ಚಿಕ್ಕೋಡಿ: ಕೇವಲ 20 ರೂಪಾಯಿಗಾಗಿ 4 ವರ್ಷದ ಬಾಲಕಿಯನ್ನು ಮಹಿಳೆ ಬಾವಿಗೆ ನೂಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಜಾಗನೂರು ಹೊರ ವಲಯದಲ್ಲಿರುವ ತೋಟದಲ್ಲಿ ಜರುಗಿದೆ.
ದಿವ್ಯಾ ವಿನೋದ ಉಗಡೆ (4) ಕೊಲೆಯಾದ ಬಾಲಕಿ. ಹಂತಕಿ ಪೂಜಾ ದತ್ತರಾವ್ ಕಾಂಬಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ರಾಮಪ್ಪ ಕಳ್ಳೆಪ್ಪಾ ಖಾನಾಪೂರೆ ಎಂಬುವವರ ಸಂಪರ್ಕಕ್ಕೆ ಬಂದ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಕಬ್ಬು ಕಡಿಯುವ ಕೆಲಸಗಾರರ ತಂಡ 7 ತಿಂಗಳ ಹಿಂದೆ ಗ್ರಾಮಕ್ಕೆ ಬಂದು ನೆಲೆಸಿತ್ತು. ರಾಮಪ್ಪ ಅವರ ಟ್ರ್ಯಾಕ್ಟರ್ನಲ್ಲೇ ಇವರು ಆಗಮಿಸಿದ್ದರು.
ಇದನ್ನೂ ಓದಿ VIDEO| ಅನುಮಾನಾಸ್ಪದ ಸೂಟ್ಕೇಸ್ಗೆ ಬೆಚ್ಚಿಬಿದ್ದ ಚಿಕ್ಕಮಗಳೂರು ಜನತೆ
ಕಬ್ಬು ಕಟಾವ್ ಮಾಡಿ ಮತ್ತೆ ಹಿಂದಿರುಗಲು ಸಜ್ಜಾಗಿದ್ದರು. ಅಷ್ಟರಲ್ಲಿ ಕರೊನಾ ವೈರಸ್ ಹಾವಳಿಯಿಂದ ಲಾಕ್ಡೌನ್ ಘೋಷಣೆಯಾದ್ದರಿಂದ ಗ್ರಾಮದಲ್ಲೇ ಉಳಿದಿದ್ದರು.
ದಿವ್ಯಾ ವಿನೋದ ಉಗಡೆಗೆ ಅಂಗಡಿಯಿಂದ ಸಾಮಾನು ತರಲು ಆಕೆಯ ತಾಯಿ 20 ರೂಪಾಯಿ ಕೊಟ್ಟಿದ್ದರು. ಬಾಲಕಿ ಕೈಯಲ್ಲಿ ಹಣ ಹಿಡಿದು ಅಂಗಡಿಗೆ ತೆರಳುತ್ತಿರುವುದನ್ನು ನೋಡಿದ ಪೂಜಾ ದತ್ತರಾವ್ ಕಾಂಬಳೆ ಬಾಲಕಿಯಿಂದ ಹಣ ಕಿತ್ತುಕೊಂಡು ಆಕೆಯನ್ನು ಬಾವಿಗೆ ನೂಕಿ ಕೊಲೆ ಮಾಡಿದ್ದಾಳೆ. ಚಿಕ್ಕೋಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.