ನಲ್ಗೊಂಡ: ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು, ನಂಬಿಸಿ ಹಣ ಪಡೆದುಕೊಂಡು ವಂಚಿಸುತ್ತಿದ್ದ ಕಿಲಾಡಿ ಲೇಡಿಯನ್ನು ನಲ್ಗೊಂಡ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಆರೋಪಿಯನ್ನು ತೆಲಂಗಾಣದ ಖಮ್ಮಮ್ ಜಿಲ್ಲೆಯ ಸತ್ತುಪಲ್ಲಿ ನಿವಾಸಿ ಪಂತಂಗಿ ಮಹೇಶ್ವರಿ ಅಲಿಯಾಸ್ ಧರಣಿ ರೆಡ್ಡಿ ಎಂದು ಗುರುತಿಸಲಾಗಿದೆ. ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿರುವ ಮಹೇಶ್ವರಿ, ಅನೇಕ ಯುವಕರಿಗೆ ಮದುವೆ ಹೆಸರಿನಲ್ಲಿ ನಂಬಿಸಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾಳೆ.
ಇತ್ತೀಗೆಚೆ ಈಕೆ ಹೈದರಾಬಾದ್ನ ಕೊಂಪಲ್ಲಿ ಮೂಲದ ವೆಂಕಟೇಶ್ ಎಂಬಾತನನ್ನು ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಆತನೊಂದಿಗೆ ಅಶ್ಲೀಲ ವಿಡಿಯೋ ಚಾಟ್ ಮಾಡಿದ್ದ ಈಕೆ ಅದನ್ನು ರೆಕಾರ್ಡ್ ಮಾಡಿಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟು, ಹಣವನ್ನು ಪಡೆದುಕೊಂಡಿದ್ದಳು. ಇನ್ನೊಂದೆಡೆ ಯುವಕರಿಗೆ ಮಾತ್ರವಲ್ಲದೆ ಅನೇಕ ಯುವತಿಯರಿಗೆ ಈಕೆ ವಂಚಿಸಿದ್ದಾಳೆ. ಸೂಕ್ತ ವರನನ್ನು ಹುಡುಕಿಕೊಡುತ್ತೇನೆಂದು ಹೇಳಿ, ಅವರಿಂದ ಹಣ ಪಡೆದುಕೊಂಡು ವಂಚನೆ ಮಾಡಿದ್ದಾಳೆ.
ಫೇಸ್ಬುಕ್ ಪ್ರೊಫೈಲ್ನಲ್ಲಿ ಫೋಟೋ ಬದಲಾಯಿಸಿ ಕಿಲಾಡಿ ಲೇಡಿ ವಂಚನೆ ಮಾಡುತ್ತಿದ್ದಳು. ಇತ್ತೀಚೆಗೆ ಈಕೆ 11.70 ಲಕ್ಷ ರೂ. ಅನ್ನು ಪಡೆದುಕೊಂಡಿದ್ದಳು. ಇವಳಿಂದ ಡಜನ್ಗೂ ಅಧಿಕ ಮಂದಿ ಮೋಸ ಹೋಗಿದ್ದಾರೆ.
ಮಹೇಶ್ವರಿ ನಲ್ಗೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, ಆಕೆಯನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈಕೆಯ ವಿರುದ್ಧ ಕುಕಟಪಲ್ಲಿ, ಘಾಟ್ಕೇಸರ್, ಖಮ್ಮಮ್, ಸತ್ತುಪಲ್ಲಿ ಮತ್ತು ವೆನ್ಸುನ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿವೆ. ಇದೀಗ ನಲ್ಗೊಂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಶಿಕ್ಷೆ ಅನುಭವಿಸುತ್ತಿದ್ದಾಳೆ. (ಏಜೆನ್ಸೀಸ್)
ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ಕರೊನಾ ರೋಗಿಗಳ ಸಾವು: ಮೈಸೂರು ಡಿಸಿ ವಿರುದ್ಧ ಗಂಭೀರ ಆರೋಪ
ರಸ್ತೆಗಿಳಿದು 100 ಕಾರಣ ಹೇಳಿ ವಾದ ಮಾಡ್ಬೇಡಿ: ನಮ್ಗೂ ಆಯ್ಕೆ ಇದ್ದಿದ್ರೆ ಒಳಗೇ ಇರ್ತಿದ್ವಿ ಅಂದ ಪೊಲೀಸ್ರು ಕೊಟ್ಟ ಆ ಒಂದು ಕಾರಣ ಇಲ್ಲಿದೆ..👇
ಬದಲಾವಣೆಗೆ ಹೊಂದಿಕೊಳ್ಳೋನೇ ಮಹಾಶೂರ! ನಿಮ್ಮ ಬ್ರ್ಯಾಂಡ್ ನೀವೇ ಸೃಷ್ಟಿಸಿ