More

    ಹಳೆಯ ಕಥೆಗೆ ಎಳ್ಳು-ನೀರು ಬಿಟ್ಟು ಹೊಸ ಚಿತ್ರದತ್ತ ರವಿ ಶ್ರೀವತ್ಸ …

    ಬೆಂಗಳೂರು: ಕಳೆದ ವರ್ಷದ ಕೊನೆಯಲ್ಲಿ ರವಿ ಶ್ರೀವತ್ಸ, ‘ಎಂಆರ್’ ಎಂಬ ಚಿತ್ರವನ್ನು ನಿರ್ದೇಶಿಸುವುದಕ್ಕೆ ಹೊರಟಿದ್ದು ಗೊತ್ತೇ ಇದೆ. ಮುತ್ತಪ್ಪ ರೈ ಜೀವನವನ್ನಾಧರಿಸಿದ ಈ ಚಿತ್ರಕ್ಕೆ ಮುಹೂರ್ತ ಸಹ ಆಗಿತ್ತು. ಆದರೆ, ಚಿತ್ರವು ಕಾರಣಾಂತರಗಳಿಂದ ನಿಂತು ಹೋಯಿತು. ಆ ನಂತರ ರವಿ ಶ್ರೀವತ್ಸ, ‘ಡಿಆರ್’ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿದರು. ಈ ಚಿತ್ರ ಸಹ ಟೇಕಾಫ್​ ಆಗಲಿಲ್ಲ ಇಲ್ಲ.

    ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​ ಸೋಂಕಿತರ ಆರೋಗ್ಯ ವಿಚಾರಿಸಿ, ಕುಣಿದು ರಂಜಿಸಿದ ಹರ್ಷಿಕಾ-ಭುವನ್​

    ಈಗ ಅವರೆಡನ್ನೂ ಬಿಟ್ಟು ಇನ್ನೊಂದು ಹೊಸ ಚಿತ್ರಕ್ಕೆ ಕೈಹಾಕಿದ್ದಾರೆ ರವಿ. ಅವರಿಗೆ ಮನೊದಲು ಹೆಸರು ತಂದುಕೊಟ್ಟ ಚಿತ್ರ ‘ಡೆಡ್ಲಿ’. ಆ ನಂತರ ಅವರು ‘ಡೆಡ್ಲಿ 2’ ಮಾಡಿದರು. ಇದೀಗ ‘ಡೆಡ್ಲಿ 3’ ಮಾಡುವುದಕ್ಕೆ ಹೊರಟಿದ್ದಾರೆ. ‘ಎಂಆರ್’ ನಲ್ಲಿ ನಟಿಸಬೇಕಿದ್ದ ದೀಕ್ಷಿತ್, ಇಲ್ಲೂ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಸೋಮವಾರ ದೀಕ್ಷಿತ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಹೊಸ ಚಿತ್ರದ ಘೋಷಣೆ ಮಾಡಲಾಗಿದೆ.

    ‘ಡೆಡ್ಲಿ 3’ ಕುರಿತು ಮಾತನಾಡಿರುವ ರವಿ ಶ್ರೀವತ್ಸ, ‘ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ಮಾಡುವ ಛಲ ಇದೆ. ಇಲ್ಲಸಲ್ಲದ ಗಲಾಟೆಗಳನ್ನು ಮಾಡಿಕೊಂಡು ಸಿನಿಮಾ ಮಾಡುವ ಮನುಷ್ಯ ನಾನಲ್ಲ. ಅದೇ ಕಾರಣಕ್ಕೆ ಆ ಕಥೆಗೆ (ಎಂಆರ್) ಎಳ್ಳು-ನೀರು ಬಿಟ್ಟು ಹೊಸ ಸಿನಿಮಾ ಪ್ರಾರಂಭಿಸಿದ್ದೇನೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಗುಟ್ಟಾಗಿ ಮದ್ವೆಯಾಗಿದ್ದಕ್ಕೆ ಕಾರಣ ಕೊಟ್ಟು ಕ್ಷಮೆ ಕೋರಿದ ನಟಿ ಪ್ರಣೀತಾ!

    ‘ಎಂಆರ್’ ಚಿತ್ರಕ್ಕೆ ಕೆಲಸ ಮಾಡಬೇಕಿದ್ದ ತಂತ್ರಜ್ಞರೇ ಈ ಚಿತ್ರದಲ್ಲೂ ಕೆಲಸ ಮಾಡಲಿದ್ದು, ಲಾಕ್‌ಡೌನ್ ಮುಗಿದ ನಂತರ ‘ಡೆಡ್ಲಿ 3’ ಪ್ರಾರಂಭವಾಗುವ ಸಾಧ್ಯತೆ ಇದೆ.

    ‘ದಿ ಫ್ಯಾಮಿಲಿ ಮ್ಯಾನ್​’ ವಿವಾದ: ಸಮಂತಾ ಯಾಕೆ ಮಾತಾಡ್ತಿಲ್ಲ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts