More

    ಭೂಮಿಯ ಒಳಗಿದೆ ಥಿಯಾ ಗ್ರಹದ ಅವಶೇಷಗಳು! ಇದರ ಘರ್ಷಣೆಯಿಂದಲೇ ಚಂದ್ರನ ರಚನೆ

    ನವದೆಹಲಿ: ಥಿಯಾ ಹೆಸರಿನ ಪ್ರಾಚೀನ ಕಾಲದ ಗ್ರಹದ ಅವಶೇಷಗಳು ಭೂಮಿಯ ಒಳಗೆ ಉಳಿದುಕೊಂಡಿದ್ದು, ಈ ಗ್ರಹದ ಡಿಕ್ಕಿ ಅಥವಾ ಘರ್ಷಣೆಯೊಂದಿಗೆ ಚಂದ್ರನ ರಚನೆಯಾಗಿದೆ ಎಂದು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಮಹತ್ವದ ವಿಚಾರವೊಂದನ್ನು ಪ್ರಸ್ತಾಪಿಸಿದ್ದಾರೆ.

    ಭೂಮಿಯ ಹೊದಿಕೆಯೊಳಗೆ ಆಳವಾದ ಎರಡು ಬೃಹತ್ ರಚನೆಗಳಿದ್ದು, ಇವುಗಳನ್ನು ಲಾರ್ಜ್​ ಲೋ ವೆಲಾಸಿಟಿ ಪ್ರಾವಿನ್ಸಸ್​ (LLVPs) ಎಂದು ಕರೆಯಲಾಗುತ್ತದೆ. ಇವು ಪ್ರಾಚೀನ ಥಿಯಾ ಗ್ರಹದ ಅವಶೇಷಗಳಾಗಿವೆ. ಶತಕೋಟಿ ವರ್ಷಗಳ ಹಿಂದೆ ಥಿಯಾ ಗ್ರಹ ಭೂಮಿಯೊಂದಿಗೆ ಘರ್ಷಣೆ ನಡೆಸಿದ್ದು, ಇದರಿಂದಲೇ ಭೂಮಿಯ ಉಪಗ್ರಹ ಚಂದ್ರನ ರಚನೆಯಾಗಿದೆ ಎಂದು ನಂಬಲಾಗಿದೆ.

    ಈ ಎರಡು LLVPs ಚಂದ್ರನ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚು ದೊಡ್ಡದಾಗಿವೆ. 1980ರಲ್ಲಿ ವಿಜ್ಞಾನಿಗಳು ಭೂಮಿಯ ಮೂಲಕ ಚಲಿಸುವ ಭೂಕಂಪನದ ಅಲೆಗಳನ್ನು ಅಳತೆ ಮಾಡುವಾಗ ಇವು ಪತ್ತೆಯಾಗಿವೆ. ಈ ಅಲೆಗಳು ಅವು ಹಾದುಹೋಗುವ ವಸ್ತುವನ್ನು ಅವಲಂಬಿಸಿ ವಿಭಿನ್ನ ವೇಗದಲ್ಲಿ ಚಲಿಸುತ್ತವೆ. ಅದರಲ್ಲಿ ವಿಶೇಷವಾಗಿ ಈ ಎರಡು ಪ್ರದೇಶಗಳ ಮೂಲಕ ಹಾದುಹೋಗುವಾಗ ಗಮನಾರ್ಹವಾಗಿ ನಿಧಾನವಾಗುವುದನ್ನು ಗಮನಿಸಲಾಗಿದೆ. ಆ ಪ್ರದೇಶಗಳೆಂದರೆ ಒಂದು ಆಫ್ರಿಕಾದ ಕೆಳಗೆ ಮತ್ತು ಇನ್ನೊಂದು ಪೆಸಿಫಿಕ್ ಸಾಗರದ ಕೆಳಗೆ. ಹೆಚ್ಚಿನ ಕಬ್ಬಿಣದ ಅಂಶದಿಂದಾಗಿ ಈ ಎರಡು ಪ್ರದೇಶಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಗಿಂತ ದಟ್ಟವಾಗಿರುತ್ತವೆ ಎಂಬ ತೀರ್ಮಾನಕ್ಕೆ ಇದು ಕಾರಣವಾಗಿದೆ.

    ಅಂದಹಾಗೆ ಈ ನಿಗೂಢ ರಚನೆಗಳ ಮೂಲವು ದಶಕಗಳಿಂದ ಚರ್ಚೆಯ ವಿಷಯವಾಗಿದೆ. ಆದಾಗ್ಯೂ ಇತ್ತೀಚಿನ ಅಧ್ಯಯನದ ವರದಿಯು ಜರ್ನಲ್​ ನೇಚರ್​ನಲ್ಲಿ ಪ್ರಕಟವಾಗಿದ್ದು, ಈ ಎರಡು ರಚನೆಗಳ ಅವಶೇಷಗಳು ಭೂಮಿಗೆ ಅಪ್ಪಳಿಸಿದ ಥಿಯಾ ಗ್ರಹದ ಅವಶೇಷಗಳು ಎಂದು ನಂಬಲಾಗಿದೆ. ಅಪ್ಪಳಿಸಿದ ಪರಿಣಾಮ ಭೂಮಿಯು ಥಿಯಾ ಗ್ರಹದ ಬಹುತೇಕ ಭಾಗವನ್ನು ತನ್ನೊಳಗೆ ಹೀರಿಕೊಂಡಿದ್ದು, LLVP ಗಳನ್ನು ರೂಪಿಸಿದೆ. ಆದರೆ, ಉಳಿದ ಶಿಲಾಖಂಡರಾಶಿಗಳು ಒಟ್ಟುಗೂಡಿ ಚಂದ್ರನನ್ನು ರೂಪಿಸಿವೆ ಎಂದು ನಂಬಲಾಗಿದೆ.

    ಭೂಭೌತಶಾಸ್ತ್ರಜ್ಞ ಮತ್ತು ಅಧ್ಯಯನದ ಪ್ರಮುಖ ಸಂಶೋಧಕ ಕಿಯಾನ್ ಯುವಾನ್ ಅವರು 2019ರಲ್ಲಿ ಥಿಯಾ ಗ್ರಹದ ರಚನೆಯ ಕುರಿತು ಸೆಮಿನಾರ್‌ನಲ್ಲಿ ಯುರೇಕಾ ಕ್ಷಣ (ಹಠಾತ್, ವಿಜಯೋತ್ಸಾಹದ ಆವಿಷ್ಕಾರ, ಸ್ಫೂರ್ತಿಯ ಕ್ಷಣ ) ವನ್ನು ಹೊಂದಿದ್ದರು. ಕಬ್ಬಿಣದ ಸಮೃದ್ಧ ಪ್ರಭಾವದಿಂದ ಥಿಯಾವು ಭೂಮಿಯ ಹೊದಿಕೆಯೊಳಗೆ ದುಂಡಗಿನ ವಸ್ತುವಾಗಿ ರೂಪಾಂತರಗೊಂಡಿರಬಹುದು ಎಂದು ಅರ್ಥೈಸಿಕೊಂಡಿದ್ದಾರೆ.

    ಯುವಾನ್ ಮತ್ತು ಅವರ ತಂಡವು ಥಿಯಾದ ರಾಸಾಯನಿಕ ಸಂಯೋಜನೆ ಮತ್ತು ಭೂಮಿಯ ಮೇಲೆ ಅದರ ಪ್ರಭಾವಕ್ಕಾಗಿ ವಿಭಿನ್ನ ಸನ್ನಿವೇಶಗಳನ್ನು ರೂಪಿಸಿತು. ಘರ್ಷಣೆಯ ಪ್ರಭಾವವು LLVPಗಳು ಮತ್ತು ಚಂದ್ರನ ರಚನೆಗೆ ಕಾರಣವಾಗಿರಬಹುದೆಂದು ಸಿಮ್ಯುಲೇಶನ್‌ಗಳು ದೃಢಪಡಿಸಿವೆ. ಅಲ್ಲದೆ, ಸಂಶೋಧಕರ ಸಿಮ್ಯುಲೇಶನ್‌ಗಳು ಥಿಯಾ ಪ್ರಭಾವದಿಂದ ಬಿಡುಗಡೆಯಾದ ಹೆಚ್ಚಿನ ಶಕ್ತಿಯು ಭೂ ಹೊದಿಕೆಯ ಮೇಲಿನ ಅರ್ಧಭಾಗದಲ್ಲಿ ಉಳಿದಿದೆ ಎಂದು ತೋರಿಸಿದೆ. (ಏಜೆನ್ಸೀಸ್​)

    ಅಪಾಯಕಾರಿ ಮಟ್ಟ ತಲುಪಿದ ದೆಹಲಿಯ ಗಾಳಿ… ಶಾಲೆಗಳಿಗೆ ಎರಡು ದಿನಗಳ ಕಾಲ ರಜೆ

    ವಕೀಲರು ಮೈ ಲಾರ್ಡ್​ ಎಂದು ಹೇಳುವುದನ್ನು ನಿಲ್ಲಿಸಿದ್ರೆ ಅರ್ಧ ಸಂಬಳ ಕೊಡ್ತೀನಿ ಅಂದ್ರು ಸುಪ್ರೀಂ ಕೋರ್ಟ್​ ಜಡ್ಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts