ಛತ್ತರಪುರ್ (ಮಧ್ಯಪ್ರದೇಶ): ಮದುವೆಯಾಗುವವರೆಗೂ ಸುಮ್ಮನಿದ್ದು ನಂತರ ಪತಿಗೆ ಕೈಕೊಟ್ಟ ಯುವತಿಯೊಬ್ಬಳು ಪ್ರಿಯಕರನ ಜತೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಛತ್ತರಪುರ್ನಲ್ಲಿ ನಡೆದಿದೆ. ಓಡಿಹೋಗಿರುವುದು ಮಾತ್ರವಲ್ಲದೇ ಸುಮಾರು ಐದು ಲಕ್ಷ ರೂಪಾಯಿ ಬೆಲೆ ಬಾಳು ಒಡವೆ ಮತ್ತು ಹಣವನ್ನೂ ತೆಗೆದುಕೊಂಡು ಪರಾರಿಯಾಗಿದ್ದಾಳೆ!
ತವರು ಮನೆಗೆ ಹೋಗಿ ಬರುವುದಾಗಿ ಹೇಳಿದಾಕೆಗಾಗಿ ಪತಿ ಕಾಯುತ್ತ ಕುಳಿತಿದ್ದಾನೆ. ಎಷ್ಟು ದಿನವಾದರೂ ಬರದಾಗ ವಿಷಯ ಬೆಳಕಿಗೆ ಬಂದಿದೆ. ಅಷ್ಟೊತ್ತಿಗಾಗಲೇ ಈ ಯುವತಿ ಪರಾರಿಯಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೀಗೆ ಪರಾರಿಯಾಗಿರುವ ಯುವತಿಯ ಹೆಸರು ಮೂರ್ತಿ ರೆಕ್ವಾರ್. 20 ವರ್ಷದ ಈ ಯುವತಿಯ ಮದುವೆ ಕಳೆದ ಡಿಸೆಂಬರ್ನಲ್ಲಿ ರಾಹುಲ್ ಎಂಬ ಯುವಕನ ಜತೆ ಆಗಿತ್ತು. ಮದುವೆಯಾಗುವವರೆಗೂ ತನ್ನ ಪ್ರೇಮದ ವಿಷಯವನ್ನು ಬಚ್ಚಿಟ್ಟಿದ್ದಳೋ ಅಥವಾ ಮನೆಯವರು ಒತ್ತಾಯದಿಂದ ಈ ಮದುವೆ ಮಾಡಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿಕೊಂಡಿದ್ದಾಳೆ ಯುವತಿ.
ನಂತರ ಸಂಪ್ರದಾಯದಂತೆ ಮದುಮಗಳನ್ನು ಮದುವೆಯಾದ 18ನೇ ದಿನಕ್ಕೆ ತವರಿಗೆ ಕಳಿಸಬೇಕು. ಮೊದಲೇ ಪ್ಲ್ಯಾನ್ ಮಾಡಿಕೊಂಡು ಇಟ್ಟುಕೊಂಡಿದ್ದ ಮೂರ್ತಿ ರೆಕ್ವಾರ್, ತವರು ಮನೆಗೆ ಹೋಗಿದ್ದಾರೆ. ಅಲ್ಲಿಂದ ವಾಪಸ್ ಗಂಡನ ಮನೆಗೆ ವಾಪಸ್ ತೆರಳುವುದಾಗಿ ಹೇಳಿ ಹೊರಟಿದ್ದಾಳೆ.
ಇತ್ತ ಹೊಸ ಪತ್ನಿಗಾಗಿ ಕಾದುಕುಳಿತಿದ್ದ ರಾಹುಲ್ ಆಕೆಗಾಗಿ ಕಾದು ಕಾದು ಸುಸ್ತಾಗಿದ್ದಾನೆ. ನಂತರ ನೇರವಾಗಿ ಪತ್ನಿಗೆ ತವರಿಗೆ ಹೋಗಿದ್ದಾನೆ. ಪತಿಯ ಮನೆಗೆ ಹೋದಾಕೆ ಅಲ್ಲಿಯೂ ಹೋಗದುದ್ದನ್ನು ಕಂಡು ಎರಡೂ ಕುಟುಂಬದವರಿಗೆ ದಿಗಿಲಾಗಿದೆ.
ಕೇಸ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತನಿಖೆ ಕೈಗೊಂಡ ಪೊಲೀಸರಿಗೆ ಯುವತಿ ಅದೇ ಗ್ರಾಮದ ಭಜ್ಜು ಯಾದವ್ ಎಂಬ ಪ್ರಿಯಕರನ ಜತೆ ಹೋಗಿರುವುದು ತಿಳಿದಿದೆ. ಹೋಗುವಾಗ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 20 ಸಾವಿರ ರೂ. ನಗದು ತೆಗೆದುಕೊಂಡು ಹೋಗಿರುವುದು ತಿಳಿದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
VIDEO: ಬೆಲ್ಲಿ ಡಾನ್ಸ್ ಹರಿಬಿಟ್ಟು ಅಭಿಮಾನಿಗಳ ಹುಚ್ಚೆಬ್ಬಿಸಿದ ನಟಿ ಜಾಹ್ನವಿ ಕಪೂರ್
ನಾನು ಅರ್ಜಿ ಹಾಕಿರಲಿಲ್ಲ, ಸೋತಿದ್ರೆ ಮಂತ್ರಿಯಾಗ್ತಿದ್ದೆಯೇನೋ- ರೇಣುಕಾಚಾರ್ಯ ಕಣ್ಣೀರು
ಗಂಡನ ಹಿಂಸೆಯಿಂದಾಗಿ ತವರು ಸೇರಿ ವಿವಾಹಿತನ ಪ್ರೇಮಪಾಶಕ್ಕೆ ಸಿಲುಕಿಬಿಟ್ಟಿದ್ದೇನೆ: ಪ್ಲೀಸ್ ಪರಿಹಾರ ಹೇಳಿ
ನನ್ನಂತೆ ಹೊಳೆಯಬೇಕೆ? ಹಾಗಿದ್ದರೆ ಹೀಗೆ ಮಾಡಿ ಎಂದಳು ಈ ಸುಂದರಿ: ಓದಿ ‘ವ್ಯಾಕ್’ ಅನ್ನಬೇಡಿ!
ಕೆಜಿಎಫ್ 2 ಟೀಸರ್ ಬಿಡುಗಡೆ ಬೆನ್ನಲ್ಲೇ ಯಶ್ಗೆ ಬಿಗ್ ಶಾಕ್- ನೋಟಿಸ್ ನೀಡಿದ ಆರೋಗ್ಯ ಇಲಾಖೆ!