ಬೆಂಗಳೂರು: ಸಿಡಿ ನಾ ಅದ್ಯಾವುದು ನಂಗೊತ್ತಿಲ್ಲ, ನಿಮ್ಗೆ ಚೆನ್ನಾಗಿ ಗೊತ್ತಿರಬೇಕು…
ಹೀಗೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗುತ್ತಲೇ ಪ್ರಶ್ನಿಸಿದ ಪತ್ರಕರ್ತೆಯತ್ತಲೇ ನಗೆ ಚಟಾಕಿ ಹಾರಿಸಿದರೆ, ಸಿಎಂ ಸುತ್ತಲಿದ್ದವರ ಜತೆಗೆ ಪತ್ರಕರ್ತೆ ಖೊಳ್ಳನೆ ನಕ್ಕರು.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಪಕ್ಷದ ಶಾಸಕರ ಜತೆಗೆ ಮ್ಯಾರಥಾನ್ ಮೀಟಿಂಗ್ ಮುಗಿಸಿಕೊಂಡು ಹೊರ ಬಂದ ಸಿಎಂ ಬಿಎಸ್ ವೈ ಲಹರಿ ಮೂಡ್ನಲ್ಲಿದ್ದರು.
ಮಾಧ್ಯಮದವರ ಬಳಿ ಬಂದು ಸಭೆ ಕರೆದ ಉದ್ದೇಶ, ಚರ್ಚೆ, ಸೂಚನೆ ಎಲ್ಲವನ್ನು ಚುಟುಕಾಗಿ ಹೇಳಿ ಫಲಪ್ರದವಾಗಿದೆ ಎಂದು ಹೇಳು ಹೊರಟರು.
ಈ ವೇಳೆ ಸಿಡಿಯಲ್ಲಿರುವ ಯುವತಿ 2ನೇ ವಿಡಿಯೋ ಬಿಡುಗಡೆ ಮಾಡಿದ್ದರತ್ತ ಪತ್ರಕರ್ತೆ ಗಮನಸೆಳೆದಾಗ ನಗೆ ಬಾಂಬ್ ಸಿಡಿಸಿದ ಬಿ ಎಸ್ ವೈ ಆ ಬಗ್ಗೆ ಏನನ್ನೂ ಹೇಳದೆ ಹೊರಟರು.
ನನ್ನ ಜೇಬಲ್ಲಿ ಬಾಂಬ್ ಇದೆ… ತಡ್ಕೊಳಿ… ಸದ್ಯ ಗಪ್ಚುಪ್ ಇದ್ದೇನೆ… ಹೊರಹಾಕಿದ್ರೆ ಅಷ್ಟೇ…
ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡೋದು ನಮ್ ಕರ್ತವ್ಯ; ಸಿಡಿ ಲೇಡಿ ನೆರವಿಗೆ ನಿಂತ ಸಚಿವೆ ಜೊಲ್ಲೆ
ಆಗ ಸಿಡಿ ಕೇಸ್ ಅಂದ್ರು… ಈಗ ಒಂದೇ ಹೆಂಡ್ತಿ ಅಂದ್ರು… ಒಟ್ನಲ್ಲಿ ಪಲಾಯನ ಮಾಡಲು ಏನೋ ಒಂದ್ ಬೇಕು…