ಚೆನ್ನೈ: ಆಸ್ಕರ್ ಪ್ರಶಸ್ತಿ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ 99 ಹಾಡುಗಳ ಧ್ವನಿಸರಣಿ ಬಿಡುಗಡೆ ಸಮಾರಂಭದಲ್ಲಿ ನಡೆದ ಘಟನೆಯೊಂದು ಕೆಲ ಕ್ಷಣ ಎಲ್ಲರಲ್ಲಿಯೂ ಆತಂಕ ಸೃಷ್ಟಿಸಿದ ಘಟನೆ ಚೆನ್ನೈನಲ್ಲಿ ನಡೆಯಿತು.
ಇವರು ರಚಿಸಿ ಕಂಪೋಸ್ ಮಾಡಿರುವ ಧ್ವನಿಸರಣಿ ಬಿಡುಗಡೆ ಸಮಾರಂಭ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಿರೂಪಕಿಯು ತಮಿಳಿನಲ್ಲಿಯೇ ಮಾತನಾಡುತ್ತಿದ್ದರು. ಆದರೆ ರೆಹಮಾನ್ ಅವರು ವೇದಿಕೆ ಏರುತ್ತಿದ್ದಂತೆಯೇ ನಿರೂಪಕಿ ಹಿಂದಿಯಲ್ಲಿ ಮಾತನಾಡಲು ಶುರು ಮಾಡಿದರು.
ಇದನ್ನು ಕೇಳಿದ ರೆಹಮಾನ್ ಅವರು, ಹಿಂದಿ ಎಂದು ಪ್ರಶ್ನಾರ್ಥಕವಾಗಿ ನಿರೂಪಕಿಯತ್ತ ನೋಡಿ ವೇದಿಕೆಯಿಂದ ಕೆಳಕ್ಕೆ ಹೋದರು. ಅವರು ನಗುತ್ತಾ ಹೋದರೂ, ಕೆಲವು ಕ್ಷಣ ನಿರೂಪಕಿ ಸೇರಿದಂತೆ ಅಲ್ಲಿದ್ದವರು ವಿಚಲಿತರಾದದ್ದು ನಿಜ. ಆಗ ರೆಹಮಾನ್ ಅವರು, ನೀವು ತಮಿಳಿನಲ್ಲೇ ಮಾತನಾಡಬೇಕು ಎಂದು ನಾನು ಹೇಳಿದ್ದೀನಲ್ವಾ? ಎಂದು ನಿರೂಪಕಿಯೊಂದಿಗೆ ಪ್ರಶ್ನಿಸಿದರು. ಆಗ ಅವರು ಸ್ವಲ್ಪ ಕಕ್ಕಾಬಿಕ್ಕಿಯಾದಂತೆ ಕಂಡರು.
ಕೂಡಲೇ ರೆಹಮಾನ್ ಅವರು, ಇವೆಲ್ಲಾ ಜೋಕ್ಗಾಗಿ ಅಷ್ಟೇ. ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದರು. ವಾಸ್ತವವಾಗಿ ಅವರು ಈ ರೀತಿ ಮಾಡಿದ್ದು ಕೂಡ ತಮಾಷೆಗಾಗಿಯೇ. ಇದಕ್ಕೆ ಕಾರಣ, ಹಿಂದಿ ಹೇರಿಕೆಯ ಬಗ್ಗೆ ದೇಶಾದ್ಯಂತರ ಭಾರಿ ಸುದ್ದಿಯಾಗುತ್ತಿರುವ ಹಿನ್ನೆಲೆಯಲ್ಲಿ ನಿರೂಪಕಿ ಹಿಂದಿ ಮಾತನಾಡಿದ್ದರಿಂದ ರೆಹಮಾನ್ ಅವರು ಈ ರೀತಿಯಾಗಿ ತಮಾಷೆಗಾಗಿ ನಕ್ಕು ವೇದಿಕೆ ಬಿಟ್ಟು ಹೋಗಿರುವುದು ಗುಟ್ಟಾಗಿ ಉಳಿಯಲಿಲ್ಲ. ಎಲ್ಲಿಯೂ ಯಾರೂ ಬಾಯಿ ಬಿಟ್ಟು ಹೇಳದಿದ್ದರೂ ಎಲ್ಲರಿಗೂ ಸ್ವಲ್ಪ ಹೊತ್ತಿನ ಬಳಿಕ ರೆಹಮಾನ್ ಅವರು ಅದೇ ಕಾರಣಕ್ಕಾಗಿ ತಮಾಷೆ ರೂಪದಲ್ಲಿ ವೇದಿಕೆ ಬಿಟ್ಟು ಹೋದದ್ದು ಎಂದು ತಿಳಿಯಿತು.
“ನಾನು ತಮಾಷೆಗಾಗಿ ಮಾಡಿದೆ” ಎಂದು ಹೇಳಿದಾಗ ನಿರೂಪಕಿ ಉಸಿರುಬಿಟ್ಟು, ನಿಮ್ಮಂತಹ ದಂತಕಥೆಗಳ ಕೈಯಿಂದ ತಮಾಷೆಗೊಳಗಾಗುವುದು ಕೂಡಾ ಪ್ರಶಂಸೆಯಾಗಿದೆ” ಎಂದು ಪ್ರತಿಕ್ರಿಯಿಸಿದರು.
View this post on Instagram
ತಿನ್ನುವುದಕ್ಕಾಗಿ ಬಸವನಹುಳು ಖರೀದಿಸಿದಳು: ಮುತ್ತಿನಿಂದ ರಾತ್ರೋ ರಾತ್ರಿ ಲಕ್ಷಾಧೀಶ್ವರೆ ಆದಳು!
ಅಕ್ರಮ ಸಂಬಂಧ ಇಟ್ಟುಕೊಂಡ ಪತ್ನಿ ವಿಚ್ಛೇದನವನ್ನೂ ಕೊಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?
ಮೇಟಿ ಪ್ರಕರಣ ಮುಚ್ಚಿ ಹಾಕುವಾಗ ನೀರವ್ ಮೋದಿ, ವಿಜಯ ಮಲ್ಯ ನೆನಪಾಗಿಲ್ವಾ? ಸಿದ್ದುಗೆ ಗುದ್ದು ಕೊಟ್ಟ ಗೃಹ ಸಚಿವ