More

    ಮಧುಮೇಹದಿಂದ ಉಂಟಾಗುವ ಕಾಲುಗಳ ಉರಿಯೂತಕ್ಕೆ ಇಲ್ಲಿದೆ ಆಯುರ್ವೇದದ ಮದ್ದು…

    ಮಧುಮೇಹದಿಂದ ಉಂಟಾಗುವ ಕಾಲುಗಳ ಉರಿಯೂತಕ್ಕೆ ಇಲ್ಲಿದೆ ಆಯುರ್ವೇದದ ಮದ್ದು...ಪ್ರಶ್ನೆ: ನನಗೆ 75 ವರ್ಷ. ಮಧುಮೇಹ, ಬಿಪಿ ಮತ್ತು ಥೈರಾಯ್ಡ್ ಸಮಸ್ಯೆ ಇದೆ. ಶುಗರ್, ಬಿಪಿಗೆ ಔಷಧ ತೆಗೆದುಕೊಳ್ಳುತ್ತಿದ್ದೇನೆ. ಥೈರಾಯ್ಡ್​ಗೆ ಆಯುರ್ವೇದ ಔಷಧ ತೆಗೆದುಕೊಳ್ಳುತ್ತಿದ್ದೆ. ಹೆಚ್ಚು ಪ್ರಯೋಜನವಾಗಲಿಲ್ಲ.

    ಒಂದೂವರೆ ವರ್ಷದ ಹಿಂದೆ ನನಗೆ ಕಾಲು ಉರಿ ಬರುವುದು ಶುರುವಾಯಿತು. ಚರ್ಮ ಕಾಲಿನಲ್ಲಿ ಎದ್ದು ಮುಳ್ಳು ಕಲ್ಲು ಚುಚ್ಚಿದಂತೆ ಆಗುತ್ತಿತ್ತು. ಐದು ತಿಂಗಳ ಹಿಂದೆ ಬಿದ್ದು ಏಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದೆ.

    ಡಾಕ್ಟರ್​ಗೆ ತೋರಿಸಿದಾಗ ಅದು ಶುಗರ್, ಮೂಲವ್ಯಾಧಿಯಂತೆಯೇ ಎಂದು ಮಾತ್ರೆ ಕೊಟ್ಟಿದ್ದರು. ಈಗ ಕಾಲಿನಲ್ಲಿ ಏಳುತ್ತಿದ್ದ ಚರ್ಮ ನಿಂತಿದೆ. ಕೆಂಪಾಗುವುದೂ ಇಲ್ಲ. ಆದರೆ, ಉರಿ ಹಾಗೆಯೇ ಇದೆ. ಕಾಲಿಟ್ಟರೆ ಎತ್ತುವಾಗ ಅಂಟಿಕೊಂಡಂತೆ ಆಗುತ್ತದೆ. ಆಯಿಂಟ್‍ಮೆಂಟ್ ಹಚ್ಚಿದರೆ ಉರಿ ಜಾಸ್ತಿ ಆಗುತ್ತದೆ. ಬೆರಳು ಮಡಚಲು ಆಗುವುದಿಲ್ಲ. ನಡೆಯಲು ತೊಂದರೆ ಆಗುತ್ತಿದೆ. ಇದಕ್ಕೆ ಏನಾದರೂ ಔಷಧ ಇದ್ದಲ್ಲಿ ತಿಳಿಸಿ. ಹಾಗೆಯೇ ಹೈಪರ್ ಥೈರಾಯ್ಡ್​ಗೂ ಔಷಧ ತಿಳಿಸಿ.

    ಉತ್ತರ: ಕಾಲುಗಳಲ್ಲಿ ಉರಿ ಬರುವುದು ಮಧುಮೇಹದಿಂದ ಉಂಟಾಗುವ ನ್ಯೂರೋಪತಿಯಿಂದ ಇರಬಹುದು. ನರಗಳ ಸಮಸ್ಯೆಯಿಂದಾಗಿ ಹೀಗಾಗುತ್ತದೆ. ಪ್ರತಿದಿನ ಚಂದನಾದಿ ತೈಲವನ್ನು ಕಾಲಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಂಡು ಬೆಚ್ಚಗಿನ ನೀರಿನಲ್ಲಿ ಕಾಲಿಟ್ಟು ಕುಳಿತುಕೊಳ್ಳಿ.

    ನೆಲ್ಲಿಕಾಯಿ ಪುಡಿ, ಗುಲಾಬಿ ದಳಗಳ ಪುಡಿಯನ್ನು ಗುಲಾಬಿ ಜಲದಲ್ಲಿ (ರೋಸ್​ ವಾಟರ್​)  ಬೆರೆಸಿ ಕಾಲಿಗೆ ಲೇಪಿಸಿ ಒಂದು ಗಂಟೆ ಸಮಯ ಬಿಟ್ಟು ತೊಳೆದುಕೊಳ್ಳಿ.

    ಥೈರಾಯ್ಡ್ ತೊಂದರೆಗೆ ಈಗ ತೆಗೆದುಕೊಳ್ಳುತ್ತಿರುವ ಔಷಧ ಮುಂದುವರಿಸಿ. ಹಾರ್ಮೋನು ಸ್ರವಿಸುವಿಕೆಯನ್ನು ಸರಿಪಡಿಸಲು ಆಯುರ್ವೇದದಲ್ಲಿ ಅಷ್ಟು ಪರಿಣಾಮಕಾರಿಯಾದ ಔಷಧ ಲಭ್ಯವಿಲ್ಲ. ಆಯುರ್ವೇದದ ಔಷಧಗಳು ಪೂರಕವಾಗಿ ಮಾತ್ರ ಕೆಲಸ ಮಾಡಬಲ್ಲವು. ಬಿಪಿ, ಮಧುಮೇಹಕ್ಕೂ ಈಗ ಸೇವಿಸುತ್ತಿರುವ ಮಾತ್ರೆ ಮುಂದುವರೆಸಿ.

    ಆಹಾರದಲ್ಲಿ ಸಿಹಿ, ಉಪ್ಪು, ಕರಿದ ಪದಾರ್ಥಗಳ ಸೇವನೆ ಬೇಡ. ಕುಡಿಯುವ ನೀರಿಗೆ ಕಾಮಕಸ್ತೂರಿ ಬೀಜ ಇಲ್ಲವೇ ಲಾವಂಚದ ಬೇರು ಹಾಕಿಟ್ಟು ನೀರು ಕುಡಿಯಿರಿ.

    ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…

    ಅನಿಯಮಿತ ಮೂತ್ರ ಸಮಸ್ಯೆಯೆ?ಆಯುರ್ವೇದ ವೈದ್ಯರ ಪರಿಹಾರ ಇಲ್ಲಿದೆ…

    ಅಧಿಕ ಬೊಜ್ಜಿನಿಂದ ಕೊರಗುತ್ತಿದ್ದೇನೆ- ಆಯುರ್ವೇದ ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts