ಹೈದರಾಬಾದ್: ರಶ್ಮಿಕಾ ಮಂದಣ್ಣ ಎಂಬ ಅಚ್ಚ ಕನ್ನಡತಿ ಇದೀಗ ಟಾಲಿವುಡ್ನಲ್ಲಿ ಮೋಸ್ಟ್ ವಾಂಟೆಡ್ ನಟಿಯಾಗಿಬಿಟ್ಟಿದ್ದಾರೆ. ಈಗಾಗಲೇ ಮಹೇಶ್ ಬಾಬು, ಅಲ್ಲು ಅರ್ಜುನ್ರಂತಹ ಸ್ಟಾರ್ಗಳ ಜತೆಗೆ ನಟಿಸಿರುವ ರಶ್ಮಿಕಾ, ಇದೀಗ ‘ಆಚಾರ್ಯ’ ಚಿತ್ರದಲ್ಲಿ ರಾಮ್ಚರಣ್ ತೇಜ ನಾಯಕಿಯಾಗಿ ನಟಿಸುತ್ತಿರುವ ಸುದ್ದಿ ಇದೆ.
ಈ ಮಧ್ಯೆ, ಅವರು ನಾಗಾರ್ಜುನ ಅವರ ಎರಡನೆಯ ಮಗ ಅಖಿಲ್ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿ ಶುಕ್ರವಾರದಿಂದ ಟಾಲಿವುಡ್ನಲ್ಲಿ ಹರಿದಾಡುತ್ತಿದ್ದು, ಶನಿವಾರ ಸ್ಯಾಂಡಲ್ವುಡ್ನಲ್ಲೂ ಕೇಳಿ ಬರುತ್ತಿದೆ.
ಇದನ್ನೂ ಓದಿ: ತಾಯಿಯ ಹೆಸರಲ್ಲಿ ಒಂದೊಳ್ಳೆಯ ಕೆಲಸ ಮಾಡುವುದಕ್ಕೆ ಹೊರಟಿದ್ದಾರೆ ಸೋನು …
‘ಮನಂ’ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟ ಅಖಿಲ್ ಅಕ್ಕಿನೇನಿಗೆ ಇನ್ನೂ ಜಬರ್ದಸ್ತ್ ಎನ್ನುವಂತಹ ಹಿಟ್ ಸಿಕ್ಕಿಲ್ಲ. ಇದುವರೆಗೂ ಅಖಿಲ್ ಅಭಿನಯದ ಬೆರಳಣಿಕೆಯಷ್ಟು ಚಿತ್ರಗಳು ಬಿಡುಗಡೆಯಾಗಿದ್ದು, ಯಾವ ಚಿತ್ರ ಸಹ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿಲ್ಲ. ಅಖಿಲ್ ನಟಿಸುತ್ತಿರುವ ‘ಮೋಸ್ಟ್ ಎಲಿಜಬಲ್ ಬ್ಯಾಚಲರ್’ ಎಂಬ ಚಿತ್ರ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸಾಕಷ್ಟು ಸುದ್ದಿ ಮಾಡುತ್ತಿದೆ.
ಈ ಮಧ್ಯೆ, ಅಖಿಲ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಸುರೇಂದ್ರ ರೆಡ್ಡಿ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ಅಖಿಲ್ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಕರೊನಾ ಹಾವಳಿ ಇರುವುದರಿಂದ, ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಈ ವರ್ಷದ ಕೊನೆಯಲ್ಲಿ ಚಿತ್ರ ಶುರುವಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ‘ರೈಡರ್’ ಮೋಷನ್ ಪೋಸ್ಟರ್ಗೆ ಒಂದು ಮಿಲಿಯನ್ ಹಿಟ್ಸ್
ಈ ಚಿತ್ರಕ್ಕೆ, ಅಖಿಲ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೊಂದು ಓಡಾಡುತ್ತಿದೆ. ಆದರೆ, ರಶ್ಮಿಕಾ ಆಗಲೀ, ಚಿತ್ರತಂಡದ ಬೇರೆ ಸದಸ್ಯರಾಗಲೀ, ಈ ವಿಷಯವನ್ನು ಇದುವರೆಗೂ ಬಹಿರಂಗಪಡಿಸುವುದಕ್ಕೆ ಮುಂದೆ ಬಂದಿಲ್ಲ.
ಹಾಗಾದರೆ, ಅಖಿಲ್ ಅಭಿನಯದ ಹೊಸ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರಾ, ಇಲ್ಲವಾ? ವೇಯ್ಟ್ ಅಂಡ್ ಸೀ …
ಕಂಗನಾ ಬಿಲ್ಡಿಂಗ್ ರಿಪೇರಿ ಮಾಡಿಸೋಕೆ ಅಂಬಾನಿಗಳು 200 ಕೋಟಿ ಕೊಡ್ತಾರಾ?