More

    ಆಕ್ಟರ್​ಗಳ ಅಡ್ಡದಲ್ಲಿ ಕೂತ ರಿಷಭ್​ ಶೆಟ್ಟಿ; ಸಿನಿಮಾ ಕುರಿತು ಚರ್ಚೆ

    ಮುಂಬೈ: ರಿಷಭ್​ ಶೆಟ್ಟಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡಿಂಗ್​ನಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ರಿಷಭ್​, ಬಾಲಿವುಡ್​ ನಟ ನವಾಜುದ್ದೀನ್​ ಸಿದ್ದೀಖಿ ಜತೆಗೆ ಭಾಗವಹಿಸಿದ್ದಾರೆ. ಆ ನಂತರ ಫಿಲ್ಮಿ ಕಂಪ್ಯಾನಿಯನ್​ ಭಾರತೀಯ ಚಿತ್ರರಂಗದ ಹಲವು ದಿಗ್ಗಜರನ್ನು ಮಾತಾಡಿಸಿದ್ದು, ಈ ಪೈಕಿ ಕಮಲ್​ ಹಾಸನ್​ ಅವರು ಈ ವರ್ಷದ ತಮ್ಮ ನೆಚ್ಚಿನ ಚಿತ್ರ ‘ಕಾಂತಾರ’ ಎಂದು ಹೇಳಿಕೊಂಡಿದ್ದಾರೆ. ಇನ್ನು, ಚಿತ್ರ ನೋಡಿರುವ ಬಾಲಿವುಡ್​ ನಟ ಹೃತಿಕ್​ ರೋಶನ್​, ‘ಕಾಂತಾರ’ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೊಗಳಿದ್ದಾರೆ. ಆ ಚಿತ್ರದಿಂದ ತುಂಬಾ ಕಲಿತಿದ್ದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಟೈಗರ್​ ನಂತರ ಇನ್ನೊಬ್ಬರೊಂದಿಗೆ ಡೇಟಿಂಗ್​ ಮಾಡ್ತಿದ್ದಾರಾ ದಿಶಾ ಪಠಾಣಿ?

    ಇದೆಲ್ಲದರ ಜತೆಗೆ ರಿಷಭ್​ ಶೆಟ್ಟಿ, ಸೋಷಿಯಲ್​ ಮೀಡಿಯಾದಲ್ಲಿ ಒಂದು ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಭಾರತೀಯ ಚಿತ್ರರಂಗದ ಜನಪ್ರಿಯ ನಟ-ನಟಿಯರು ಇದ್ದು, ಅವರೊಂದಿಗೆ ರಿಷಭ್​ ವೇದಿಕೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗ, ‘ಕಾಂತಾರ’ ಮುಂತಾದ ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ.

    ಅಂದಹಾಗೆ, ಈ ಚರ್ಚೆಯನ್ನು ಏರ್ಪಡಿಸಿದ್ದು ಪತ್ರಕರ್ತೆ ಅನುಪಮಾ ಚೋಪ್ರಾ ಅವರ ಫಿಲ್ಮಿ ಕಂಪಾನಿಯನ್​ ಸಂಸ್ಥೆ. ಪ್ರತೀ ವರ್ಷದ ಕೊನೆಯಲ್ಲಿ ಹಲವು ಚರ್ಚೆಗಳನ್ನು ಆಯೋಜಿಸುವ ಅನುಪಮಾ, ಈ ಬಾರಿ ‘ಆಕ್ಟರ್ಸ್​ ಅಡ್ಡ 2022’ ಎಂಬ ಚರ್ಚೆ ಏರ್ಪಡಿಸಿದ್ದಾರೆ. ಈ ಚರ್ಚೆಯಲ್ಲಿ ಬಾಲಿವುಡ್​ ಮತ್ತು ದಕ್ಷಿಣದ ನಟರು ಭಾಗವಹಿಸಿದ್ದಾರೆ.

    ಇದನ್ನೂ ಓದಿ: ಅವಿವಾಗೆ ಅಭಿಷೇಕ್​ ತೊಡಿಸಿದ ಉಂಗುರದ ಬೆಲೆ ಎಷ್ಟು?

    ಈ ಚರ್ಚೆಯಲ್ಲಿ ರಿಷಭ್​ ಜತೆಗೆ ಅನಿಲ್​ ಕಪೂರ್​, ವಿದ್ಯಾ ಬಾಲನ್​, ವರುಣ್​ ಧವನ್​, ಆಯುಷ್ಮಾನ್​ ಖುರಾನಾ, ಜಾಹ್ನವಿ ಕಪೂರ್​, ರಾಜಕುಮಾರ್​ ರಾವ್​, ದುಲ್ಕರ್​ ಸಲ್ಮಾನ್​ ಮುಂತಾದವರು ಭಾಗವಹಿಸಿದ್ದು ವಿಶೇಷ. ಅದಕ್ಕೂ ವಿಶೇಷತೆಯೆಂದರೆ, ಈ ಚರ್ಚೆಯಲ್ಲಿ ದಕ್ಷಿಣ ಭಾರತದಿಂದ ಇಬ್ಬರೇ ಇಬ್ಬರು ಕಲಾವಿದರು ಭಾಗವಹಿಸಿದ್ದು, ಕನ್ನಡದಿಂದ ರಿಷಭ್​ ಮತ್ತು ಮಲಯಾಳಂನಿಂದ ದುಲ್ಕರ್​ ಇದ್ದರು.

    ಮೆಕ್ಕಾ ಆಯ್ತು; ಈಗ ವೈಷ್ಣೋದೇವಿ ದರ್ಶನ ಪಡೆದ ಶಾರುಖ್​​ ಖಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts