ಜೈಪುರ: ಹೆಲಿಕಾಪ್ಟರ್ ಶಬ್ದಕ್ಕೆ ನನ್ನ ಎಮ್ಮೆ ಸತ್ತಿದೆ ಎಂದು ರೈತನೊಬ್ಬ ದೂರು ನೀಡಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬಹ್ರೋಡ್ ವಿಧಾನಸಭಾ ಕ್ಷೇತ್ರದ ಶಾಸಕ ಬಲ್ಜೀತ್ ಯಾದವ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಕಾರ್ಯಕರ್ತರು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸಿ ಗ್ರ್ಯಾಂಡ್ ವೆಲ್ಕಮ್ ಮಾಡಲು ಬಯಸಿದ್ದರು. ತಮ್ಮ ಯೋಜನೆಯಂತೆ ಭಾನುವಾರ ಶಾಸಕರು ಬಂದಾಗ ಬಹ್ರೋಡ್ ವೃತ್ತದಲ್ಲಿ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸಿದ್ದರು. ಇದಾದ ಬಳಿಕ ಹೆಲಿಕಾಪ್ಟರ್ ಕೊಹ್ರಾನಾ ಗ್ರಾಮದ ಮೂಲಕ ಹಾದು ಹೋಯಿತು.
ಹೆಲಿಕಾಪ್ಟರ್ ಅತ್ಯಂತ ಕೆಳಗೆ ಹಾರಾಟ ನಡೆಸಿದ ಪರಿಣಾಮ ಭಾರಿ ಶಬ್ದ ಉಂಟಾಗಿದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ಕಿರಿಕಿರಿಯಾಗಿದೆ. ಆದರೆ, ವಿಚಿತ್ರ ಏನೆಂದರೆ, ಕೊಹ್ರಾನಾ ಗ್ರಾಮದ ಬಲ್ವೀರ್ ಎಂಬ ರೈತ ವಿಚಿತ್ರ ಆರೋಪವೊಂದನ್ನು ಮಾಡಿದ್ದಾರೆ. ಒಂದೂವರೆ ಲಕ್ಷ ರೂ. ಮೌಲ್ಯದ ತನ್ನ ಎಮ್ಮೆ ಹೆಲಿಕಾಪ್ಟರ್ ಸದ್ದಿನಿಂದ ಮೃತಪಟ್ಟಿದೆ ಎಂದು ಆರೋಪ ಮಾಡಿದ್ದಾರೆ.
ಎಮ್ಮೆ ಮೃತಪಟ್ಟ ಸಂಬಂಧ ಹೆಲಿಕಾಪ್ಟರ್ ಪೈಲಟ್ ವಿರುದ್ಧ ರೈತ ದೂರು ದಾಖಲಿಸಿದ್ದಾನೆ. ಇದರ ಬೆನ್ನಲ್ಲೇ ಎಮ್ಮೆಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷಾ ವರದಿ ಬಂದು ಸಾವಿಗೆ ಕಾರಣ ಗೊತ್ತಾದ ಬಳಿಕ ಪೊಲೀಸರು ಪ್ರಕರನ ದಾಖಲಿಸಲಿದ್ದಾರೆ. (ಏಜೆನ್ಸೀಸ್)
ಯಕ್ಷಗಾನಕ್ಕೆ ಅವಮಾನ ಮಾಡಿದ್ರಾ ಸಿದ್ದರಾಮಯ್ಯ..? ಕ್ಷಮೆ ಕೇಳಿ ಅಂತಿದೆ ಬಿಜೆಪಿ!
ಸಾರಿಗೆ ಇಲಾಖೆಯಲ್ಲಿ ಕ್ಲರಿಕಲ್ ಸಿಬ್ಬಂದಿಗೆ ತರಾತುರಿ ಬಡ್ತಿ: ಇಂದು ಕಮಿಷನರ್ ಕಚೇರಿಯಲ್ಲಿ ಮುಂಬಡ್ತಿ ಸಮಿತಿ ಸಭೆ
ಪದವೀಧರರಿಗೆ ಮುಂಬಡ್ತಿ, ಶಾಲಾ ಶಿಕ್ಷಕರಿಗೆ ಗುಡ್ನ್ಯೂಸ್; ಶೇ.60 ಹುದ್ದೆಗೆ ನೇರ ನೇಮಕಾತಿ, ಶೇ.40 ಹುದ್ದೆ ಬಡ್ತಿ