ಹೈದರಾಬಾದ್: ಮದುವೆ ದಿಬ್ಬಣದಲ್ಲಿ “ನೀ ಬುಲೆಟ್ಟು ಬಂಡಿ” ಎಂಬ ಜಾನಪದದ ಟಪ್ಪಾಂಗುಚ್ಚಿ ಹಾಡಿಗೆ ವಧುವಿನೊಂದಿಗೆ ಸೊಂಟ ಬಳುಕಿಸಿ, ಖ್ಯಾತಿ ಪಡೆದಿದ್ದ ವರನಿಗೆ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್ ನೀಡಿದೆ. ಲಂಚ ಪಡೆಯುತ್ತಿದ್ದ ವೇಳೆ ಸರ್ಕಾರಿ ನೌಕರನನ್ನು ಎಸಿಬಿ ಬಲೆಗೆ ಕೆಡವಿದೆ.
ಬಡಂಗಪೇಟೆ ನಗರಸಭೆಯ ನಗರ ಯೋಜನಾ ಮೇಲ್ವಿಚಾರಕರಾಗಿರುವ ಅಕುಲ ಅಶೋಕ್ ಅವರು ದೂರುದಾರರಿಂದ 30,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಅದನ್ನು ಸ್ವೀಕರಿಸಿದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ಅಶೋಕ್ನನ್ನು ಬಂಧಿಸಿದೆ.
ಅಂದಹಾಗೆ ಅಶೋಕ್, ಕಳೆದ ವರ್ಷ ನಡೆದ ತಮ್ಮ ಮದುವೆಯ ದಿಬ್ಬಣದಲ್ಲಿ “ನೀ ಬುಲೆಟ್ಟು ಬಂಡಿ” ಎಂಬ ಟಪ್ಪಾಂಗುಚ್ಚಿ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ವಧು ಸಾಯಿ ಶ್ರೀಯಾ ಅವರ ಪತಿ. ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ರಾತ್ರೋರಾತ್ರಿ ಶ್ರೀಯಾ ಫೇಮಸ್ ಆಗಿದ್ದರು. ಅಲ್ಲದೆ, ಗಾಯಕ ಮೋಹನ್ ಭೋಗರಾಜು ಹಾಡುಗಳನ್ನು ನಿರ್ಮಿಸುವ ಮನರಂಜನಾ ಕಂಪನಿಯೊಂದು ಶ್ರೀಯಾ ಅವರ ಡಾನ್ಸ್ ನೋಡಿ ಆಫರ್ ಸಹ ನೀಡಿತ್ತು. ತಮ್ಮ ಕಂಪನಿಯ ಮುಂದಿನ ಹಾಡಿಗೆ ಹೆಜ್ಜೆ ಹಾಕುವ ಅವಕಾಶವನ್ನು ಶ್ರೀಯಾಗೆ ನೀಡಿತ್ತು.
ಇದೀಗ ಅದೇ ವರ ಹಾಗೂ ಶ್ರೀಯಾ ಪತಿ ಅಶೋಕ್ ಎಸಿಬಿ ಬಲೆ ಬಿದ್ದಿದ್ದಾರೆ. ಮೂಲಗಳ ಪ್ರಕಾರ ಅಶೋಕ್ ಅವರು ದೂರುದಾರ ದೇವೇಂದ್ರ ರೆಡ್ಡಿ ಎಂಬುವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಉದ್ಯಮಿ ಮತ್ತು ಸರೂರ್ನಗರದ ಜೆಬಿ ಕಾಲನಿ ನಿವಾಸಿಯಾಗಿರುವ ದೇವೇಂದ್ರ ರೆಡ್ಡಿ ತಮ್ಮ ಮನೆ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಶೋಕ್ ಇದೀಗ ಎಸಿಬಿ ಬಲೆಗೆ ಬಿದ್ದಿದ್ದಾರೆ. (ಏಜೆನ್ಸೀಸ್)
ತನ್ನ ಮದುವೆ ದಿಬ್ಬಣದಲ್ಲಿ ಸೊಂಟ ಬಳುಕಿಸಿದ ವಧುವಿಗೆ ಖುಲಾಯಿಸಿದ ಲಕ್: ಹುಡುಕಿಕೊಂಡು ಬಂತು ಬಿಗ್ ಆಫರ್!
ನಮೀಬಿಯಾ ಚೀತಾಗೆ ಆನೆಗಳೇ ಸೆಕ್ಯುರಿಟಿ ಗಾರ್ಡ್! ಶಾಂತ ‘ಲಕ್ಷ್ಮೀ’, ಉಗ್ರ ‘ಸಿದ್ಧಾಂತ್’
ಮಗು ದತ್ತುಪಡೆಯ ಹೊರಟಿದ್ದ ಮಾಜಿ ಸಚಿವ, ನಟಿ ! ಜೈಲಲ್ಲಿರೋ ಜೋಡಿಯ ರಹಸ್ಯ ಇಡಿಯಿಂದ ಬಯಲು