ಕೋಲಾರ: ಸಾವಯವ ಗೊಬ್ಬರ ಬಳಸಿ ರಾಗಿ ಬೆಳೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು. ರಾಗಿ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯವೃದ್ಧಿಯಾಗುತ್ತದೆ ಎಂದು ರೈತ ಮುಳಗಾಳಪ್ಪ ಹೇಳಿದರು.
ತಾಲೂಕಿನ ಚೌಡದೇನಹಳ್ಳಿಯಲ್ಲಿ ಶುಕ್ರವಾರ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಈ ನೆಲ ಈ ಜಲ ಕಲೆ ಮತ್ತು ಸಾಂಸತಿಕ ಸಂಸ್ಥೆಯಿಂದ ಪ್ರಗತಿಪರ ರೈತ ರಾಗಿ ಲಕ್ಷ್ಮಣಯ್ಯ ಸ್ಮರಣಾರ್ಥ ಹಮ್ಮಿಕೊಂಡಿದ್ದ ಯುವಜನರೊಂದಿಗೆ ರಾಗಿ ತಳಿಗಳ ಬಗ್ಗೆ ಮಾತುಕತೆ ಮತ್ತು ಪ್ರಯೋಗಿಕ ಕಲಿಕೆ ತರಬೇತಿಯಲ್ಲಿ ಮಾತನಾಡಿದರು. ಕಡ್ಡಿ ರಾಗಿ ಒಂದು ಎಕರೆಗೆ 10 ಮೂಟೆ ರಾಗಿ ಆಗುತ್ತಿತ್ತು, ಇಂಡಾಫ್ ಬಂದ ಮೇಲೆ 20-30 ಮೂಟೆ ರಾಗಿ ಬೆಳೆದಿದ್ದೇವೆ. ಈಗ ರಾಸಾನಿಕ ವಸ್ತುಗಳನ್ನು ಬಳಸುತ್ತಿರುವುದರಿಂದ ರಾಗಿ ಬೆಳೆಯು ವಿಲವಾಗುತ್ತದೆ. ಆದಷ್ಟು ರೈತರು ಸಾವಯವ ಗೊಬ್ಬರ ಬಳಸಲು ಒತ್ತು ನೀಡಬೇಕು. ರಾಗಿಮುದ್ದೆ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಹೂಹಳ್ಳಿ ನಾಗರಾಜ್ ಮಾತಾನಾಡಿ, ಲಕ್ಷ್ಮಣಯ್ಯನವರು ಸುಮಾರು 23 ಅಧಿಕ ಇಳುವರಿಯ ತಳಿಗಳನ್ನು ಕಂಡುಹಿಡಿದ ವಿಜ್ಞಾನಿ. ರಾಗಿ ಲಕ್ಷ್ಮಣಯ್ಯ ಎನ್ನುವ ಹೆಸರಿನಿಂದ ಪ್ರಖ್ಯಾತರಾಗಿದ್ದಾರೆ. ಮಂಡ್ಯದ ವಿಸಿ ಫಾಮ್ರ್ ಅವರ ಕಾರ್ಯಕ್ಷೇತ್ರ.1951 ರಿಂದ 1964ರವರೆಗೆ ನಮ್ಮ ರಾಜ್ಯದ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ ರಾಗಿ ತಳಿಗಳನ್ನು ಬಿಡುಗಡೆ ಮಾಡಿದರು. ಈ ತಳಿಗಳಿಂದ ಶೇ. 50ರಷ್ಟು ಅಧಿಕ ಇಳುವರಿ ಪಡೆಯಲು ಸಾಧ್ಯವಾಯಿತು ಎಂದರು.
ತರಬೇತಿಯಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್, ಈನೆಲ ಈ ಜಲ ಸಂಸ್ಥೆಯ ಅಧ್ಯಕ್ಷ ವೆಂಕಟಚಲಪತಿ, ಮಹಿಳಾ ಸಂರಕ್ಷಣಾ ಸಮಿತಿ ಅಧ್ಯೆ ಶಶಿಕಲಾ, ಲಕ್ಷ್ಮೀದೇವಿ, ಗಿರಿಜಾ ಇದ್ದರು.