More

    ರಾಮ್​ಚರಣ್​ ಆಯ್ತು, ಈಗ ಅಖಿಲ್​ … ಇನ್ನೊಂದು ಚಿತ್ರದಲ್ಲಿ ರಶ್ಮಿಕಾ ಹೆಸರು

    ಹೈದರಾಬಾದ್: ರಶ್ಮಿಕಾ ಮಂದಣ್ಣ ಎಂಬ ಅಚ್ಚ ಕನ್ನಡತಿ ಇದೀಗ ಟಾಲಿವುಡ್​ನಲ್ಲಿ ಮೋಸ್ಟ್​ ವಾಂಟೆಡ್​ ನಟಿಯಾಗಿಬಿಟ್ಟಿದ್ದಾರೆ. ಈಗಾಗಲೇ ಮಹೇಶ್​ ಬಾಬು, ಅಲ್ಲು ಅರ್ಜುನ್​ರಂತಹ ಸ್ಟಾರ್​ಗಳ ಜತೆಗೆ ನಟಿಸಿರುವ ರಶ್ಮಿಕಾ, ಇದೀಗ ‘ಆಚಾರ್ಯ’ ಚಿತ್ರದಲ್ಲಿ ರಾಮ್​ಚರಣ್​ ತೇಜ ನಾಯಕಿಯಾಗಿ ನಟಿಸುತ್ತಿರುವ ಸುದ್ದಿ ಇದೆ.

    ಈ ಮಧ್ಯೆ, ಅವರು ನಾಗಾರ್ಜುನ ಅವರ ಎರಡನೆಯ ಮಗ ಅಖಿಲ್​ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿ ಶುಕ್ರವಾರದಿಂದ ಟಾಲಿವುಡ್​ನಲ್ಲಿ ಹರಿದಾಡುತ್ತಿದ್ದು, ಶನಿವಾರ ಸ್ಯಾಂಡಲ್​ವುಡ್​ನಲ್ಲೂ ಕೇಳಿ ಬರುತ್ತಿದೆ.

    ಇದನ್ನೂ ಓದಿ: ತಾಯಿಯ ಹೆಸರಲ್ಲಿ ಒಂದೊಳ್ಳೆಯ ಕೆಲಸ ಮಾಡುವುದಕ್ಕೆ ಹೊರಟಿದ್ದಾರೆ ಸೋನು …

    ‘ಮನಂ’ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟ ಅಖಿಲ್​ ಅಕ್ಕಿನೇನಿಗೆ ಇನ್ನೂ ಜಬರ್​ದಸ್ತ್​ ಎನ್ನುವಂತಹ ಹಿಟ್​ ಸಿಕ್ಕಿಲ್ಲ. ಇದುವರೆಗೂ ಅಖಿಲ್​ ಅಭಿನಯದ ಬೆರಳಣಿಕೆಯಷ್ಟು ಚಿತ್ರಗಳು ಬಿಡುಗಡೆಯಾಗಿದ್ದು, ಯಾವ ಚಿತ್ರ ಸಹ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿಲ್ಲ. ಅಖಿಲ್​ ನಟಿಸುತ್ತಿರುವ ‘ಮೋಸ್ಟ್​ ಎಲಿಜಬಲ್​ ಬ್ಯಾಚಲರ್​’ ಎಂಬ ಚಿತ್ರ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸಾಕಷ್ಟು ಸುದ್ದಿ ಮಾಡುತ್ತಿದೆ.

    ಈ ಮಧ್ಯೆ, ಅಖಿಲ್​ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಸುರೇಂದ್ರ ರೆಡ್ಡಿ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ಅಖಿಲ್​ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಕರೊನಾ ಹಾವಳಿ ಇರುವುದರಿಂದ, ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಈ ವರ್ಷದ ಕೊನೆಯಲ್ಲಿ ಚಿತ್ರ ಶುರುವಾಗುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ‘ರೈಡರ್​​’ ಮೋಷನ್​ ಪೋಸ್ಟರ್​ಗೆ ಒಂದು ಮಿಲಿಯನ್​ ಹಿಟ್ಸ್​

    ಈ ಚಿತ್ರಕ್ಕೆ, ಅಖಿಲ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೊಂದು ಓಡಾಡುತ್ತಿದೆ. ಆದರೆ, ರಶ್ಮಿಕಾ ಆಗಲೀ, ಚಿತ್ರತಂಡದ ಬೇರೆ ಸದಸ್ಯರಾಗಲೀ, ಈ ವಿಷಯವನ್ನು ಇದುವರೆಗೂ ಬಹಿರಂಗಪಡಿಸುವುದಕ್ಕೆ ಮುಂದೆ ಬಂದಿಲ್ಲ.

    ಹಾಗಾದರೆ, ಅಖಿಲ್​ ಅಭಿನಯದ ಹೊಸ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರಾ, ಇಲ್ಲವಾ? ವೇಯ್ಟ್​ ಅಂಡ್​ ಸೀ …

    ಕಂಗನಾ ಬಿಲ್ಡಿಂಗ್​ ರಿಪೇರಿ ಮಾಡಿಸೋಕೆ ಅಂಬಾನಿಗಳು 200 ಕೋಟಿ ಕೊಡ್ತಾರಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts