More

    ಹಳಿಗಳ ಮೇಲೆ ಧರಣಿ ಕೂತ ರೈತ ಪ್ರತಿಭಟನಾಕಾರರು; ಕೆಲವೆಡೆ ರೈಲು ಸಂಚಾರ ವ್ಯತ್ಯಯ

    ನವದೆಹಲಿ: ಉತ್ತರಪ್ರದೇಶದ ಲಖೀಂಪುರ್​ ಖೇರಿಯಲ್ಲಿ ಘಟನೆಯನ್ನು ವಿರೋಧಿಸಿ ಸಂಯುಕ್ತ ಕಿಸಾನ್​ ಮೋರ್ಚಾ ಕರೆದಿರುವ ‘ರೈಲ್ ರೋಕೋ’ ಅಂಗವಾಗಿ ಇಂದು ಹಲವು ಪ್ರಮುಖ ಸ್ಥಳಗಳಲ್ಲಿ ರೈಲುಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಜಾಬ್​, ಹರಿಯಾಣ ಮತ್ತು ಇತರ ಭಾಗಗಳಲ್ಲಿ ರೈಲು ಹಳಿಗಳ ಮೇಲೆ ರೈತರು ಧರಣಿ ಕೂತಿರುವ ಚಿತ್ರಣ ಕಂಡುಬಂದಿದೆ. ಹಲವೆಡೆ ರೈಲುಗಳ ಸಮಯದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾಯುತ್ತಾ ಕುಳಿತ ದೃಶ್ಯಗಳೂ ಕಂಡುಬಂದಿವೆ.

    ಲಖೀಂಪುರ್​ ಖೇರಿಯಲ್ಲಿ ನಾಲ್ಕು ಜನ ರೈತರ ಸಾವಿಗೆ ಕಾರಣವಾದ ಕಾರು ಕೇಂದ್ರ ಕಿರಿಯ ಗೃಹ ಸಚಿವ ಅಜಯ್​ ಮಿಶ್ರರಿಗೆ ಸೇರಿದ್ದಾದ್ದರಿಂದ ಅವರನ್ನು ಕೂಡಲೇ ವಜಾಗೊಳಿಸಿ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಈಗಾಗಲೇ ಕಾರನ್ನು ಓಡಿಸುತ್ತಿದ್ದ ಆರೋಪ ಎದುರಿಸುತ್ತಿರುವ ಸಚಿವರ ಪುತ್ರ ಆಶಿಶ್​ ಮಿಶ್ರ ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: ಮಂಡ್ಯ ಜಿಲ್ಲೆಗೆ ಸಿಹಿ ಸುದ್ದಿ: ಮೈಶುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಸಿಎಂ ನೇತೃತ್ವದಲ್ಲಿ ನಡೆದ ಸಭೆ ಸಕ್ಸಸ್

    ಇಂದು ಬೆಳಿಗ್ಗೆ 10 ರಿಂದ 4 ಗಂಟೆವರೆಗೆ ದೇಶದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಆಯಾ ಪ್ರದೇಶಗಳ ಜನರು ರೈಲುಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಾರೆ. ಭಾರತ ಸರ್ಕಾರ ಇದುವರೆಗೆ ನಮ್ಮೊಂದಿಗೆ ಮಾತನಾಡಿಲ್ಲ ಎಂದು ರೈತ ಮುಖಂಡ ರಾಕೇಶ್​ ತಿಕಾಯತ್ ಇಂದು ಬೆಳಿಗ್ಗೆ ಹೇಳಿಕೆ ನೀಡಿದ್ದಾರೆ.

    ನಾರ್ದರ್ನ್ ರೈಲ್ವೇ ಅಧಿಕಾರಿಗಳ ಪ್ರಕಾರ 30 ಸ್ಥಳಗಳಲ್ಲಿ ರೈಲು ತಡೆ ನಡೆದಿದ್ದು, ಈ ನಿಟ್ಟಿನಲ್ಲಿ 8 ರೈಲುಗಳ ಮಾರ್ಗವನ್ನು ನಿಯಂತ್ರಿಸಲಾಗುತ್ತಿದೆ. ಉತ್ತರಪ್ರದೇಶದ ಲಖನೌನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ರೈಲು ತಡೆಯಲ್ಲಿ ಭಾಗವಹಿಸಿ ಜನರಿಗೆ ತೊಂದರೆ ಉಂಟುಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆದರೆ ಫಿರೋಜ್​ಪುರ್​ ವಿಭಾಗದ ಕೆಲವೆಡೆ ರೈಲು ಸಂಚಾರ ವ್ಯತ್ಯಯವಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಪರಸ್ಪರ ತಬ್ಬಿಕೊಂಡು ಜವರಾಯನ ಕರೆಗೆ ಓಗೊಟ್ಟ ತಾಯಿ-ಮಗ, ಮುಗ್ಧ ಮಕ್ಕಳು! ಮನ ಕಲಕುತ್ತೆ ಕೇರಳದ ಕಥೆ-ವ್ಯಥೆ

    ಪಾಪ ಪಾಂಡು ಖ್ಯಾತಿಯ ಹಿರಿಯ ಕಲಾವಿದ ಶಂಕರ್ ರಾವ್​ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts