ನವದೆಹಲಿ: ಬ್ಯಾಂಕಿಂಗ್ ನಿಯಮ ಉಲ್ಲಂಘಿಸಿದ ಕಾರಣ ಕರ್ನಾಟಕ ಮತ್ತು ತಮಿಳುನಾಡಿನ ಎರಡು ಸಹಕಾರಿ ಬ್ಯಾಂಕ್ಗಳ ವಿರುದ್ಧ ಕ್ರಮ ತೆಗೆದುಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಬುಧವಾರ ಅವುಗಳಿಗೆ 15 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
ದಾವಣಗೆರೆಯ ಮಿಲಾತ್ ಕೋ ಆಪರೇಟಿವ್ ಬ್ಯಾಂಕ್ ಮತ್ತು ತೂತುಕುಡಿಯ ತಿರುವೈಕುಂಠಂ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ನಿಯಮ ಉಲ್ಲಂಘಿಸಿದ ಸಹಕಾರಿ ಬ್ಯಾಂಕುಗಳು. ಈ ಪೈಕಿ ಕರ್ನಾಟಕದ ಮಿಲಾತ್ ಬ್ಯಾಂಕ್ಗೆ 10 ಲಕ್ಷ ರೂಪಾಯಿ ಮಾನೆಟರಿ ಪೆನಾಲ್ಟಿ ವಿಧಿಸಲಾಗಿದೆ. ಈ ಬ್ಯಾಂಕು ಆರ್ಬಿಐ ವಿಧಿಸಿದ್ದ ನಿಯಮ, ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮ ಜರುಗಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ.
ಇದನ್ನೂ ಓದಿ: ಚುನಾವಣಾ ಸಿಬ್ಬಂದಿ ಜತೆಗೆ ಪೆನ್ ವಿಚಾರಕ್ಕೆ ವಾಗ್ವಾದಕ್ಕಿಳಿದ್ರು ಮಾಜಿ ಶಾಸಕ ಕಾಶಪ್ಪನವರ
ಇದೇ ರೀತಿ, ತಮಿಳುನಾಡಿನ ತಿರುವೈಕುಂಠಂ ಬ್ಯಾಂಕು ಆರ್ಬಿಐ ನಿರ್ದೇಶನ ಉಲ್ಲಂಘಿಸಿ ಬ್ಯಾಂಕಿನ ನಿರ್ದೇಶಕರಿಗೆ ಸಾಲ ಮತ್ತು ಮುಂಗಡ ಪಾವತಿ ಮಾಡಿದ್ದಕ್ಕಾಗಿ 5 ಲಕ್ಷ ರೂಪಾಯಿ ಮಾನೆಟರಿ ಪೆನಾಲ್ಟಿಯನ್ನು ಆರ್ಬಿಐ ವಿಧಿಸಿದೆ. ಕಳೆದ ವರ್ಷ ಮಾರ್ಚ್ 31ರ ಲೆಕ್ಕಪತ್ರಗಳ ಆಧಾರದ ಮೇಲೆ ಆರ್ಬಿಐ ಈ ಕ್ರಮ ಜರುಗಿಸಿದೆ. (ಏಜೆನ್ಸೀಸ್)
ದಾಖಲೆ ಮತದ ಗೆಲುವು ಪಡೆದ ಬಿಡೆನ್ – ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರ ದಾಖಲೆ ಗೆಲುವು