| ಹರ್ಷವರ್ಧನ್ ಬ್ಯಾಡನೂರು
ಶಶಾಂಕ್ ನಿರ್ದೇಶನದ,ಡಾರ್ಲಿಂಗ್ ಕೃಷ್ಣ ನಟಿಸಿರುವ ಸಿನಿಮಾ “ಕೌಸಲ್ಯಾ ಸುಪ್ರಜಾ ರಾಮ’. ಚಿತ್ರಕ್ಕೆ “ಎ ಟೇಲ್ ಆ್ ಎ ರಿಯಲ್ ಮ್ಯಾನ್’ ಅರ್ಥಾತ್ ನಿಜವಾದ ಗಂಡಸಿನ ಕಥೆ ಎಂಬ ಅಡಿಬರಹವಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಪ್ರೇಕ್ಷಕರಲ್ಲಿ ನಿರೀೆ ಮೂಡಿಸಿದ್ದು, ಇಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಈ ಸಿನಿಮಾ ಏಕೆ ನೋಡಬೇಕೆಂದು ಐದು ಕಾರಣಗಳನ್ನು ನೀಡಿದೆ.
ಶಶಾಂಕ್:
- “ಕೌಸಲ್ಯಾ ಸುಪ್ರಜಾ ರಾಮ’ ಅಂದರೆ ಕೌಸಲ್ಯೆಯ ಮಗ ಸುಪ್ರಜೆ ರಾಮ ಅಂತರ್ಥ. ಈ ಸಂದರ್ಭದಲ್ಲಿ ಬೇಕಾಗಿರುವ ವಿಷಯ. ನಮ್ಮದು ಪುರುಷ ಪ್ರಧಾನ ಸಮಾಜ. ಅದರ ಸಮಸ್ಯೆಗಳ ಸುತ್ತ ಸುತ್ತುವ ಸಿನಿಮಾ. ರಿಲೀಸ್ ಬಳಿಕ ಚಿತ್ರದ ವಿಷಯ ಏನು ಅಂತ ತಿಳಿದ ಬಳಿಕ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತದೆ ಎಂಬ ನಂಬಿಕೆಯಿದೆ.
- ಕೃಷ್ಣ ಜತೆ ನಾನು ಇದುವರೆಗೂ ಸಿನಿಮಾ ಮಾಡಿಲ್ಲ. ನಾವಿಬ್ಬರೂ ಯೂತ್ುಲ್, ್ಯಾಮಿಲಿ ಎಂಟರ್ಟೇನರ್ ಚಿತ್ರಗಳನ್ನು ಹೆಚ್ಚು ಮಾಡಿದ್ದೇವೆ. ನಿಜವಾದ ಗಂಡಸು ಎಂದರೆ ಯಾರು? ಎನ್ನುವುದನ್ನು ಹೆಣ್ಣಿನ ದೃಷ್ಟಿಯಲ್ಲಿ ಹೇಳುವ ಚಿತ್ರ. ಭಾರತದಲ್ಲಿ ಇಂತಹ ಪ್ರಯತ್ನವಾಗಿಲ್ಲ.
- 2022ರ ಮಾರ್ಚ್ 8ರ ಮಹಿಳಾ ದಿನದಂದು ಈ ಕಥೆ ಹುಟ್ಟಿದ್ದು. ನಾವು ನೋಡಿರುವ ವಿಚಾರಗಳು, ಅನುಭವಗಳು, ಪಾತ್ರಗಳೇ ಈ ಚಿತ್ರದ ಟಾಪಿಕ್. ಇದು ಪ್ರೇಕ್ಷಕರದೇ ಕಥೆ. ಸಿನಿಮಾ ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗಲಿದೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಪಾತ್ರಕ್ಕೆ ಕನೆಕ್ಟ್ ಆಗುತ್ತಾರೆ.
- ಇದು ನನ್ನ ಇದುವರೆಗಿನ ಬೆಸ್ಟ್ ಸಿನಿಮಾ. ಈ ಹಿಂದಿನ ಒಂಬತ್ತು ಚಿತ್ರಗಳಿಗೆ ಹೋಲಿಸಿದರೆ, ಇದೇ ಬೆಸ್ಟ್ ಕಥೆ.
- ಇದುವರೆಗೆ ರಿಲೀಸ್ ಮಾಡಿರುವ ಮೂರು ಹಾಡುಗಳು ಹಿಟ್ ಆಗಿವೆ. ಇದಲ್ಲದೇ ಇನ್ನೂ ಒಂದು ಹಾಡಿದೆ. ಅದನ್ನು ಸಿನಿಮಾದಲ್ಲಿ ನೋಡಿದರೆ ಚಂದ.
ಇದನ್ನೂ ಓದಿ : ವರ್ಷಕ್ಕೆರಡು ಚಿತ್ರ ನಿರ್ಮಿಸಲು ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಧಾರ
ಮಿಲನಾ ನಾಗರಾಜ್:
- ಬಹಳ ದಿನಗಳ ನಂತರ ಕುಟುಂಬ ಸಮೇತ ನೋಡಬಹುದಾದ ಚಿತ್ರ. ಸೂಕ್ಷ್ಮ ವಿಷಯ, ಈ ಹಿಂದೆ ನೋಡಿರದ ಹೊಸ ವಿಚಾರವಿದೆ.
- ಶಶಾಂಕ್ ಸರ್ ಹಲವು ಹಿಟ್ಗಳನ್ನು ನೀಡುವರ ನಿರ್ದೇಶಕ. ಸಿನಿಮಾ ನೋಡಲು ಮಜವಾಗಿದೆ.
- ಕೆಲವು ಪಾತ್ರಗಳನ್ನು ಬಿಟ್ಟುಕೊಟ್ಟಿಲ್ಲ, ಅವನ್ನು ಚಿತ್ರದಲ್ಲಿ ನೋಡಿದಾಗ ಪ್ಲಸ್ ಆಗುತ್ತದೆ.
- “ಲವ್ ಮಾಕ್ಟೇಲ್’ ಸರಣಿ ಬಳಿಕ ಕೃಷ್ಣ ಲುಕ್ ಬದಲಿಸಿ, ಬೇರೆ ರೀತಿಯ ಸಿನಿಮಾ ಮಾಡಬೇಕು ಅಂತಿದ್ದರು. ಇದು ಅವರ ಅತ್ಯುತ್ತಮ ಪಾರ್ಮೆನ್ಸ್ ಇರುವ ಚಿತ್ರ.
- ಐದನೇ ಕಾರಣ ನಾನೇ. ಯಾಕೆ ಅಂತ ಹೇಳುವುದಿಲ್ಲ. ಅದನ್ನು ತೆರೆಯ ಮೇಲೆ ನೋಡಿ ಗೊತ್ತಾಗುತ್ತದೆ.
ಇದನ್ನೂ ಓದಿ : ರಕ್ತಾಕ್ಷ ಮಾಸ್ ಟೀಸರ್; ಸಿಕ್ಸ್ ಪ್ಯಾಕ್ ಲುಕ್ನಲ್ಲಿ ರೋಹಿತ್ ಭರ್ಜರಿ ಆ್ಯಕ್ಷನ್
ಬೃಂದಾ ಆಚಾರ್ಯ:
- ಶಶಾಂಕ್ ಸರ್ ಸಿನಿಮಾ ಎಂಬುದೇ ಮೊದಲ ಕಾರಣ. ಅವರು ಸುಮ್ಮನೆ ಸಿನಿಮಾ ಮಾಡುವವರಲ್ಲ. ಉತ್ತಮ ವಿಷಯಗಳನ್ನಿಟ್ಟುಕೊಂಡು ಅರ್ಥಪೂರ್ಣ ಚಿತ್ರಗಳನ್ನು ಮಾಡುತ್ತಾರೆ.
- ನಾಯಕ, ನಾಯಕಿ ಅಂತಲ್ಲ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಜತೆಗೆ ಎಲ್ಲ ಪಾತ್ರಗಳೂ ಮನಸ್ಸಿನಲ್ಲಿ ಉಳಿಯುತ್ತವೆ.
- ರಿಲೀಸ್ ಆಗಿರುವ ಮೂರು ಹಾಡುಗಳೂ ಹಿಟ್ ಆಗಿವೆ. “ಪ್ರೀತಿಸುವೆ’, “ಶಿವಾನಿ’, “90 ಹಾಕು ಕಿಟ್ಟಪ್ಪ’ ಹಾಡುಗಳಿಗೆ ಒಳ್ಳೆ ಪ್ರತಿಕ್ರಿಯೆ ದೊರೆತಿದೆ. ಜತೆಗೆ ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ಬಿಜಿಎಂ ಕೂಡ ಚೆನ್ನಾಗಿದೆ.
- ಎಲ್ಲರೂ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದೇವೆ. ನಾಲ್ಕು ಶೇಡ್ಗಳಲ್ಲಿ ಕೃಷ್ಣ ಸರ್ ನಟಿಸಿದ್ದಾರೆ. ಇದುವರೆಗೂ ಅವರು ಆ ರೀತಿ ಕಾಣಿಸಿಕೊಂಡಿಲ್ಲ. ಮಿಲನಾ ನಾಗರಾಜ್ ಅವರನ್ನೂ ವಿಭಿನ್ನ ಲುಕ್ನಲ್ಲಿ ನೋಡಬಹುದು. ನಿಧಿಮಾ ಆಗಿದ್ದ ಅವರು ಈಗ ಮುತ್ತುಲಕ್ಷಿ$್ಮ ಆಗಿ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತಾರೆ.
- ತುಂಬ ದಿನಗಳ ನಂತರ ಬಂದಿರುವ ಕಲರ್ಫುಲ್ ಫ್ಯಾಮಿಲಿ ಎಂಟರ್ಟೇನರ್. ಕುಟುಂಬದ ಎಲ್ಲ ವಯಸ್ಸಿನವರೂ ಕುಳಿತು ಸಿನಿಮಾ ನೋಡಿ ಎಂಜಾಯ್ ಮಾಡಬಹುದಾದ ಸಿನಿಮಾ.