ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ತೆಲುಗು ಚಿತ್ರರಂಗದ ವಿವಾದಿತ ನಟಿ ಶ್ರೀರೆಡ್ಡಿ ಅವರು ಸೋಶಿಯಲ್ ಮೀಡಿಯಾ ಸೆನ್ಸೇಷನ್ ಹಾಗೂ ನಟಿ ದೀಪ್ತಿ ಸುನೈನಾ ವಿರುದ್ಧ ಹರಿಹಾಯ್ದಿದ್ದಾರೆ.
ಶಾನು ಅಲಿಯಾಸ್ ಷಣ್ಮುಖ ಜಸ್ವಂತ್ ಹಾಗೂ ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್ ಸರ್ಕಲ್ನಲ್ಲಿ ಫೇಮಸ್ ಆಗಿರುವ ಮುದ್ದಾದ ಜೋಡಿಗಳು. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಜಗಜ್ಜಾಹೀರಾಗಿತ್ತು. ಅದನ್ನು ಸ್ವತಃ ಷಣ್ಮುಖ್ ಹಾಗೂ ದೀಪ್ತಿ ಕೂಡ ಹೇಳಿಕೊಂಡಿದ್ದರು. ಆದರೆ, ಬಿಗ್ಬಾಸ್ ಸೀಸನ್ 5 ಇಬ್ಬರ ಪ್ರೀತಿಗೆ ಹುಳಿ ಹಿಂಡಿದ್ದು, ಹೊಸ ವರ್ಷದಂದೇ ದೀಪ್ತಿ ತಮ್ಮ ಪ್ರೀತಿಗೆ ಅಧಿಕೃತವಾಗಿ ಬ್ರೇಕಪ್ ಹೇಳಿದ್ದಾರೆ. ಅಲ್ಲದೆ, ಇತ್ತೀಚೆಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಲವ್ ಲೈಫ್ ಬಗ್ಗೆ ಮಾತನಾಡುವಾಗ ದೀಪ್ತಿ ಕಣ್ಣೀರಧಾರೆ ಹರಿಸಿದ್ದರು.
ಇದೀಗ ದೀಪ್ತಿ ಬ್ರೇಕಪ್ ಬಗ್ಗೆ ನಟಿ ಶ್ರೀರೆಡ್ಡಿ, ಶಾಕಿಂಗ್ ಹೇಳಿಕೆ ನೀಡಿದ್ದಾರೆ. ದೀಪ್ತಿ ಸುನೈನಾ, ಶಾನುಗಿಂತ ಹಿರಿಯಳು. ಏಕೆಂದರೆ, ಆಕೆ ಬಿಗ್ಬಾಸ್ ಸೀಸನ್ 2ರಲ್ಲೇ ಸ್ಪರ್ಧಿಸಿದ್ದಳು. ಶಾನು 5ನೇ ಸೀಸನ್ನಲ್ಲಿ ಸ್ಪರ್ಧಿಸಿ ಈಗಷ್ಟೇ ಹೊರಬಂದಿದ್ದಾನೆ. ದೀಪ್ತಿ 2ನೇ ಸೀಸನ್ನಲ್ಲಿ ಬಿಗ್ಬಾಸ್ ಮನೆಯಲ್ಲಿ ಇರುವಾಗ ಶಾನು ರೀತಿಯಲ್ಲೇ ವರ್ತಿಸಿದ್ದಳು. ತನೀಶ್ ಜತೆ ಸಲುಗೆ ಬೆಳೆಸಿಕೊಂಡಿದ್ದಳು ಎಂದು ಹೇಳಿದ್ದಾರೆ.
ನೀವಿಬ್ಬರು ಕಳೆದ ಐದು ವರ್ಷದಿಂದ ಸಂಬಂಧದಲ್ಲಿದ್ದೀರಿ. ಇಬ್ಬರು ಕೂಡ ಹಲರು ಏರಿಳಿತಗಳನ್ನು ಕಂಡಿದ್ದೀರಾ. ಶಾನು ಮತ್ತು ಸಿರಿ ಸಂಬಂಧದಿಂದ ನೊಂದು ನೀನು ಬ್ರೇಕಪ್ ಮಾಡಿಕೊಂಡಿದ್ದೀಯಾ. ಹಾಗಾದರೆ, ನೀನು ತನೀಶ್ ಜತೆ ಮಾಡಿದ್ದೇನು? ಅದು ಕೂಡ ತಪ್ಪಲ್ಲವೇ? ಆದರೆ, ಶಾನು-ಸಿರಿಯ ಸಂಬಂಧ ನಿಮಗೆ ಸರಿ ಕಾಣಲಿಲ್ಲ ಅಲ್ವಾ? ನೀನು ಮತ್ತು ಶಾನು ಸಂಬಂಧದಲ್ಲಿ ಇದ್ದೀರಿ, ಅದಕ್ಕಾಗಿಯೇ ನೀನು ಬ್ರೇಕ್ ಅಪ್ ಆಯ್ಕೆ ಮಾಡಿಕೊಂಡಿದ್ದೀಯಾ. ಒಂದು ವೇಳೆ ಅವನನ್ನು ಮದುವೆ ಆಗಿದ್ದರೆ? ನೀನು ಅವನನ್ನು ಬಿಟ್ಟುಬಿಡುತ್ತಿದ್ದ? ಎಲ್ಲರು ತಪ್ಪು ಮಾಡುತ್ತಾರೆ. ಯಾವಾಗ ಇಬ್ಬರ ನಡುವೆ ಬಲವಾದ ಬೆಸುಗೆ ಇರುತ್ತದೆಯೋ ಅವರು ತಮ್ಮ ಸಮಸ್ಯೆಯನ್ನು ತಾವೇ ಸರಿಪಡಿಸಿಕೊಳ್ಳುತ್ತಾರೆ. ಆಗ ಮಾತ್ರ ನಾವು ನಮ್ಮ ಜೀವನವನ್ನು ಮುಂದುವರಿಸಬಹುದು ಎಂದು ಶ್ರೀರೆಡ್ಡಿ ದೀಪ್ತಿಗೆ ಪಾಠ ಮಾಡಿದ್ದಾರೆ.
ಇನ್ಸ್ಟಾಗ್ರಾಂ ಲೈವ್ನಲ್ಲಿ ಕಣ್ಣೀರು
ಇತ್ತೀಚೆಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಬ್ರೇಕಪ್ಗೆ ಕಾರಣವೇನು ಎಂದು ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೀಪ್ತಿ, ನಾನು ನನ್ನ ವೃತ್ತಿ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಲು ಬಯಸಿದ್ದೇನೆ. ಇದುವರೆಗೂ ನಾನು ನನ್ನ ಬಗ್ಗೆ ಯೋಚಿಸಿಯೇ ಇರಲಿಲ್ಲ. ನನ್ನ ವೃತ್ತಿ ಜೀವನದ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದೆ. ಆದರೆ, ನನ್ನನ್ನು ನಾನು ಹೆಚ್ಚು ಪ್ರೀತಿಸಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದರು. ಹೀಗೆ ಹೇಳುವಾಗ ಗದ್ಗದಿತರಾದ ದೀಪ್ತಿ ನೋವು ತಾಳಲಾರದೇ ಕಣ್ಣೀರಧಾರೆಯನ್ನು ಹರಿಸಿದ್ದರು.
ಪ್ರೇಮಿಗಳ ನಡುವೆ ಏನಾಯಿತು?
ಶಾನು ಮತ್ತು ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಬಿಗ್ಬಾಸ್ನಲ್ಲಿ ಶಾನು ಕ್ಯಾಪ್ಟನ್ ಆದ ನಂತರ ನೆಡೆದ ಎಪಿಸೋಡ್ನಲ್ಲಿ ಪ್ರತಿಸ್ಪರ್ಧಿ ಸಿರಿ ಅವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ತುಂಬಾ ಸಲುಗೆ ಇರುವಂತೆ ತೋರುತ್ತಿತ್ತು. ಇದನ್ನು ನೋಡಿದ ದೀಪ್ತಿ ತುಂಬಾ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಶಾನು ಮತ್ತು ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಹೀಗಾಗಿ ದೀಪ್ತಿ ತನ್ನ ಇನ್ಸ್ಟಾಗ್ರಾಂ ಫಾಲೋವರ್ಸ್ ಲೀಸ್ಟ್ನಿಂದ ಶಾನು ಅನ್ನು ಅನ್ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಬಿಗ್ಬಾಸ್ನಿಂದ ಹೊರಬಂದ ನಂತರವೂ ಶಾನು ಮತ್ತು ದೀಪ್ತಿ ಅಂತರ ಕಾಯ್ದುಕೊಂಡಿದ್ದರು. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಸೃಷ್ಟಿಯಾಗಿತ್ತು. ಇದೀಗ ದೀಪ್ತಿ ಅಧಿಕೃತವಾಗಿ ಲವ್ ಬ್ರೇಕಪ್ ಮಾಡಿಕೊಳ್ಳುವ ಮೂಲಕ ಅನುಮಾನವನ್ನು ನಿಜವಾಗಿಸಿದ್ದಾರೆ.
ಇತ್ತ ಸಿರಿಗೂ ಮೊದಲೇ ಬಾಯ್ಫ್ರೆಂಡ್ ಇದ್ದಾನೆ. ಆತನ ಹೆಸರು ಶ್ರೀಹಾನ್. ಇದೀಗ ಆತ ತನ್ನ ಮೊಬೈಲ್ನಲ್ಲಿದ್ದ ಸಿರಿ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿದ್ದಾನೆಂದು ತಿಳಿದುಬಂದಿದೆ. ಶಾನು ಜತೆಗಿನ ಸಿರಿ ಸಂಬಂಧದಿಂದ ಅಸಮಾಧಾನಗೊಂಡಿರುವ ಶ್ರೀಹಾನ್ ಆಕೆಯೊಂದಿಗೆ ಮಾತು ಬಿಟ್ಟಿದ್ದಾರೆ. ಅಲ್ಲದೆ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಒಟ್ಟಾರೆ, ಬಿಗ್ಬಾಸ್ ಶೋ ಮುಗಿಸಿಕೊಂಡು ಬಂದ ಮೇಲೆ ಇಬ್ಬರ ಪ್ರೀತಿಯಲ್ಲಿ ಬಿರುಗಾಳಿ ಎದ್ದಿದ್ದು, ಒಂದು ಪ್ರೀತಿ ಬ್ರೇಕ್ ಆಗಿದೆ. (ಏಜೆನ್ಸೀಸ್)
ಷಣ್ಮುಖ ಜಸ್ವಂತ್ ಮುಖವಾಡ ಬಯಲು: ಇನ್ಸ್ಟಾಗ್ರಾಂ ಲೈವ್ನಲ್ಲಿ ಕಣ್ಣೀರಧಾರೆ ಹರಿಸಿದ ನಟಿ ದೀಪ್ತಿ ಸುನೈನಾ!
ಹೊಸ ವರ್ಷದಂದೇ ತಮ್ಮ ಪ್ರೀತಿಗೆ ಎಳ್ಳು ನೀರು ಬಿಟ್ಟ ನಟಿ ದೀಪ್ತಿ ಸುನೈನಾ: ಎಲ್ಲವೂ ಬಿಗ್ಬಾಸ್ ಮಹಿಮೆ!
ಸೋಶಿಯಲ್ ಮೀಡಿಯಾ ಸೆನ್ಸೇಷನ್ ದೀಪ್ತಿ ಸುನೈನಾ ಪ್ರೇಮ್ ಕಹಾನಿ ಬಯಲು: ಯೂಟ್ಯೂಬರ್ ಜತೆ ದೀಪ್ತಿ ಪ್ಯಾರ್!