More

    ಯಾವುದೇ ಸಮಸ್ಯೆಯಿದ್ದಲ್ಲಿ ಬಾರ್‌ಗೆ ಭೇಟಿ ನೀಡಿ! ದಂಪತಿಯನ್ನು ಅವಮಾನಿಸಿದ ವೈದ್ಯನಿಗೆ ಕಾದಿತ್ತು ಶಾಕ್​

    ಗುರುವಾಯೂರು: ಕಾಲು ನೋವು ಎಂದು ಆಸ್ಪತ್ರೆಗೆ ಭೇಟಿ ನೀಡಿದ ದಂಪತಿಯನ್ನು ವೈದ್ಯರೊಬ್ಬರು ಅಣುಕಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಅಲ್ಲದೆ, ಔಷಧ ಚೀಟಿಯಲ್ಲಿ ಅನುಚಿತವಾಗಿ ಬರೆಯುವ ಮೂಲಕ ವಿಚಿತ್ರವಾಗಿ ನಡೆದುಕೊಂಡಿದ್ದಾರೆ.

    ಮಮ್ಮಿಯೂರ್​ ನಿವಾಸಿ ಪ್ರಿಯಾ (44) ಮತ್ತು ಆಕೆಯ ಪತಿ ಅನಿಲ್​ ಕುಮಾರ್​ ಕಳೆದ ಗುರುವಾರ ತ್ರಿಸ್ಸೂರ್​ನಲ್ಲಿರುವ ದಯಾ ಆಸ್ಪತ್ರೆಯಲ್ಲಿ ನಾಳೀಯ ಶಸ್ತ್ರಚಿಕಿತ್ಸೆ ವಿಭಾಗದ ಡಾ. ರಾಯ್​ ವಾರ್ಘೀಸ್​ ಎಂಬುವರನ್ನು ಭೇಟಿ ಮಾಡಿದರು. ಪ್ರಿಯಾ ಅವರು ವದಕ್ಕೆಕದ್​ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಎರಡು ವರ್ಷದಿಂದ ಅವರು ಕಾಲು ನೋವಿನಿಂದ ಬಳಲುತ್ತಿದ್ದಾರೆ.

    ದಂಪತಿಗೆ ಎಕ್ಸ್​ರೇ ವರದಿ ತರುವಂತೆ ಡಾ. ​ವಾರ್ಘೀಸ್​ ಹೇಳಿದರು. ಎಕ್ಸ್​ರೇ ವರದಿ ಪಡೆದು ಮರಳಿ ಡಾಕ್ಟರ್​ ಬಳಿ ಬಂದಾಗ ಎಕ್ಷ್​ರೇ ನೋಡಿ ನಿಮಗೆ ಏನಾದರೂ ಅರ್ಥವಾಯಿತಾ ಎಂದು ಕೇಳಿದ್ದಾರೆ. ಪ್ರಿಯಾ ಅವರು ಕಾಲು ಊದಿಕೊಂಡಿದ್ದರಿಂದ ಮತ್ತೊಬ್ಬ ವೈದ್ಯರನ್ನು ಸಂಪರ್ಕಿಸುವಂತೆ ದಂಪತಿಗೆ ಡಾಕ್ಟರ್​ ಹೇಳಿದ್ದಾರೆ.

    ಪತ್ನಿಗೆ ನಡೆಯಲು ಆಗುತ್ತಿಲ್ಲ. ತಾತ್ಕಲಿಕ ಪರಿಹಾರಕ್ಕಾಗಿ ಏನಾದರೂ ಔಷಧ ಬರೆದುಕೊಡಿ ಎಂದು ಅನಿಲ್​ ಕುಮಾರ್​, ಡಾ. ವಾರ್ಘೀಸ್​ರನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಔಷಧ ಬರೆದುಕೊಡುವ ಬದಲು ದಂಪತಿಯನ್ನು ವಾರ್ಘೀಸ್​ ಅಣುಕಿಸಿದ್ದಾರೆ.

    ಇಷ್ಟೇ ಅಲ್ಲದೆ, ವಾರ್ಘೀಸ್​ ಬರೆದುಕೊಟ್ಟ ಔಷಧ ಚೀಟಿಯನ್ನು ತೆಗೆದುಕೊಂಡು ಹೋಗಿ ಮೆಡಿಕಲ್​ಗೆ ನೀಡಿದಾಗ, ಅದನ್ನು ಓದಿದ ಮೆಡಿಕಲ್​ ಸಿಬ್ಬಂದಿ ದಂಪತಿಯನ್ನು ನೋಡಿ ನಕ್ಕಿದ್ದಾರೆ. ಅಲ್ಲಿಯೂ ದಂಪತಿಗೆ ಅವಮಾನವಾಗಿದೆ. ಯಾವುದೇ ಬೆಡ್​ ರೆಸ್ಟ್​ ಇಲ್ಲ. (ಪತಿ) ಯಾವುದೇ ಸಮಸ್ಯೆಯಿದ್ದಲ್ಲಿ ಬಾರ್‌ಗೆ ಭೇಟಿ ನೀಡಿ ಎಂದು ಔಷಧ ಚೀಟಿಯಲ್ಲಿ ಬರೆಯಲಾಗಿದೆ.

    ಔಷಧ ಚೀಟಿಯ ಕೊನೆಯಲ್ಲಿ ಸಾಮಾನ್ಯ ವೈದ್ಯರನ್ನು ಕಾಣುವಂತೆ ಬರೆಯಲಾಗಿದೆ. ಈ ಸಂಬಂಧ ಮುಕ್ಯಮಂತ್ರಿಗಳಿಗೆ ದೂರು ನೀಡಲಾಗುವುದು ಎಂದು ಅನಿಲ್​ ಕುಮಾರ್​ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ದಯಾ ಆಸ್ಪತ್ರೆ ಡಾ. ವರ್ಘೀಸ್​ರನ್ನು ಕರ್ತವ್ಯದಿಂದಲೇ ವಜಾಗೊಳಿಸುವ ಮೂಲಕ ಡಾಕ್ಟರ್​ಗೆ ಶಾಕ್​ ನೀಡಿದ್ದಾರೆ. (ಏಜೆನ್ಸೀಸ್​)

    ಕಾಲೇಜಿಗೆ ತೆರಳಲು ನಿಂತಿದ್ದ ವಿದ್ಯಾರ್ಥಿನಿ ಬಳಿ ಆಟೋ ನಿಲ್ಲಿಸಿದ ಚಾಲಕ; ನಂತರ ನಡೆದಿದ್ದು ಭಯಾನಕ ಘಟನೆ

    ಕಡು ಬಡತನದಲ್ಲಿ ಹುಟ್ಟಿ 30 ಕೋಟಿ ರೂ. ಬೆಲೆ ಬಾಳುವ ಆಸ್ತಿ ಗಳಿಸಿದ್ಹೇಗೆ? ಕಿಲಾಡಿ ಲೇಡಿಯ ಹಿನ್ನೆಲೆ ತಿಳಿದ್ರೆ ದಂಗಾಗ್ತೀರಾ!

    ಫೋನ್​ ಮಾಡಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಪ್ರೇಯಸಿ: ಮುಂದೆ ನಡೆದಿದ್ದು ಘನ ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts