More

    ಕೊನೆಗೂ ರಾಮು ಅವರ ಆಸೆ ಈಡೇರಲೇ ಇಲ್ಲ …

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಅವರಿಗೆ ವಿಷ್ಣುವರ್ಧನ್​ ಅಭಿನಯದಲ್ಲಿ ಒಂದು ಚಿತ್ರ ನಿರ್ಮಾಣ ಮಾಡಬೇಕು ಎಂಬ ಆಸೆ ಇತ್ತು. ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳಾದರೂ, ಅದ್ಯಾಕೋ ವಿಷ್ಣುವರ್ಧನ್​ ಅಭಿನಯದಲ್ಲೊಂದು ಸಾಹಸಮಯ ಚಿತ್ರವೊಂದನ್ನು ನಿರ್ಮಿಸಬೇಕು ಎಂಬ ರಾಮು ಅವರ ಕನಸು ನನಸಾಗಲೇ ಇಲ್ಲ.

    ಇದನ್ನೂ ಓದಿ: ನನ್ನ ದೇಶಕ್ಕೆ ಸಹಾಯ ಮಾಡಿ … ಬೈಡೆನ್​ಗೆ ಪ್ರಿಯಾಂಕಾ ಮನವಿ

    ಬರೀ ವಿಷ್ಣುವರ್ಧನ್​ ಮಾತ್ರವಲ್ಲ, ಪುನೀತ್​ ಮತ್ತು ಯಶ್​ ಅಭಿನಯದ ಚಿತ್ರಗಳನ್ನು ಸಹ ನಿರ್ಮಿಸುವುದಕ್ಕೆ ಕಾರಣಾಂತರಗಳಿಂದ ಸಾಧ್ಯವಾಗಲೇ ಇಲ್ಲ. ಪುನೀತ್​ ರಾಜಕುಮಾರ್​, ಯಶ್​ ಬಿಟ್ಟರೆ ಇನ್ನೆಲ್ಲ ಟಾಪ್​ ಹೀರೋಗಳ ಜತೆಗೆ ಚಿತ್ರ ಮಾಡಿದ್ದರು ಎನ್ನುವುದು ವಿಶೇಷ.

    ಹೌದು, ಪುನೀತ್​ ಮತ್ತು ಯಶ್​ ಅವರನ್ನು ಹೊರತುಪಡಿಸಿದರೆ, ಮಿಕ್ಕಂತೆ ಕನ್ನಡ ಚಿತ್ರರಂಗದ ಎಲ್ಲ ಜನಪ್ರಿಯ ನಟರ ಜತೆಗೂ ರಾಮು ಸಿನಿಮಾ ಮಾಡಿದ್ದರು ಎನ್ನವುದು ವಿಶೇಷ. ಅದರಲ್ಲೂ ಶಿವರಾಜಕುಮಾರ್​ ಅವರ ಜತೆಗೆ ಹೆಚ್ಚು ಚಿತ್ರಗಳನ್ನು ಅವರು ಮಾಡಿದ್ದರು. ‘ಸಿಂಹದ ಮರಿ’, ‘ಎಕೆ 47’, ‘ಬಾವ ಭಾಮೈದ’, ‘ನಂಜುಂಡಿ’, ‘ರಾಕ್ಷಸ’ ಮತ್ತು ‘ತವರಿನ ಸಿರಿ’ ಚಿತ್ರಗಳನ್ನು ಶಿವರಾಜಕುಮಾರ್​ ಅಭಿನಯದಲ್ಲಿ ನಿರ್ಮಿಸಿದ್ದರು ರಾಮು’. ಶಿವರಾಜಕುಮಾರ್​ ಹೊರತುಪಡಿಸಿದರೆ, ರಾಮು ಜತೆಗೆ ‘ಹಾಲಿವುಡ್​’, ‘ಆಟೋ ಶಂಕರ್​’, ‘ಮಸ್ತಿ’ ಮತ್ತು ‘ರಜನಿ’ ಚಿತ್ರಗಳನ್ನು ರಾಮು ನಿರ್ಮಿಸಿದ್ದರು.

    ಇದನ್ನೂ ಓದಿ: ‘ಆಚಾರ್ಯ’ ರಿಲೀಸ್ ಮುಂದಕ್ಕೆ; ‘ಪುಷ್ಪ’ ಜತೆ ಮುಖಾಮುಖಿ ಆಗ್ತಾರಾ ಮೆಗಾಸ್ಟಾರ್!

    ಮಿಕ್ಕಂತೆ ರವಿಚಂದ್ರನ್​ ಜತೆಗೆ ‘ಮಲ್ಲ’, ಸುದೀಪ್​ ಜತೆಗೆ ‘ಕಿಚ್ಚ’ ಮತ್ತು ‘ಗೂಳಿ’, ದರ್ಶನ್​ ಜತೆಗೆ ‘ಕಲಾಸಿಪಾಳ್ಯ’, ಶ್ರೀಮುರಳಿ ಜತೆಗೆ ‘ಪ್ರೀತಿಗಾಗಿ’, ‘ದುನಿಯಾ’ ವಿಜಯ್​ ಜತೆಗೆ ‘ಕಂಠೀರವ’ ಮತ್ತು ‘ಶಿವಾಜಿನಗರ’, ಗಣೇಶ್​ ಜತೆಗೆ ’99’, ಪ್ರಜ್ವಲ್​ ಜತೆಗೆ ‘ಸಾಗರ್​’ ಮತ್ತು ‘ಅರ್ಜುನ್​ ಗೌಡ’, ಚಿರಂಜೀವಿ ಸರ್ಜಾ ಜತೆಗೆ ‘ಗಂಡೆದೆ’, ‘ಡಾರ್ಲಿಂಗ್’ ಕೃಷ್ಣ ಜತೆಗೆ ‘ಮುಂಬೈ’ ಚಿತ್ರಗಳನ್ನು ಅವರು ನಿರ್ಮಿಸಿದ್ದರು.

    ಕರೊನಾ ಜತೆ ಹೋರಾಡಿದೆವು, ಒಟ್ಟಿಗೆ ಜಯಿಸಿದೆವು!; ನಿಟ್ಟುಸಿರು ಬಿಟ್ಟ ಕೃಷ್ಣ- ಮಿಲನಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts