More

    ರಶ್ಮಿಕಾ ವಿರುದ್ಧ ಹರಿಹಾಯ್ದು ಲವ್​ ಅಫೇರ್​ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ!

    ಹೈದರಾಬಾದ್​: ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ತೆಲುಗಿನಲ್ಲಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ.

    ಈ ಹಿಂದೆ ರಶ್ಮಿಕಾ ಅವರ ಬಗ್ಗೆಯೂ ವೇಣು ಅವರು ಭವಿಷ್ಯ ನುಡಿದಿದ್ದಾರೆ. ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲಿದ್ದಾರೆ ಎಂದು ಹೇಳಿದ್ದಾರೆ. ರಶ್ಮಿಕಾ ಕೂಡ ಜ್ಯೋತಿಷಿ ವೇಣು ಅವರನ್ನು ಹಲವು ಬಾರಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಆಗಾಗ ಸಲಹೆಗಳನ್ನು ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಜ್ಯೋತಿಷಿ ಮತ್ತು ರಶ್ಮಿಕಾ ನಡುವೆ ಮನಸ್ತಾಪ ಉಂಟಾಗಿದ್ದು, ಈ ಬಗ್ಗೆ ಯೂಟ್ಯೂಬ್​ ಸಂದರ್ಶನದಲ್ಲಿ ವೇಣು ಅವರು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ರಶ್ಮಿಕಾ ವಿರುದ್ಧ ಟೀಕಾ ಪ್ರಹಾರವನ್ನು ಮಾಡಿದ್ದಾರೆ.

    ಆಗಾಗ ನಿಮ್ಮ ಬಳಿ ಬಂದು ರಶ್ಮಿಕಾ ಪೂಜೆ ಮಾಡಿಸುತ್ತಿದ್ದರು. ಇತ್ತೀಚೆಗೆ ಅವರೇಕೆ ನಿಮ್ಮಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಯೂಟ್ಯೂಬರ್​ ಕೇಳಿದ ಪ್ರಶ್ನೆಗೆ ಉತ್ತರಿಸಿದ ವೇಣು, ನಾನು ಯಾವಾಗಲು ಪಾಸಿಟಿವ್​ಗಿಂತ ನೆಗಿಟಿವ್​ ಅನ್ನೇ ಹೆಚ್ಚಾಗಿ ಹೇಳುವ ವ್ಯಕ್ತಿ. ಪಾಸಿಟಿವ್​ ಹೇಳಿ ಬಕೆಟ್​ ಹಿಡಿಯುವ ಅಥವಾ ಮಸ್ಕಾ ಹೊಡೆಯುವ ವ್ಯಕ್ತಿ ನಾನಲ್ಲ. ಕೆಲವು ಸಂದರ್ಭಗಳಲ್ಲಿ ರಶ್ಮಿಕಾ ತೆಗೆದುಕೊಂಡ ನಿರ್ಣಯಗಳು ಸರಿಯಿರಲಿಲ್ಲ. ನಿಮ್ಮ ನಿರ್ಧಾರ ಸರಿಯಿಲ್ಲ ಎಂದು ನಾನು ನೇರವಾಗಿ ಹೇಳಿದೆ. ಆದರೆ, ಅದನ್ನು ಆಕೆ ಒಪ್ಪಿಕೊಳ್ಳಲಿಲ್ಲ. ನನ್ನನ್ನು ದಿಕ್ಕು ತಪ್ಪಿಸುತ್ತಿದ್ದಾನೆಂದು ಭಾವಿಸಿದ್ದಾರೆ. ನಿಮ್ಮ ಕೆಲಸವನ್ನು ನೀವು ಮಾಡಿ ಎಂದು ನನಗೆ ಎಚ್ಚರಿಕೆ ನೀಡಿದರು. ಅದಕ್ಕೆ ನಾನು ಸುಮ್ಮನಾಗಿಬಿಟ್ಟಿದ್ದೇನೆ ಎಂದು ಹೇಳಿದರು.

    ಅವರು ಸಮಾಜಕ್ಕೆ ಮಾತ್ರ ಹೀರೋ ಮತ್ತು ಹೀರೋಯಿನ್​ ಹೊರತು ನನಗಲ್ಲ. ಅವರು ಸಮಾಜಕ್ಕೆ ಮಾತ್ರ ಸೆಲೆಬ್ರಿಟಿ ಹೊರತು ನನಗಲ್ಲ. ನಾನು ಸಿಎಂ ಸೇರಿದಂತೆ ಯಾವುದೇ ಪ್ರಭಾವಿ ವ್ಯಕ್ತಿಗಳ ಜತೆ ಮಾತನಾಡುವಾಗಲೂ ಗ್ರಹಗತಿಗಳನ್ನು ನೋಡಿ ಮಾತನಾಡುತ್ತೇನೆ ಹೊರತು ನಿಮ್ಮ ಬಳಿಯಿರುವ ಕಾರು, ಸ್ಟೇಟಸ್​ ಹಾಗೂ ನಿಮ್ಮ ಸುತ್ತ ಇರುವ ಗನ್​ ಮ್ಯಾನ್​ ನೋಡಿ ನಾನು ಮಾತನಾಡುವುದಿಲ್ಲ. ನಾನು ಎಲ್ಲ ರೀತಿಯ ವ್ಯಕ್ತಿಗಳನ್ನು ನೋಡಿದ್ದೇನೆ. ಈ ರಾಜ ವೈಭೋಗ ಎಲ್ಲವು ಕ್ಷಣಿಕವಷ್ಟೇ. ನೀವು ಏನೇ ಹಾರಾಡಿದರು ನನ್ನನ್ನು ಏನು ಮಾಡಲು ಆಗುವುದಿಲ್ಲ. ನಾನೇನು ಚಿಂತಿಸುವುದೂ ಇಲ್ಲ ಎಂದು ಹೇಳಿದರು.

    ನಿನಗೆ ಈ ಸಮಸ್ಯೆ ಇದೆ. ಲವ್​ ಅಫೇರ್​ ಬಿಟ್ಟುಬಿಡು ಎಂದು ಸಲಹೆ ನೀಡಿದೆ. ಸಾಕಷ್ಟು ಮಹಿಳೆಯರು ಸರ್ವನಾಶ ಆಗಿರುವುದು ಪ್ರೇಮದಿಂದಲೇ. ನನ್ನ ಬಳಿ ಬರುವ ಅನೇಕರು ಪ್ರೀತಿಯಿಂದ ಮೋಸ ಹೋಗಿರುವವರೇ. ಯುವಕನನ್ನು ನಂಬಿ ತಾನು ದುಡಿದ ಹಣವನ್ನು ನೀಡಿ ಮೋಸ ಹೋಗಿರುವವರೇ ಹೆಚ್ಚು. ರಶ್ಮಿಕಾರದ್ದು ಅದೇ ಟ್ರ್ಯಾಕ್. ಅವರ ಲವ್​ ಅಫೇರ್​ ಮುಂದೆ ಸಮಸ್ಯೆ ಆಗಲಿದೆ. ಇದೇ ಎಚ್ಚರಿಕೆಯನ್ನು ಆಕೆಗೆ ನೀಡಿದೆ. ಆದರೆ, ಇದು ನನ್ನ ವೈಯಕ್ತಿಕ ವಿಚಾರ. ನಿಮ್ಮ ಕೆಲಸ ನೀವು ಮಾಡಿ, ನಮ್ಮ ವೈಯಕ್ತಿಕ ವಿಚಾರದ ಬಗ್ಗೆ ನೀವೇಕೆ ಮಾತನಾಡುತ್ತೀರಾ ಎಂದು ಖಾರವಾಗಿ ಮಾತನಾಡಿದರು. ಅಂದಿನಿಂದ ಇಬ್ಬರು ಅಂತರ ಕಾಯ್ದುಕೊಂಡಿದ್ದೇವೆ ಎಂದರು. 2024ರವರೆಗೆ ಅವರ ಭವಿಷ್ಯ ಚೆನ್ನಾಗಿ ಇರುತ್ತದೆ. ಆಮೇಲೆ ಅವರಿಗೆ ಸಂಕಷ್ಟಗಳು ಎದುರಾಗಲಿವೆ ಎಂದು ಇದೇ ಸಂದರ್ದಲ್ಲಿ ವೇಣು ಸ್ವಾಮಿ ಭವಿಷ್ಯ ನುಡಿದರು. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಮಿರರ್​ ಟಿವಿ)

    ವಿಜಯ್​ ಅವರ ಬೀಸ್ಟ್​ ಚಿತ್ರವು ಮನಿ ಹೀಸ್ಟ್​, ಗೂರ್ಖಾ ಚಿತ್ರದ ಕಾಪಿಯೇ? ಸ್ಪಷ್ಟನೆ ನೀಡಿದ ನಿರ್ದೇಶಕ

    ರಷ್ಯಾ ಯೋಧರ ರೇಪ್​ನಿಂದ ತಪ್ಪಿಸಿಕೊಳ್ಳಲು ಯೂಕ್ರೇನ್​ ಯುವತಿಯರ ಈ ನಿರ್ಧಾರ ಮನಕಲಕುವಂತಿದೆ!

    ಮಗಳೇ, ಬಾರವ್ವ ಆ ಕಾಮುಕನಿಗೆ ತಕ್ಕ ಪಾಠ ಕಲಿಸೋಣ… ಎನ್ನುತ್ತಾ ಕೋಣೆಗೆ ಹೋದ ತಂದೆಗೆ ಕಾದಿತ್ತು ಆಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts