More

    ನಟ ಪುನೀತ್​ ಬಗ್ಗೆ ಮಂಗಳೂರು‌ ಪೊಲೀಸ್ ಕಮಿಷನರ್​ ಮಾಡಿದ ಟ್ವೀಟ್​ ವೈರಲ್​!

    ಮಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಕನ್ನಡ ಚಿತ್ರರಂಗದ ಮೇರು ನಟ. ಅಪ್ಪನ ಹಾದಿಯನ್ನೇ ಅನುಸರಿಸಿದ ಪುನೀತ್​ ಹೆಚ್ಚು ಅಭಿನಯಿಸಿದ್ದು, ಮನೆ-ಮಂದಿಯಲ್ಲ ಕುಳಿತು ಯಾವುದೇ ಮುಜುಗರವಿಲ್ಲದಂತಹ ಕೌಟುಂಬಿಕ ಚಿತ್ರಗಳಲ್ಲಿ. ಈ ಕಾರಣಕ್ಕೆ ಪುನೀತ್​ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ. ಕೇವಲ ಚಿತ್ರ ಮಾತ್ರವಲ್ಲ, ತಮ್ಮ ಸಮಾಜಮುಖಿ ಕಾರ್ಯಗಳಿಂದಲೂ ಪುನೀತ್​ ಎಲ್ಲರ ಮನ ಮುಟ್ಟಿದ್ದಾರೆ. ಹೀಗಾಗಿ ಪುನೀತ್​ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಆಗ್ರಹಗಳು ಕೇಳಿಬರುತ್ತಿವೆ. ಈ ಅಭಿಯಾನಕ್ಕೆ ಮಂಗಳೂರು ಪೊಲೀಸ್​ ಆಯುಕ್ತರಾದ ಶಶಿಕುಮಾರ್​ ಕೂಡ ಧ್ವನಿ ಆಗಿದ್ದಾರೆ.

    ಪುನೀತ್​ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಮಂಗಳೂರು‌ ಪೊಲೀಸ್ ಕಮಿಷನರ್ ಶಶಿಕುಮಾರ್​ ಅವರು ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

    ನಾಗರಿಕ ಸೇವೆಗಳ ಹಿನ್ನೆಲೆಯಲ್ಲಿ ಕೊಡಮಾಡುವ ಪದ್ಮ ಅವಾರ್ಡ್​ಗೆ ಅವರು ಅರ್ಹರು. ಪುನೀತ್ ರಾಜ್ ಕುಮಾರ್ ಕೂಡ ಸಾಕಷ್ಟು ನಾಗರಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಇಡೀ ಕುಟುಂಬ ನೋಡಬಹುದಾದಂತಹ ಚಿತ್ರಗಳನ್ನೇ ಮಾಡಿದ್ದರು. ಇನ್ನು ಕೌಟುಂಬಿಕ ಚಿತ್ರಗಳನ್ನು ನೋಡುವುದು ಹೇಗೆ? ಪದ್ಮಶ್ರೀ ಪ್ರಶಸ್ತಿ ನೀಡುವುದರ ಮೂಲಕ ಅವರಿಗೆ ಗೌರವ ಸಿಗಬೇಕು ಅನ್ನೋ ಆಸೆ ನಮಗಿದೆ ಎಂದು ಕಮಿಷನರ್ ಟ್ವೀಟ್​ ಮಾಡಿದ್ದಾರೆ.

    ನಟ ಪುನೀತ್​ ಬಗ್ಗೆ ಮಂಗಳೂರು‌ ಪೊಲೀಸ್ ಕಮಿಷನರ್​ ಮಾಡಿದ ಟ್ವೀಟ್​ ವೈರಲ್​!

    ಇನ್ನು ಪುನೀತ್‌ ಅವರಿಗೆ ಪದ್ಮಶ್ರೀ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಬಗ್ಗೆ ನಮಗೆ ಅಪಾರ ಗೌರವ ಇದೆ. ಪುನೀತ್ ರಾಜ್ ಕುಮಾರ್‌ಗೆ ಪದ್ಮಶ್ರೀ ನೀಡಲು ನಮ್ಮ ಸಮ್ಮತಿ ಕೂಡ ಇದೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ. ಸಿದ್ದರಾಮಯ್ಯ ತಮ್ಮ ಪ್ರಸ್ತಾಪ ಸಲ್ಲಿಸಲಿ. ಎಲ್ಲದಕ್ಕೂ ಒಂದು ನಿಯಮ‌ ಪಾಲನೆ ಇರುತ್ತೆ. ಅದರ ಅಡಿಯಲ್ಲಿ ನಾವು ಸಾಗುತ್ತೇವೆ ಎಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಎಲ್ಲ ಗೌರವಕ್ಕೆ ಅರ್ಹರು. ಅವರಿಗೆ ಇಂತಹ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ. ನಿಯಮಗಳನ್ನು ಪರಿಶೀಲನೆ ಮಾಡಬೇಕು ಎಂದರು.

    ಪುನೀತ್‌ ಅವರಿಗೆ ಮರಣೋತ್ತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಅನೇಕ ಮಂದಿ ಆಗ್ರಹಿಸಿದ್ದರು. ಆದರೆ ಮರಣೋತ್ತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇರದ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು. ಇದೀಗ ಪದ್ಮಶ್ರೀ ನೀಡಲು ಒತ್ತಾಯಗಳು ಕೇಳಿಬರುತ್ತಿವೆ.

    ಮಂತ್ರಾಲಯದಲ್ಲಿ ಪುನೀತ್​ ಮಾತನಾಡುತ್ತಿರುವಾಗಲೇ ಅಲುಗಾಡಿದ್ದ ವೀಣೆ: ಸ್ಪಷ್ಟನೆ ನೀಡಿದ ಸುಬುಧೇಂದ್ರ ಶ್ರೀಗಳು

    ಹುಟ್ಟು-ಸಾವಿನ ದಿನಗಳಲ್ಲಿ ಪುನೀತ್‌ ‘ಜನ್ಮ ರಹಸ್ಯ’! ಇದೆಂಥ ಕಾಕತಾಳೀಯ? ವೈರಲ್‌ ಆಗ್ತಿದೆ ಪೋಸ್ಟ್‌

    ಲೋಹಿತ್​ ಅಂದ್ರೆ ಅಲ್ಪಾಯುಷಿ, ಪುನೀತ್​ ಅಂದ್ರೆ… ಹೆಸರು ಬದಲಾವಣೆ ಹಿಂದಿನ ಕಾರಣ ತಿಳಿಸಿದ ಚಿನ್ನೇಗೌಡ

    ತಮಿಳು ನಟ ವಿಶಾಲ್​ ಬೆನ್ನಲ್ಲೇ ಅಪ್ಪು ನೆನಪಲ್ಲಿ ಮಹತ್ವದ ಕಾರ್ಯಕ್ಕೆ ಮುಂದಾದ ನಟಿ ಪ್ರಣೀತಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts