ಹೈದರಾಬಾದ್: ಸಾಫ್ಟ್ವೇರ್ ಇಂಜಿನಿಯರ್ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ತೆಲ್ಲಪುರ್ನಲ್ಲಿ ನಡೆದಿದೆ.
ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾರದೇ ಇಬ್ಬರು ಮಕ್ಕಳೊಂದಿಗೆ ಪತ್ನಿಯು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡ ಚಂದ್ರಕಾಂತ್ ರಾವ್ ಬಿಎಚ್ಇಎಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಮಗ ಪ್ರೀತಂ (9) ಮತ್ತು ಮಗಳು ಸರ್ವಜ್ಞ (ಒಂದೂವರೆ ವರ್ಷ) ಇಬ್ಬರನ್ನು ಕೆರೆಗೆ ಎಸೆದು ತಾನು ಕೆರೆಗೆ ಹಾರಿ ಪತ್ನಿ ಲಾವಣ್ಯ ಪ್ರಾಣ ಕಳೆದುಕೊಂಡಿದ್ದಾರೆ.
ಚಂದ್ರಕಾಂತ ರಾವ್ ಅವರು ಬ್ಯಾಂಕ್ನಲ್ಲಿ ಸಾಲ ಪಡೆದು ಬಿಎಚ್ಇಎಲ್ ಬಳಿಯ ಬೈರಗುಡದಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದರು. ಆದರೆ, ಚಂದ್ರಕಾಂತ್ಗೆ ಸಾಲ ತೀರಿಸುವುದು ಕಷ್ಟವಾಗಿತ್ತು. ಅವರ ತಂದೆ ಬಿಎಚ್ಇಎಲ್ ನಿವೃತ್ತ ನೌಕರರಾಗಿದ್ದರಿಂದ ಆರ್ಥಿಕ ಸಹಾಯ ಮಾಡುವಂತೆ ಕೋರಿದ್ದರು. ಆದರೆ ತಂದೆ ನಿರಾಕರಿಸಿದ್ದರಂತೆ. ಇದೇ ವಿಚಾರವಾಗಿ ಕಳೆದ ಒಂದು ವರ್ಷದಿಂದಲೂ ಜಗಳ ನಡೆಯುತ್ತಿತ್ತು.
6 ಎಕರೆಯಲ್ಲಿ 2 ಎಕರೆ ಜಮೀನು ಮಾರಿ ಸಾಲವನ್ನು ತೀರಿಸಲು ಚಂದ್ರಕಾಂತ್ ರಾವ್ ಮುಂದಾಗಿದ್ದರು. ಆದರೆ, ತಂದೆ ಒಪ್ಪಿರಲಿಲ್ಲ. ಇತ್ತರ ನಿರಂತರ ಜಗಳದಿಂದ ಮನನೊಂದಿದ್ದ ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಗಂಡ ಸಾವಿನ ಸುದ್ದಿ ಕೇಳಿದ ಲಾವಣ್ಯ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಜೀವ ಬಿಟ್ಟಿದ್ದಾರೆ. (ಏಜೆನ್ಸೀಸ್)
ಕರೊನಾ ಸೋಂಕು ತಡೆಗಟ್ಟಲು ಈ ಚ್ಯೂಯಿಂಗ್ ಗಮ್ ತಿನ್ನಿ ಎನ್ನುತ್ತಿದ್ದಾರೆ ಸಂಶೋಧಕರು! ಏನಿದೆ ಇದರಲ್ಲಿ?
ನಿನ್ನೆ ರಾತ್ರಿ ಪಬ್ನಲ್ಲಿ ನಡೆದ ಹಲ್ಲೆಯ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಕಿರಿಕ್ ಕೀರ್ತಿ!
VIDEO| ಚಲಿಸುವ ರೈಲಿನಿಂದ ಜಿಗಿದು ಸಾವಿನ ಕದ ತಟ್ಟಿದ ಮಹಿಳೆ