More

    ಜನರ ಬಳಿ ಸುಲಿಗೆ ಮಾಡಿಕೊಂಡು ನಿಂತಿದ್ದೀರಾ? ಸಂಬಳ ತಗೊಳ್ತೀರಾ ನಿಮಗೆ ಮಾನ ಮರ್ಯಾದೆ ಇಲ್ವ?

    ಮಂಡ್ಯ: ಸರ್ವೆ ಇಲಾಖೆಗೆ ದಿಢೀರ್​ ಭೇಟಿ ನೀಡಿದ ಜೆಡಿಎಸ್​ ಶಾಸಕ ರವಿಂದ್ರ ಶ್ರೀಕಂಠಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶ್ರೀರಂಗಪಟ್ಟಣ ತಾಲೂಕು ಕಚೇರಿಯಲ್ಲಿ ನಡೆದಿದೆ.

    ಜಮೀನು ಸ್ಕೆಚ್​ಗೆ ತಿಂಗಳಗಟ್ಟಲೇ ಅಲೆಸುವ ಬಗ್ಗೆ ಅಧಿಕಾರಿಗಳ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಸರ್ವೆ ಇಲಾಖೆಗೆ ಧಿಡೀರ್ ಭೇಟಿ ನೀಡಿ ರವಿಂದ್ರ ಶ್ರೀಕಂಠಯ್ಯ ಪರಿಶೀಲನೆ ನಡೆಸಿದರು. ಈ ವೇಳೆ ಸರ್ವೆ ಇಲಾಖೆ ಸೂಪರ್ ವೈಸರ್ ಸುರೇಶ್​ಗೆ ತರಾಟೆ ತೆಗೆದುಕೊಂಡರು

    ಜನರ ಬಳಿ ಸುಲಿಗೆ ಮಾಡಿಕೊಂಡು ನಿಂತಿದ್ದೀರಾ? ಸಂಬಳ ತಗೊಳ್ತೀರಾ ನಿಮಗೆ ಮಾನ ಮರ್ಯಾದೆ ಇಲ್ವ? ನೀವು ಇರೋ ದಾಖಲೆಗಳನ್ನ ಕಳೆದುಕೊಂಡು ಜನರ ಹತ್ತಿರ ಸುಲಿಗೆ ಮಾಡ್ತಿದ್ದೀರಾ? ಏನ್ ಕೆಲ್ಸ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದರು.

    ಮೇಲಾಧಿಕಾರಿಗಳಿಗೂ ಪ್ರಶ್ನೆ ಮಾಡಿ ತರಾಟೆ ತೆಗೆದುಕೊಂಡ ಶ್ರೀಕಂಠಯ್ಯ ಜನರ ಹತ್ತಿ ದರೋಡೆ ಮಾಡಲು ನಿಮ್ಮ ಸಿಬ್ಬಂದಿನಾ ಬಿಟ್ಟಿದ್ದೀರಾ? ನೀವು ಹೆಡ್ ಕ್ವಾಟರ್ಸ್ ನಲ್ಲಿ ಕೂತು ಏನ್ ಮಾಡ್ತಿದ್ದೀರಿ? ನೀವು ತಾಲೂಕು ಕಚೇರಿಗೆ ಭೇಟಿ ನೀಡಿದ್ದೀರಾ? ನೀವು ಭೇಟಿ ನೀಡಿ ಪರಿಶೀಲನೆ ನಡೆಸಿದ್ರೆ ಹೀಗಾಗ್ತಾ ಇತ್ತಾ? ನಾವೇನು ಸುಮ್ನೆ ಕೂತ್ಕೊಳಕ್ಕೆ ಬಂದಿದ್ದಾವಾ ಎಂದು ಆಕ್ರೋಶ ಹೊರಹಾಕಿದರು.

    ಸಾರ್ವಜನಿಕರಿಗೆ ಟಾಯ್ಲೆಟ್ ಬಳಕೆಗೆ ಇಲ್ಲದ್ದಕ್ಕೂ ಬೇಸರ ವ್ಯಕ್ತಪಡಿಸಿದ ಶಾಸಕ, ಬೀಗ ಹಾಕೋಳೋದು ಅಂದ್ರೆ ಏನು ಅರ್ಥ? ನಾವು ಮಾಡಿರೋದೆ ಸಾರ್ವಜನಿಕರಿಗಾಗಿ ಅಲ್ವಾ? ಎಂದು ಗದರಿದ್ದಕ್ಕೆ ಅಧಿಕಾರಿ ಟಾಯ್ಲೆಟ್ ಓಪನ್ ಮಾಡಿಸ್ತಿವಿ ಸರ್ ಎಂದರು. ಓಪನ್ ಮಾಡ್ಸೋದು ಅಲ್ಲ ಸ್ವಚ್ಚವಾಗಿಟ್ಟುಕೊಳ್ಳಿ. ಈ ರೀತಿ ಆಗಬಾರ್ದು ಎಂದು ಸೂಚಿಸಿದರು. (ದಿಗ್ವಿಜಯ ನ್ಯೂಸ್​)

    ನಮ್ಮ ದೇಹದಲ್ಲಿ ರಕ್ತದ ಕೊನೇ ಹನಿ ಇರುವವರೆಗೂ ತಾಲಿಬಾನ್​ ವಿರುದ್ಧ ಹೋರಾಡ್ತೇವೆ: ಅಹ್ಮದ್​ ಮಸೂದ್​

    ಲೈಂಗಿಕ ಜೀವನದ ಬಗ್ಗೆ ಸಂದರ್ಶನದಲ್ಲಿ ಪ್ರಶ್ನೆ: ಚಿನ್ನದ ಹುಡುಗ ಪ್ರತಿಕ್ರಿಯಿಸಿದ ರೀತಿಗೆ ಭಾರೀ ಮೆಚ್ಚುಗೆ!

    VIDEO| ಕಾಫಿ ಶಾಪ್​ನಲ್ಲಿ ಖಾಸಗಿ ಅಂಗದ ಬಗ್ಗೆ ಮಾತನಾಡಿದ ಆರ್​ಜಿವಿ ಕಪಾಳಕ್ಕೆ ಬಿತ್ತು ಏಟು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts