More

    ಯುವರಾಜ್​ ನನಗೆ ಕೋಟಿ ಕೊಟ್ಟಿಲ್ಲ, 75 ಲಕ್ಷ ಕೊಟ್ಟಿದ್ದಾರೆ; ಯುವರಾಜ್​ ಜತೆಗಿನ ಸಂಬಂಧದ ಬಗ್ಗೆ ಮಾಹಿತಿ ಬಿಚ್ಚಿಟ್ಟ ರಾಧಿಕಾ ಕುಮಾರಸ್ವಾಮಿ

    ಬೆಂಗಳೂರು: ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಆರೋಪಿ ಯುವರಾಜನ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಕೇಳಿಬರುತ್ತಿದ್ದಂತೆಯೇ ಸುದ್ದಿಗೋಷ್ಠಿ ಕರೆದ ನಟಿ ಇದೀಗ ಕೆಲವೊಂದಿಷ್ಟು ಸ್ಪಷ್ಟನೆ ನೀಡಿದ್ದಾರೆ. ನನಗೂ ಯುವರಾಜನಿಗೂ ಸಿನಿಮಾ ಹೊರೆತಾಗಿ ಬೇರಾವ ಸಂಬಂಧವೂ ಇಲ್ಲ ಎಂದು ನಟಿ ತಿಳಿಸಿದ್ದಾರೆ.

    ಇದನ್ನೂ ಓದಿ: ಗಂಡ ಸಂಶಯ ಪಿಶಾಚಿ- ಡಿವೋರ್ಸ್​ ಪಡೆದರೆ ನನ್ನ ವಸ್ತುಗಳು ವಾಪಸ್​ ಸಿಗುತ್ತವೆಯೆ?

    ಯುವರಾಜ್ ನನಗೆ 15 ವರ್ಷದಿಂದ ಪರಿಚಯ. ನಮ್ಮ ತಂದೆ ಕಾಲದಿಂದಲೂ ಪರಿಚಯವಿರುವ ವ್ಯಕ್ತಿ ಅವರು. ಅಸ್ಟ್ರಾಲಜಿ ಹೇಳುತ್ತಿದ್ದರು. ಯುವರಾಜ್​ದು ವೈಷ್ಣವಿ ಹೆಸರಿನ ಪ್ರೊಡಕ್ಷನ್ ಹೌಸ್ ಇದೆ. ಅದೇ ಬ್ಯಾನರ್​ನಲ್ಲಿ ಐತಿಹಾಸಿಕ ಸಿನೆಮಾ ಮಾಡಲು ನಮಗೆ ಹೇಳಿದ್ದರು. ನಾಟ್ಯ ರಾಣಿ ಶಾಕುಂತಲ ಸಿನಿಮಾ ಮಾಡಲು ನಾನು ಒಪ್ಪಿದ್ದೆ. ಅದೇ ಸಿನೆಮಾ ವಿಚಾರಕ್ಕೆ 16 ಲಕ್ಷ ನನಗೆ ಅಡ್ವಾನ್ಸ್ ಮಾಡಿದ್ರು. ಆಗ ನಾನು ಟೀಂ ಸೆಟ್ ಮಾಡೋಣ ಅಂತ ಹೇಳಿದ್ದೆ. ಇದಾಗಿದ್ದು 2020ರ ಫೆಬ್ರವರಿಯಲ್ಲಿ. ಆಮೇಲೆ ಬೇರೆ ಪ್ರೊಡ್ಯುಸರ್ ಮೂಲಕ 60 ಲಕ್ಷ ರೂಪಾಯಿ ಹಾಕಿಸಿದ್ದರು. ಆ ಪ್ರೊಡ್ಯೂಸರ್​ ನಮ್ಮ ಬಾವ ಎಂದು ಹೇಳಿದ್ದರು ಎಂದು ನಟಿ ಹೇಳಿದ್ದಾರೆ.

    ಯುವರಾಜ್​ ಅವರು ಈ ಹಿಂದೆ ಪೂಜೆ ಮಾಡಿಸೋಕೆ ಹೇಳಿದ್ದರು. ಆಗ ನಾವೆಲ್ಲಾ ದೆಹಲಿಯಲ್ಲಿದ್ದೆವು. ಆಗ ಯುವರಾಜ್ ಕರೆ ಮಾಡಿ ಮಾತನಾಡಿದ್ದರು. ಸಿನಿಮಾ ಮಾಡೋಣ ಅಂದಿದ್ದರು. ಅದಾದ ನಂತರ ನನ್ನ ಅಪ್ಪ ತೀರಿ ಹೋದ ಮೇಲೆ ಕರೆ ಮಾಡಿ ಮೀಟ್​ ಮಾಡುವುದಾಗಿ ಹೇಳಿದ್ದರು. 1 ಕೋಟಿ ಟ್ರಾನ್ಸ್ಫರ್ ಆಗಿದ್ದು ಸುಳ್ಳು. ಅವರಿಂದ ನನಗೆ ಸಿಕ್ಕಿದ್ದು, 15+60 ಒಟ್ಟು 75 ಲಕ್ಷ ಅಷ್ಟೇ ಎಂದು ನಟಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮರುಕಳಿಸಿದೆ ನಿರ್ಭಯಾ ಕೇಸ್​: ಕಬ್ಬಿಣದ ರಾಡ್​ ನೂಕಿಸಿ ಅತ್ಯಾಚಾರ ಎಸಗಿ ಕೊಲೆ!

    ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಆರೋಪಿ ಯುವರಾಜನ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳುಬರುತ್ತಿದೆ. ನಟಿ ಹಾಗೂ ನಿರ್ಮಾಪಕಿ ರಾಧಿಕಾ‌ ಕುಮಾರಸ್ವಾಮಿ ಬ್ಯಾಂಕ್ ಖಾತೆಗೆ ಯುವರಾಜ್​, ಒಂದು ಕೋಟಿ ರೂ. ಹಣ ವರ್ಗಾಯಿಸಿದ್ದಾನೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಈ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ನಟಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ದಿಢೀರ್​ ಸುದ್ದಿಗೋಷ್ಠಿ ಕರೆದು ತೀವ್ರ ಕುತೂಹಲ ಮೂಡಿಸಿದ ನಟಿ ರಾಧಿಕಾ ಕುಮಾರಸ್ವಾಮಿ!

    ದರ್ಶನ್​ ಲೈವ್​ ಬರ್ತಾರೆ … ಡೇಟ್ ಟೈಮ್ ಮಾರ್ಕ್ ಮಾಡಿಟ್ಟಿಕೊಳ್ಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts