More

    ಕನಸಿನಲ್ಲಿಯೂ ಯಾವುದಾದರೂ ತಂಡವನ್ನು ಸೋಲಿಸಲು ಬಯಸಿದರೆ ಅದು ಆರ್​ಸಿಬಿ ಆಗಿರುತ್ತದೆ: ಗೌತಮ್​ ಗಂಭೀರ್​

    ಬೆಂಗಳೂರು: ಮಾರ್ಚ್​ 29ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕಲ್ಕತ್ತಾ ನೈಟ್​ರೈಡರ್ಸ್​ ಮುಖಾಮುಖಿಯಾಗಲಿದ್ದು, ಹಲವು ವಿಚಾರಗಳಿಗೆ ಸದ್ದು ಮಾಡುತ್ತಿದೆ.

    ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವು ಗೌತಮ್ ಗಂಭೀರ್ vs ವಿರಾಟ್ ಕೊಹ್ಲಿ ನಡುವಿನ ಪಂದ್ಯವಾಗಿ ಮಾರ್ಪಡಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಏಕೆಂದರೆ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ಮಾಜಿ ಆಟಗಾರ ಗೌತಮ್​ ಗಂಭೀರ್​ ನಡುವಿನ ಸಂಬಂಧ ಅಷ್ಟಕಷ್ಟೇ. ಐಪಿಎಲ್​ ಪಂದ್ಯದ ವೇಳೇ ಈ ಇಬ್ಬರ ನಡುವೆ ಶುರುವಾದ ಮನಸ್ತಾಪ ಈವರೆಗೂ ದೂರಾಗಿಲ್ಲ.

    ಇದೀಗ ಹೊಸ ವಿಚಾರಕ್ಕೆ ಬರುವುದಾದರೆ ಗೌತಮ್​ ಗಂಭೀರ್​ ಆರ್​ಸಿಬಿ ತಂಡದ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆರ್​ಸಿಬಿ ಕೆಕೆಆರ್​ ನಡುವಿನ ಪಂದ್ಯ ಶುರುವಾಗುವುದಕ್ಕೂ ಮುನ್ನ ಈ ವಿಡಿಯೋ ವೈರಲ್​ ಆಗಿದ್ದು, ಆರ್​ಸಿಬಿ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.

    ಇದನ್ನೂ ಓದಿ: ಕೆಲವರು ಆಡೋ ಮಾತಿನಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ; ಮನನೊಂದು ಕಣ್ಣೀರಿಟ್ಟ ವರ್ತೂರ್ ಸಂತೋಷ್

    ನಾನು ಪ್ರತಿಬಾರಿ ಯಾವುದಾದರೂ ತಂಡವನ್ನು ಸೋಲಿಸಲು ಬಯಸುವುದಾದರೆ, ಬಹುಶಃ ನನ್ನ ಕನಸಿನಲ್ಲಿಯೂ ಸಹ RCB ಆಗಿರುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಏನು ಗೆದ್ದಿಲ್ಲವೆಂದರೂ ಎಲ್ಲವನ್ನೂ ಗೆದ್ದಂತೆ ಆಡುತ್ತಾರೆ. ಆ ರೀತಿಯ ವರ್ತನೆ ನನ್ನಿಂದ ಸಹಿಸಲು ಸಾಧ್ಯವಿಲ್ಲ. ನನ್ನ ಪ್ರಕಾರ ಕೆಕೆಆರ್​ ಗಳಿಸಿದ ಮೂರು ಅತ್ಯುತ್ತಮ ಗೆಲುವುಗಳು RCB ವಿರುದ್ಧದ ಪಂದ್ಯಗಳಲ್ಲಿ. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ನಾನು ಬಯಸುವ ಒಂದು ವಿಷಯವೆಂದರೆ ಮೈದಾನಕ್ಕೆ ಹೋಗಿ ಮತ್ತೊಮ್ಮೆ RCB ಅನ್ನು ಸೋಲಿಸುವುದು ಎಂದು ಗೌತಮ್​ ಗಂಭೀರ್​ ಈ ಹಿಂದೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇತ್ತ ಗೌತಮ್​ ಗಂಭೀರ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಪಾಕಿಸ್ತಾನವನ್ನು ಹೊರತುಪಡಿಸಿದರೆ ಗೌತಮ್​ ಗಂಭೀರ್​ ತುಂಬಾ ದ್ವೇಷಿಸುವುದು ಆರ್​ಸಿಬಿ ಎಂದೆನ್ನಿಸುತ್ತದೆ. ಪಂದ್ಯ ಶುರುವಾಗುವುದಕ್ಕೂ ಮುನ್ನವೇ ಗೌತಮ್​ ಗಂಭೀರ್​ ಅವರ ಈ ವಿಡಿಯೋ ರೋಷಕತೆ ಸೃಷ್ಟಿಸಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts