More

    ಒಮ್ಮೆ ನಿದ್ರೆಗೆ ಜಾರಿದ್ರೆ ಮತ್ತೆ ಏಳಲು ಬೇಕು 25 ದಿನ! ಆಧುನಿಕ ಕುಂಭಕರ್ಣನ ದಿನಚರಿ ಕೇಳಿದ್ರೆ ಬೆರಗಾಗ್ತೀರಿ

    ನಾಗೌರ್​: ಹಿಂದೂ ಮಹಾಕಾವ್ಯ ರಾಮಾಯಾಣದಲ್ಲಿ ಬರುವ ಪೌರಾಣಿಕ ಪಾತ್ರ ಕುಂಭಕರ್ಣನ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಲಂಕೇಶ್ವರ ರಾವಣನ ಕಿರಿಯ ಸಹೋದರ ಆಗಿರುವ ಕುಂಭಕರ್ಣ ಒಂದು ಬಾರಿ ಮಲಗಿದರೆ ಮತ್ತೆ ಎಚ್ಚರಿಸಲು 6 ತಿಂಗಳುಗಳು ಬೇಕಿತ್ತು ಎಂಬ ಸ್ವಾರಸ್ಯಕರ ಅಂಶವನ್ನು ರಾಮಾಯಣ ಕತೆಯಲ್ಲಿ ನಾವೆಲ್ಲ ಕೇಳಿದ್ದೇವೆ. ಆದರೆ, ಇದೀಗ ಅದೇ ರೀತಿಯ ವ್ಯಕ್ತಿಯೊಬ್ಬ ಆಧುನಿಕ ಜಗತ್ತಿನಲ್ಲೂ ಇದ್ದಾನೆ. ಆತ ವರ್ಷಕ್ಕೆ 300 ದಿನ ಮಲಗೇ ಇರುತ್ತಾನೆ.

    ಇದು ಅಚ್ಚರಿಯಾದರೂ ಸತ್ಯ. ರಾಜಸ್ಥಾನದ ನಾಗ್ಪುರ ಜಿಲ್ಲೆಯ ಭದ್ವಾ ಗ್ರಾಮದ ನಿವಾಸಿ ಪುರಖರಂ (42) ಆಧುನಿಕ ಕುಂಭಕರ್ಣ ಎಂದೇ ಖ್ಯಾತಿ ಪಡೆದಿದ್ದಾರೆ. ಆತ ಆ್ಯಕ್ಸಿಸ್​ ಹೈಪರ್​ಸೊಮ್ನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವುದೇ ಆತನ ಅತಿಯಾದ ನಿದ್ರೆಗೆ ಕಾರಣವಾಗಿದೆ.

    ಸಾಮಾನ್ಯವಾಗಿ ಆರೋಗ್ಯವಾಗಿರಲು ಜನರಿಗೆ ದಿನವೊಂದಕ್ಕೆ 6 ರಿಂದ 8 ಗಂಟೆ ಸಮಯ ನಿದ್ದೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಪುರಖರಂ ತಿಂಗಳಿಗೆ 25 ದಿನ ನಿದ್ರೆಗೆ ಜಾರುತ್ತಾರಂತೆ. 23 ವರ್ಷಗಳಿಂದ ಆ್ಯಕ್ಸಿಸ್​ ಹೈಪರ್​ಸೊಮ್ನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ.

    ಈ ವಿರಳಾತಿವಿರಳ ಕಾಯಿಲೆಯಿಂದಾಗಿ ಪುರಖರಂ ತಿಂಗಳಲ್ಲಿ ಐದು ದಿನ ಮಾತ್ರ ತಮ್ಮ ಅಂಗಡಿಯನ್ನು ನೋಡಿಕೊಳ್ಳಲು ಸಾಧ್ಯ. ನಿದ್ರೆ ಜಾರಿದರೆ ಅವರನ್ನು ಮತ್ತೆ ಎದ್ದೇಳಿಸುವುದು ತುಂಬಾ ಕಷ್ಟವೆಂದು ಕುಟುಂಬಸ್ಥರು ಹೇಳಿದ್ದಾರೆ.

    ಆರಂಭದ ದಿನಗಳಲ್ಲಿ ಪುರಖರಂ ಅತಿಯಾಗಿ ನಿದ್ರಿಸುವುದನ್ನು ನೋಡಿ ಕುಟುಂಬಸ್ಥರು ವೈದ್ಯರ ಮೊರೆ ಹೋಗಿದ್ದರು. ಆರಂಭದಲ್ಲಿ ಆತ 15 ಗಂಟೆಗಳು ನಿದ್ರಿಸುತ್ತಿದ್ದ. ವರ್ಷಗಳು ಕಳೆದಂತೆ ಆತನ ನಿದ್ರೆಯ ಅವಧಿಯು ಅನೇಕ ಗಂಟೆಯಿಂದ ಅನೇಕ ದಿನಗಳವರೆಗೆ ಏರಿಕೆಯಾಯಿತು. ಇತ್ತ ಎಷ್ಟೇ ಚಿಕಿತ್ಸೆ ಕೊಡಿಸಿದರು ಪ್ರಯೋಜನ ಆಗಲಿಲ್ಲ. ಇದೀಗ ಆತನ ಕಾಯಿಲೆ ತುಂಬಾ ಬಿಗಡಾಯಿಸಿದ್ದು, ತಿಂಗಳಲ್ಲಿ 20 ರಿಂದ 25 ದಿನಗಳು ನಿದ್ರೆಗೆ ಜಾರುತ್ತಿದ್ದಾರೆ.

    ಪುರಖರಂ ಮಲಗಿರುವಾಗಲೇ ಆತನ ಕುಟುಂಬ ಸ್ನಾನ ಮಾಡಿಸುವುದು ಮತ್ತು ಊಟ ಮಾಡಿಸುವುದು ಮಾಡುತ್ತಾರೆ. ಒಮ್ಮೊಮ್ಮೆ ಅಂಗಡಿಯಲ್ಲಿ ಇರುವಾಗಲೇ ನಿದ್ರೆಗೆ ಜಾರಿ ಬಿಡುತ್ತಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

    ಚಿಕಿತ್ಸೆ ಮತ್ತು ಅತಿಯಾದ ನಿದ್ರೆಯ ಹೊರತಾಗಿಯೂ ಆತನ ದೇಹ ತುಂಬಾ ಸಮಯ ಆಯಾಸದಿಂದ ಕೂಡಿದೆ ಹಾಗೂ ಆತನ ಉತ್ಪಾದನಾ ಸಾಮರ್ಥ್ಯ ಬಹುತೇಕ ನಿಂತಿದೆ. ಆತನ ಪ್ರಸ್ತುತ ಆರೋಗ್ಯ ಪರಿಸ್ಥಿತಿಯಿಂದಾಗಿಯೇ ವಿಪರೀತ ತಲೆನೋವು ಮತ್ತು ಇತರೆ ಕಾಯಿಲೆಗಳ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಲಾಗಿದೆ.

    ಪುರಖರಂ ಅವರು ಕಾಯಿಲೆಯಿಂದ ಗುಣವಾಗಿ ಶೀಘ್ರದಲ್ಲೇ ಸಹಜ ಜೀವನಕ್ಕೆ ಮರಳಲಿದ್ದಾರೆ ಎಂದು ಆತನ ಪತ್ನಿ ಲಿಚ್ಮಿ ದೇವಿ ಮತ್ತು ತಾಯಿ ಕನ್ವಾರಿ ದೇವಿ ಭರವಸೆ ಇಟ್ಟುಕೊಂಡಿದ್ದಾರೆ. (ಏಜೆನ್ಸೀಸ್​)

    Fact Check| ಮಧುರ ಕಂಠದ ಈ ಗಾಯಕಿ ದಿಗ್ಗಜ ಗಾಯಕ ಯೇಸುದಾಸ್​ ಮೊಮ್ಮಗಳಲ್ಲ, ಮತ್ಯಾರು?

    ಒಂದಾಗಿರೋಣ ಅನ್ನೋ ಸಂದೇಶ ಸಾರಿದ ರಾಬರ್ಟ್ ದೋಸ್ತಿ: ಇನ್ನೆರೆಡು ದಿನಗಳಲ್ಲಿ ಕಮಿಷರನ್​ ಭೇಟಿಗೆ ಸಿದ್ಧತೆ

    ವಂಚನೆ ಯತ್ನ ಕೇಸ್‌: ದರ್ಶನ್ ಸ್ನೇಹಕೂಟದ ಆರೋಪ-ಪ್ರತ್ಯಾರೋಪಗಳಿಗೆ ಮೂಕಪ್ರೇಕ್ಷಕರಾದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts