ಚಾಮರಾಜನಗರ: ರಷ್ಯಾ-ಯೂಕ್ರೇನ್ ನಡುವಿನ ಯುದ್ಧ ಹಿನ್ನೆಲೆಯಲ್ಲಿ ರಕ್ಷಣೆ ದೃಷ್ಟಿಯಿಂದ ಯೂಕ್ರೇನ್ ಕಾಲೇಜು ಅಂಡರ್ಗ್ರೌಂಡ್ನಲ್ಲಿರುವ ಮಗನನ್ನು ವಾಪಸ್ ಭಾರತಕ್ಕೆ ಕರೆ ತನ್ನಿ ಎಂದು ನಾಗಭೂಷಣ್ ಮನವಿ ಮಾಡಿದ್ದಾರೆ.
ಹನೂರು ತಾಲೂಕಿನ ವಡ್ಡರಪಾಳ್ಯ ಗ್ರಾಮದ ನಿವಾಸಿ ನಾಗಭೂಷಣ್ ಮಗ ಸಿದ್ದೇಶ್ ಯೂಕ್ರೇನ್ ರಾಜಧಾನಿ ಕಿಯೆವ್ನಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾನೆ. ಮಗನೊಂದಿಗೆ ಬೆಳಗ್ಗೆ ಫೋನ್ನಲ್ಲಿ ಮಾತನಾಡಿದ್ದೇನೆ. ಚೆನ್ನಾಗಿದ್ದಾನಂತೆ ಏನೂ ತೊಂದರೆ ಇಲ್ಲ. ಅವನೊಂದಿಗೆ 350 ಜನ ಅದೇ ಕಾಲೇಜು ಹಾಸ್ಟೆಲ್ ಅಂಡರ್ಗ್ರೌಂಡ್ ಬಂಕರ್ನಲ್ಲಿ ಇದ್ದಾರಂತೆ. ಆದ್ದರಿಂದ ಗಾಬರಿ ಪಡಬೇಡಿ ಎಂದು ಹೇಳಿದ್ದಾನೆ.
ಸರ್ಕಾರ ಏನಾದರೂ ಮಾಡಿ ನನ್ನ ಮಗ ಮತ್ತು ಕರ್ನಾಟಕದವರನ್ನು ವಾಪಸ್ ಕರೆಸಬೇಕೆಂದು ನಾಗಭೂಷಣ್ ಕೋರಿದ್ದಾರೆ.
ಯೂಕ್ರೇನ್ನಲ್ಲಿ ಸಿಲುಕಿ ಸಹಾಯದ ನಿರೀಕ್ಷೆಯಲ್ಲಿರುವ ಚಾ.ನಗರ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು
ಶಸ್ತ್ರಾಸ್ತ್ರ ಬದಿಗಿಟ್ಟು ಶರಣಾಗಲು ಒಪ್ಪದಿದ್ದಕ್ಕೆ 13 ಯೂಕ್ರೇನ್ ಯೋಧರನ್ನು ಹತ್ಯೆಗೈದ ರಷ್ಯಾ ಯುದ್ಧನೌಕೆ
ರೀಲ್ಸ್ ಮಾಡಿದ ಎಡವಟ್ಟು: ಆಂಧ್ರದಲ್ಲಿ ವಿವಾದದ ಕಿಡಿಹೊತ್ತಿಸಿದ ಯುವತಿಯರಿಬ್ಬರ ಒಂದೇ ಮನೆಯ ವಾಸ!