ಹೈದರಾಬಾದ್: ಸ್ಟಾರ್ ನಟ-ನಟಿಯರು ಒಂಟಿಯಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ಅವರ ಜನಪ್ರಿಯತೆ. ಸಾರ್ವಜನಿಕ ಸ್ಥಳಗಳಿಗೆ ಬಂದರೆ ಅಭಿಮಾನಿಗಳು ಸೆಲ್ಫಿ ಹಾಗೂ ಆಟೋಗ್ರಾಫ್ಗಾಗಿ ಮುಗಿಬಿದ್ದು, ಕಿರಿಕಿರಿ ಉಂಟು ಮಾಡುತ್ತಾರೆ. ಹೀಗಾಗಿಯೇ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರಬೇಕಾದರೂ ಬಾಡಿಗಾರ್ಡ್ ಅಥವಾ ಬೌನ್ಸರ್ಗಳ ನೆರವು ಪಡೆಯುತ್ತಾರೆ. ಮನಸ್ಸಿನಲ್ಲಿ ತುಂಬಾ ಆಸೆಯಿದ್ದರೂ ಕೂಡ ಒಂಟಿಯಾಗಿ ಸ್ವಚ್ಛಂದವಾಗಿ ಓಡಾಡುವುದಕ್ಕೂ ಸೆಲೆಬ್ರಿಟಿಗಳಿಂದ ಆಗುವುದಿಲ್ಲ.
ಆದರೆ, ಸಾಮಾನ್ಯ ಜನರಂತೆ ಓಡಾಡುವ ಬಯಕೆಯನ್ನು ಈಡೇರಿಸಿಕೊಳ್ಳಲು ಸೆಲೆಬ್ರಿಟಿಗಳಿಗೆ ಒಂದು ದಾರಿ ಇದೆ. ಅದೇನೆಂದರೆ, ಮುಖ ಮರೆಮಾಚಿ ಯಾರಿಗೂ ಗೊತ್ತಾಗದಂತೆ ಅಡ್ಡಾಡುವುದು. ಈ ರೀತಿ ಸಾಕಷ್ಟು ಸೆಲೆಬ್ರಿಟಿಗಳು ಆಗಾಗ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿರುತ್ತಾರೆ. ಕೆಲವೊಮ್ಮೆ ಅಭಿಮಾನಿಗಳ ಜತೆಯಲ್ಲಿ ಕುಳಿತು ಅವರಿಗೆ ಗೊತ್ತಾಗದಂತೆ ಚಿತ್ರಮಂದಿರಲ್ಲಿ ಸಿನಿಮಾ ನೋಡಿ ಬರುತ್ತಾರೆ. ಅದೇ ರೀತಿಯಲ್ಲಿ ಸ್ಟಾರ್ ನಾಯಕಿಯೊಬ್ಬರು ಚಿತ್ರಮಂದಿರದಲ್ಲಿ ತಮ್ಮ ಚಿತ್ರವವನ್ನು ನೋಡಿ ಹೊರಬಂದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಗಾದ್ರೆ ಆ ನಟಿ ಯಾರು ಅಂತೀರಾ? ಅವರೇ ಸಾಯಿ ಪಲ್ಲವಿ. ಅತ್ಯದ್ಭುತ ಡಾನ್ಸ್, ಸಹಜ ಸೌಂದರ್ಯ ಮತ್ತು ಸಹಜ ನಟನೆಯಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ಸಾಯಿ ಪಲ್ಲವಿ, ದಕ್ಷಿಣ ಭಾರತ ಚಿತ್ರರಂಗದಲ್ಲೇ ಬಹು ಬೇಡಿಕೆಯ ನಟಿಯಾಗಿದ್ದಾರೆ. ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಸಾಯಿ ಪಲ್ಲವಿಯ ಡೇಟ್ಸ್ಗಾಗಿ ಅನೇಕ ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ.
ಇತ್ತೀಚೆಗಷ್ಟೇ ಅವರ ನಟನೆಯ ತೆಲುಗು ಸಿನಿಮಾ “ಶ್ಯಾಮಸಿಂಗ್ ರಾಯ್” ಬಿಡುಗಡೆಯಾಗಿದೆ. ಚಿತ್ರದ ನಾಯಕನ ಪಾತ್ರದಲ್ಲಿ ನಾನಿ ನಟಿಸಿದ್ದಾರೆ. ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಅಲ್ಲದೆ, ಗಲ್ಲಾಪಟ್ಟಿಗೆಯಲ್ಲೂ ಸದ್ದು ಮಾಡಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ನೇರವಾಗಿ ತಿಳಿಯುವ ಬಯಕೆಯಿಂದ ನಿನ್ನೆಯಷ್ಟೇ (ಡಿ.29) ಸಾಯಿ ಪಲ್ಲವಿ ಅವರು ಬುರ್ಖಾ ಧರಿಸಿಕೊಂಡು ಪ್ರೇಕ್ಷರ ಜತೆ ಕುಳಿತು ಸಿನಿಮಾ ಎಂಜಾಯ್ ಮಾಡಿದ್ದಾರೆ.
ಬುಧವಾರ ಹೈದರಾಬಾದ್ನ ಮುಸಾಪೇಟೆಯಲ್ಲಿರುವ ಶ್ರೀರಾಮುಲು ಚಿತ್ರಮಂದಿರದಲ್ಲಿ ನಿರ್ದೇಶಕ ರಾಹುಲ್ ಜತೆಗೂಡಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಯಾರಿಗೂ ಗೊತ್ತಾಗಬಾರದೆಂದು ಬುರ್ಖಾ ಧರಿಸಿ, ಪ್ರೇಕ್ಷರ ಪ್ರತಿಕ್ರಿಯೆ ಜತೆಗೆ ಸಾಯಿ ಪಲ್ಲವಿ ಸಿನಿಮಾ ಎಂಜಾಯ್ ಮಾಡಿದ್ದಾರೆ. ತಮ್ಮ ಪಕ್ಕದಲ್ಲೇ ಸಾಯಿ ಪಲ್ಲವಿ ಕುಳಿತಿದ್ದರು ಯಾರಿಗೂ ಇದು ತಿಳಿಯಲಿಲ್ಲ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಯಿ ಪಲ್ಲವಿ ಸರಳತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. (ಏಜೆನ್ಸೀಸ್)
ರಿಲೀಸ್ಗೂ ಮುನ್ನ ಜೂ. ಎನ್ಟಿಆರ್-ರಾಮ್ಚರಣ್ ಫ್ಯಾನ್ಸ್ ಮಧ್ಯೆ ಕಿಡಿಹೊತ್ತಿಸಿದ RRR ಚಿತ್ರದ ಮೊದಲ ವಿಮರ್ಶೆ
ದೇಶವನ್ನು ಸತ್ಯನಾಶ ಮಾಡಿದ್ದು, ವಿಭಜನೆಗೆ ಕಾರಣವಾಗಿದ್ದು ಗಾಂಧಿ ಎಂದ ಸಂತ ಕಾಲಿಚರಣ್ ಅರೆಸ್ಟ್
VIDEO: ಸಿಎಂ ತವರಲ್ಲೇ ಮುದುಡಿದ ಕಮಲ, ಸಚಿವ ಶ್ರೀರಾಮುಲು ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಹಿನ್ನಡೆ!