More

    THE JUDGEMENT REVIEW : ಕಾನೂನು ವ್ಯವಸ್ಥೆಯ ಪ್ಲಸ್​ ಮತ್ತು ಮೈನಸ್​

    | ಹರ್ಷವರ್ಧನ್​ ಬ್ಯಾಡನೂರು

    ಚಿತ್ರ : ದ ಜಡ್ಜ್​ಮೆಂಟ್​
    ನಿರ್ದೇಶನ : ಗುರುರಾಜ್​ ಕುಲಕರ್ಣಿ (ನಾಡಗೌಡ)
    ನಿರ್ಮಾಣ : ಜಿ9 ಎಂಟರ್​ಟೇನ್ಮೆಂಟ್​
    ತಾರಾಗಣ : ರವಿಚಂದ್ರನ್​, ದಿಗಂತ್​, ಮೇನಾ ಗಾಂವ್ಕರ್​, ಧನ್ಯಾ ರಾಮಕುಮಾರ್​, ಲಕ್ಷ್ಮೀ ಗೋಪಾಲಸ್ವಾಮಿ, ಕೃಷ್ಣ ಹೆಬ್ಬಾಳೆ, ಸುಜಯ್​ ಶಾಸ್ತ್ರಿ, ರಂಗಾಯಣ ರು ಮುಂತಾದವರು.

    THE JUDGEMENT REVIEW : ಕಾನೂನು ವ್ಯವಸ್ಥೆಯ ಪ್ಲಸ್​ ಮತ್ತು ಮೈನಸ್​

    “ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಆದರೆ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಎನ್ನುತ್ತದೆ ನ್ಯಾಯಶಾಸ್ತ್ರ. ನಿರ್ದೇಶಕ ಗುರುರಾಜ ಕುಲಕರ್ಣಿ “ದ ಜಡ್ಜ್​ಮೆಂಟ್​’ ಕಥೆಯನ್ನೂ ಅದೇ ಹಿನ್ನೆಲೆಯಲ್ಲಿ ಮಾಡಿಕೊಂಡಿದ್ದಾರೆ. ಅದರಲ್ಲಿ ಕೊಲೆ, ಹವಾಲಾ ಹಣ, ಕ್ರಿಪ್ಟೋ ಕರೆನ್ಸಿ, ಭ್ರಷ್ಟಾಚಾರ, ಮಾಫಿಯಾ, ರಾಜಕೀಯ ಮೇಲಾಟ, ಸಾಮಾನ್ಯರ ಒದ್ದಾಟ, ಹೋರಾಟ, ಹೊಡೆದಾಟ, ಕೋರ್ಟ್​ನಲ್ಲಿ ವಿಚಾರಣೆಯ ನೋಟ, ಭಾರತೀಯ ಕಾನೂನು ಸಂಹಿತೆಯ ಒಳನೋಟ… ಎಲ್ಲವೂ ಇದೆ. ಸಾಕಷ್ಟು ಅಧ್ಯಯನ ನಡೆಸಿ, ಹಳೆಯ ಕೇಸ್​ಗಳನ್ನು ಹುಡುಕಿ, ಕಾಲ್ಪನಿಕ ಕಥೆಯಲ್ಲಿ ಹೂರಣದಂತೆ ಬೆರೆಸಿ, ನೈಜತೆಗೆ ಹತ್ತಿರವಿರುವಂತೆ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ ಗುರುರಾಜ್​.

    THE JUDGEMENT REVIEW : ಕಾನೂನು ವ್ಯವಸ್ಥೆಯ ಪ್ಲಸ್​ ಮತ್ತು ಮೈನಸ್​

    ಆತ ಅನಿಲ್​ (ದಿಗಂತ್​), ಕೊಲೆ ಆರೋಪದಲ್ಲಿ ಬಂಧಿಯಾಗುತ್ತಾನೆ. ಸರ್ಕಾರದ ಪರ ವಕೀಲ ಗೋವಿಂದ್​ (ರವಿಚಂದ್ರನ್​) ಕೋರ್ಟ್​ನಲ್ಲಿ ವಾದ ಮಾಡಿ, ಅನಿಲ್​ಗೆ 20 ವರ್ಷ ಜೈಲು ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತಾರೆ. ಆದರೆ, ಇನ್ನೆರಡು ಕೊಲೆಗಳು ನಡೆದು, ಹೊಸ ಟ್ವಿಸ್ಟ್​ ಪಡೆಯುವ ಪ್ರಕರಣದ ಬೆನ್ನತ್ತುವ ಗೋವಿಂದ್​ಗೆ ಹೊಸ ಹೊಸ ಸತ್ಯಗಳ ಅನಾವರಣವಾಗುತ್ತದೆ. ಅನಿಲ್​ ವಿಷಯದಲ್ಲಿ ತಪು$್ಪ ಮಾಡುಬಿಟ್ಟೆನಾ? ಎಂದು ಅಪರಾಧ ಮನೋಭಾವ ಕಾಡಲಾರಂಭಿಸುತ್ತದೆ. ಹಾಗಾದರೆ ಅನಿಲ್​ ಕೊಲೆ ಮಾಡಿಲ್ಲವೇ? ಅಥವಾ ಬೇರೆಯವರ ಅಪರಾಧ ಆತನ ಮೇಲೆ ಆರೋಪ ಬಂದಿರುತ್ತಾ? ನಿರಪರಾಧಿಯಾಗಿದ್ದರೂ ಆರೋಪ ಸಾಬೀತಾಗಿದ್ದು ಹೇಗೆ? ಗೋವಿಂದ್​ ಮತ್ತೆ ಅನಿಲ್​ ಪರ ನಿಲ್ಲುತ್ತಾರಾ? ಮುಂದೇನಾಗುತ್ತೆ ಎಂಬುದೇ “ದ ಜಡ್ಜ್​ಮೆಂಟ್​’.

    THE JUDGEMENT REVIEW : ಕಾನೂನು ವ್ಯವಸ್ಥೆಯ ಪ್ಲಸ್​ ಮತ್ತು ಮೈನಸ್​

    ನಮ್ಮ ಸುತ್ತಮುತ್ತ ನಡೆದ, ನಡೆಯುತ್ತಿರುವ ಟನೆಗಳ ಸುತ್ತ ಕಥೆ ಮಾಡಿಕೊಂಡಿರುವುದು ಚಿತ್ರದ ಪ್ಲಸ್​. “ಚೆಂಗಾರೆಡ್ಡಿ ವರ್ಸಸ್​ ಆಂಧ್ರ ಪ್ರದೇಶ ಸರ್ಕಾರ 1996′, “ಅಖಿಲೇಷ್​ ಯಾದವ್​ ವರ್ಸಸ್​ ಬಿಹಾರ 2022′, “ಶರತ್​ ವರ್ಸಸ್​ ಮಹಾರಾಷ್ಟ್ರ’, “ಛಾಯಾ ಗುರ್ಜರ್​ ವರ್ಸಸ್​ ಮಧ್ಯ ಪ್ರದೇಶ’, “ಅಮೀರ್​ ಖಾನ್​ ವರ್ಸಸ್​ ಉತ್ತರಾಂಚಲ್​’ ಸೇರಿ ಹಲವು ಪ್ರಕರಣಗಳ ಕುರಿತು ರೆರೆನ್ಸ್​ ನೀಡಿರುವುದು ಚಿತ್ರವನ್ನು ನೈಜತೆಗೆ ಹತ್ತಿರವಾಗಿಸಿದೆ. 151 ನಿಮಿಷಗಳ ಸಿನಿಮಾ ಗಟ್ಟಿ ಚಿತ್ರಕಥೆಯ ಮೂಲಕ ನೋಡಿಸಿಕೊಂಡು ಹೋಗುತ್ತದೆ. ಲಾಯರ್​ ಗೋವಿಂದ್​ ಪಾತ್ರದಲ್ಲಿ ರವಿಚಂದ್ರನ್​, ಅಮಾಯಕ ಅನಿಲ್​ ಆಗಿ “ಟ್ವಿಂಕಲ್​ ಸ್ಟಾರ್​’ ದಿಗಂತ್​, ಆತನ ಅಸಹಾಯಕ ತಂದೆಯಾಗಿ ರಂಗಾಯಣ ರು, ವಿಭಿನ್ನ ಮ್ಯಾನರಿಸಂ ಮೂಲಕ ಕೃಷ್ಣ ಹೆಬ್ಬಾಳೆ ಮಿಂಚಿದ್ದಾರೆ. ಆಗಾಗ ಸುಜಯ್​ ಶಾಸ್ತ್ರಿ ನಗಿಸುತ್ತಾರೆ. ಉಳಿದಂತೆ ಮೇನಾ, ಧನ್ಯಾ, ಲಕ್ಷ್ಷಿ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. “ದ ಜಡ್ಜ್​ಮೆಂಟ್​’ ಕನ್ನಡದ ಮಟ್ಟಿಗೆ ಅಪರೂಪದ ಕೋರ್ಟ್​ರೂಮ್​ ಥ್ರಿಲ್ಲರ್​.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts