಾತ್ಮಕವಾಗಿ ಚೈತ್ರಾ ಪೋಸ್ಟ್ ಮಾಡಿರುವ ಕಾರಣ, ಅವರ ಅಭಿಮಾನಿಗಳಿಗೆ ಭಾರಿ ಸಂತೋಷವಾಗಿದೆ.
ಫೇಸ್ಬುಕ್ನಲ್ಲಿ ಹೊಸ ಪ್ರೊಫೈಲ್ ಫೋಟೋ ಹಾಕಿಕೊಂಡು ಈ ಪೋಸ್ಟ್ ಮಾಡಿದ್ದಾರೆ ಚೈತ್ರಾ. ಅದರಲ್ಲಿ ಅವರು ‘ಬದುಕು ಮತ್ತೆ ಕೈಬೀಸಿ ಕರೆದಾಗ, ಎರಡೆರಡು ಸ್ಯಾನಿಟೈಸರ್ ಬಾಟಲಿಗಳನ್ನು ಹೆಚ್ಚಾಗಿ ಇರಿಸಿಕೊಂಡು ಮುಂದೆ ಸಾಗಿ. ದೇಹ ಸೇರಿ ಸಾವಿನ ದವಡೆಗೆ ನೂಕುವ ಕ್ರಿಮಿಯು, ಬದುಕಿನ ಮಹತ್ವವನ್ನೂ ತಿಳಿಸುವಲ್ಲಿ ಯಶಸ್ವಿಯಾಗುತ್ತದೆ. ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಆಭಾರಿ…’ ಎಂದು ಬರೆದಿದ್ದಾರೆ.
‘ಚೈತ್ರಾ ಅಂದ್ರೆ ಹೀಗಿರ್ಬೆಕು ಹೀಗೆ ಗಟ್ಟಿಯಾಗಿ ಖುಷಿಯನ್ನೇ ನಿರಂತರ ಹುಡುಕಿ… ಹೊಸ ಕನಸು ಮತ್ತು ಯೋಜನೆಗಳನ್ನು ಇಟ್ಟುಕೊಂಡು ಮುನ್ನೆಡೆಯಿರಿ. ನಿಮ್ಮಲ್ಲಿಯ ಅಪಾರ ಶಕ್ತಿಯ ಮೇಲೆ ನಂಬಿಕೆ ಇರಲಿ… ನೀವು ಆರೋಗ್ಯವಾಗಿರುವುದು ಕೇಳಿ ಸಂತೋಷವಾಯಿತು. ನಿಲುವು ಬೇರೆಯಾದರು ಬದುಕ ಒಲುಮೆ ಒಂದೆಯಲ್ಲವೇ.? ದೇವರ ಆಶೀರ್ವಾದವಿರಲಿ. ನೋವು ನಲಿವು ಯಾವುದು ಶಾಶ್ವತವಲ್ಲ ಅಂದುಕೊಂಡಂಗೆ ಒಂದೂ ನಡೆಯಲ್ಲ. ಆದ್ರೂ ನಗ್ ನಗ್ತಾ ಬಾಳಬೇಕು. ಒಳ್ಳೆ ಕಾಲಕ್ಕಾಗಿ ಕಾಯಬೇಕು… ’ ಎಂದು ಅನೇಕ ಮಂದಿ ಕಮೆಂಟ್ನಲ್ಲಿ ತಿಳಿಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಆತ್ಮಹತ್ಯೆ ಯತ್ನ! ಆಕೆಯ ತಂದೆ ಬಿಚ್ಚಿಟ್ಟ ಕಾರಣ ಇಲ್ಲಿದೆ
ಇನ್ನೂ ಸುಂದರಿಯಾಗಲು ಚಿಕಿತ್ಸೆ ಪಡೆದ ಖ್ಯಾತ ನಟಿ ಕನ್ನಡಿ ನೋಡಿದಾಗ ಮೂರ್ಛೆ ಹೋದಳು!
ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್ ಹಾಕ್ಬೋದಾ?
ಅದು ಪ್ರೀತಿಯಲ್ಲಮ್ಮಾ… ಕಾಮ… ಏಳು ವರ್ಷ ದೇಹ ಒಪ್ಪಿಸುವಾಗ ಎಲ್ಲೋಗಿತ್ತು ನಿನ್ನ ಬುದ್ಧಿ?
ಕರೊನಾ ಎಫೆಕ್ಟ್: ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಪುಸ್ತಕ ನೋಡಿ ಪರೀಕ್ಷೆ ಬರೀಬೋದು!