More

    ನನ್ನ ಎಮ್ಮೆ ಸಾವಿಗೆ ಗ್ರಾಮದ ಮೇಲೆ ಹಾರಿ ಹೋದ ಹೆಲಿಕಾಪ್ಟರ್​ ಕಾರಣ! ಪೈಲಟ್​ ವಿರುದ್ಧ ರೈತನ ದೂರು

    ಜೈಪುರ: ಹೆಲಿಕಾಪ್ಟರ್​ ಶಬ್ದಕ್ಕೆ ನನ್ನ ಎಮ್ಮೆ ಸತ್ತಿದೆ ಎಂದು ರೈತನೊಬ್ಬ ದೂರು ನೀಡಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ಥಾನದ ಅಲ್ವಾರ್​ ಜಿಲ್ಲೆಯ ಬಹ್ರೋಡ್​ ವಿಧಾನಸಭಾ ಕ್ಷೇತ್ರದ ಶಾಸಕ ಬಲ್ಜೀತ್​ ಯಾದವ್​ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಕಾರ್ಯಕರ್ತರು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಹೆಲಿಕಾಪ್ಟರ್​ ಮೂಲಕ ಹೂಮಳೆ ಸುರಿಸಿ ಗ್ರ್ಯಾಂಡ್​ ವೆಲ್​ಕಮ್​ ಮಾಡಲು ಬಯಸಿದ್ದರು. ತಮ್ಮ ಯೋಜನೆಯಂತೆ ಭಾನುವಾರ ಶಾಸಕರು ಬಂದಾಗ ಬಹ್ರೋಡ್​ ವೃತ್ತದಲ್ಲಿ ಹೆಲಿಕಾಪ್ಟರ್​​ ಮೂಲಕ ಹೂಮಳೆ ಸುರಿಸಿದ್ದರು. ಇದಾದ ಬಳಿಕ ಹೆಲಿಕಾಪ್ಟರ್​ ಕೊಹ್ರಾನಾ ಗ್ರಾಮದ ಮೂಲಕ ಹಾದು ಹೋಯಿತು.

    ಹೆಲಿಕಾಪ್ಟರ್​ ಅತ್ಯಂತ ಕೆಳಗೆ ಹಾರಾಟ ನಡೆಸಿದ ಪರಿಣಾಮ ಭಾರಿ ಶಬ್ದ ಉಂಟಾಗಿದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ಕಿರಿಕಿರಿಯಾಗಿದೆ. ಆದರೆ, ವಿಚಿತ್ರ ಏನೆಂದರೆ, ಕೊಹ್ರಾನಾ ಗ್ರಾಮದ ಬಲ್ವೀರ್​ ಎಂಬ ರೈತ ವಿಚಿತ್ರ ಆರೋಪವೊಂದನ್ನು ಮಾಡಿದ್ದಾರೆ. ಒಂದೂವರೆ ಲಕ್ಷ ರೂ. ಮೌಲ್ಯದ ತನ್ನ ಎಮ್ಮೆ ಹೆಲಿಕಾಪ್ಟರ್​ ಸದ್ದಿನಿಂದ ಮೃತಪಟ್ಟಿದೆ ಎಂದು ಆರೋಪ ಮಾಡಿದ್ದಾರೆ.

    ಎಮ್ಮೆ ಮೃತಪಟ್ಟ ಸಂಬಂಧ ಹೆಲಿಕಾಪ್ಟರ್​ ಪೈಲಟ್​ ವಿರುದ್ಧ ರೈತ ದೂರು ದಾಖಲಿಸಿದ್ದಾನೆ. ಇದರ ಬೆನ್ನಲ್ಲೇ ಎಮ್ಮೆಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷಾ ವರದಿ ಬಂದು ಸಾವಿಗೆ ಕಾರಣ ಗೊತ್ತಾದ ಬಳಿಕ ಪೊಲೀಸರು ಪ್ರಕರನ ದಾಖಲಿಸಲಿದ್ದಾರೆ. (ಏಜೆನ್ಸೀಸ್​)

    ಯಕ್ಷಗಾನಕ್ಕೆ ಅವಮಾನ ಮಾಡಿದ್ರಾ ಸಿದ್ದರಾಮಯ್ಯ..? ಕ್ಷಮೆ ಕೇಳಿ ಅಂತಿದೆ ಬಿಜೆಪಿ!

    ಸಾರಿಗೆ ಇಲಾಖೆಯಲ್ಲಿ ಕ್ಲರಿಕಲ್ ಸಿಬ್ಬಂದಿಗೆ ತರಾತುರಿ ಬಡ್ತಿ: ಇಂದು ಕಮಿಷನರ್ ಕಚೇರಿಯಲ್ಲಿ ಮುಂಬಡ್ತಿ ಸಮಿತಿ ಸಭೆ

    ಪದವೀಧರರಿಗೆ ಮುಂಬಡ್ತಿ, ಶಾಲಾ ಶಿಕ್ಷಕರಿಗೆ ಗುಡ್​ನ್ಯೂಸ್; ಶೇ.60 ಹುದ್ದೆಗೆ ನೇರ ನೇಮಕಾತಿ, ಶೇ.40 ಹುದ್ದೆ ಬಡ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts