ನವದೆಹಲಿ: ನಟರಾದ ರಕ್ಷಿತ್ ಶೆಟ್ಟಿ, ಅನಿರುದ್ಧ್, ನಿರ್ದೇಶಕ ಕಿರಣ್ ರಾಜ್ ಅವರು ಇಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಯವರಿಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.
ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿಗೆ ಕನ್ನಡದ 777 ಚಾರ್ಲಿ ಪಾತ್ರವಾದ ಹಿನ್ನೆಲೆಯಲ್ಲಿ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ, ನಟ ಕಿರಣ್ ರಾಜ್ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರ ವಿಶೇಷ ಉಲ್ಲೇಖ ಪ್ರಶಸ್ತಿಗೆ ಪಾತ್ರವಾಗಿದ್ದು, ಅದರ ನಿರ್ದೇಶಕ, ನಟ ಅನಿರುದ್ಧ್ ಪ್ರಶಸ್ತಿ ಸ್ವೀಕರಿಸಿದರು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದರ ರಕ್ಷಿತ್ ಶೆಟ್ಟಿ, ಅನಿರುದ್ಧ್, ಕಿರಣ್ ರಾಜ್ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಅಭಿನಂದನೆಗಳನ್ನು ತಿಳಿಸಿ, ಕನ್ನಡ ಚಿತ್ರರಂಗವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದ್ದಾರೆ.
777 ಚಾರ್ಲಿಯ ನಿರ್ಮಾಪಕ @rakshitshetty ಮತ್ತು ನಿರ್ದೇಶಕ@Kiranraj61 ಅವರಿಗೆ ಅಭಿನಂದನೆಗಳು.
ಸರ್ವ ಶ್ರೇಷ್ಠ ರಜತ ಕಮಲ ಪಡೆದಿರುವ ಕನ್ನಡದ ಅತ್ಯುತ್ತಮ ಸಿನಿಮಾ,
ನಮ್ಮ ಹೆಮ್ಮೆ ! #69Nationalfilmaward pic.twitter.com/qm7hKe58WA— Rishab Shetty (@shetty_rishab) October 17, 2023