ಮುಂಬೈ: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ವಿಜಯ್ ಬರ್ತಡೇ ಆಚರಿಸಿಕೊಂಡಾಗ ರಶ್ಮಿಕಾ ಶುಭಾಶಯ ಕೋರಿರಲಿಲ್ಲ. ಇದರ ಬೆನ್ನಲ್ಲೇ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಅನ್ನುವ ಅನುಮಾನ ಸೃಷ್ಟಿಯಾಗಿತ್ತು. ಇದೀಗ ಅನುಮಾನ ನಿಜವಾಗಿದೆ.
ಇತ್ತಿಚೆಗೆ ನಡೆದ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ 50ನೇ ಬರ್ತಡೇ ಸಂಭ್ರಮದ ಪಾರ್ಟಿಯಲ್ಲೂ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಮಾತು ಕೂಡ ಆಡಿಲ್ಲ. ಎಲ್ಲೇ ಹೋದರು ಜಂಟಿಯಾಗಿ ಹೋಗುತ್ತಿದ್ದ ಈ ಜೋಡಿ ಇದೀಗ ಒಂಟೊಂಟಿಯಾಗಿ ತಿರುಗಾಡುತ್ತಿರುವುದನ್ನು ನೋಡಿ ಇಬ್ಬರ ನಡುವೆ ಏನೋ ನಡೆದಿದೆ ಎಂಬ ಗುಸುಗುಸು ಇದೀಗ ಕೇಳಿಬರುತ್ತಿದೆ.
ವಿಜಯ್ ಮತ್ತು ರಶ್ಮಿಕಾ ತುಂಬಾ ಆತ್ಮೀಯರು. ಅಲ್ಲದೆ, ವಿಜಯ್ ಜತೆ ಆಗಾಗ ಹೋಟೆಲ್ ಹಾಗೂ ಪ್ರವಾಸಿ ತಾಣಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ರಶ್ಮಿಕಾ ನಡೆಯನ್ನು ನೋಡಿದರೆ, ವಿಜಯ್ರಿಂದಲೂ ಅಂತರ ಕಾಯ್ದುಕೊಂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ವಿಜಯ್ ಮನೆಯಲ್ಲಿ ರಶ್ಮಿಕಾ ಸಂಕ್ರಾತಿ ಹಬ್ಬ ಕೂಡ ಆಚರಿಸಿದ್ದರು. ಅಲ್ಲದೆ, ಹೊಸ ವರ್ಷದಂದು ವಿಜಯ್ ಕುಟುಂಬದ ಜತೆ ಗೋವಾದಲ್ಲಿ ರಶ್ಮಿಕಾ ವರ್ಷಾಚಾರಣೆ ಮಾಡಿದ್ದರು. ವಿಜಯ್ಗಾಗಿ ಒಮ್ಮೆ ಅಮೆರಿಕಕ್ಕೂ ರಶ್ಮಿಕಾ ಪ್ರವಾಸ ಮಾಡಿದ್ದರು. ಇಷ್ಟೊಂದು ಆತ್ಮೀಯಳಾಗಿದ್ದ ರಶ್ಮಿಕಾ, ಇದೀಗ ವಿಜಯ್ ಬರ್ತಡೇಗೆ ಒಂದೇ ಒಂದು ಶುಭ ಕೋರಿಲ್ಲ ಅಂದರೆ ಅಚ್ಚರಿಯಲ್ಲದೇ ಮತ್ತೇನು? ಈ ಕಾರಣದಿಂದಲೇ ರಶ್ಮಿಕಾ ಇದೀಗ ಭಾರೀ ಸುದ್ದಿಯಾಗಿದ್ದಾರೆ. ರಶ್ಮಿಕಾ ಮತ್ತು ವಿಜಯ್ ನಡುವೆ ಬಿರುಕು ಮೂಡಿದೆ ಅನ್ನೋ ಚರ್ಚೆ ಶುರುವಾಗಿದೆ.
ಅಂದಹಾಗೆ ಕರಣ್ ಜೋಹರ್ ಅವರ 50ನೇ ಬರ್ತಡೇ ಪಾರ್ಟಿಯಲ್ಲಿ ಹೃತಿಕ್ ರೋಷನ್, ಆಮೀರ್ ಖಾನ್, ಗೌರಿ ಖಾನ್ ಮುಂತಾದವರು ಉಪಸ್ಥಿತರಿದ್ದರು. ದಕ್ಷಿಣದ ಪುರಿ ಜಗನ್ನಾಥ್, ಚಾರ್ಮಿ ಕೌರ್, ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ, ರಾಕುಲ್ ಪ್ರೀತ್ ಸಿಂಗ್ ಮತ್ತು ತಮನ್ನಾ ಉಪಸ್ಥಿತರಿದ್ದರು. ಈ ಪಾರ್ಟಿಯಲ್ಲಿ ರಶ್ಮಿಕಾ ಕಪ್ಪು ಬಣ್ಣದ ಥೈಸ್ಲಿಟ್ ಡ್ರೆಸ್ನಲ್ಲಿ ಮಿಂಚಿದರು. (ಏಜೆನ್ಸೀಸ್)
ಜ್ಯೋತಿಷಿ ವೇಣು ಸ್ವಾಮಿ ನುಡಿದ ಭಯಾನಕ ಭವಿಷ್ಯಕ್ಕೆ ಹೆದರಿ ವಿಜಯ್ರಿಂದ ಅಂತರ ಕಾಯ್ದುಕೊಂಡರಾ ರಶ್ಮಿಕಾ?
ಜ್ಯೋತಿಷ್ಯ ಕೇಳಿ ಹೊರ ಬಂದ ತಕ್ಷಣವೇ ಅಜ್ಜಿ-ಮೊಮ್ಮಗನಿಗೆ ಕಾದಿತ್ತು ಬಿಗ್ ಶಾಕ್!
VIDEO| ಪ್ಲೇಆಫ್ ಹಂತಕ್ಕೇರಲು ಪಂಜಾಬ್ ಕಿಂಗ್ಸ್ ವಿಫಲ: ಶಿಖರ್ ಧವನ್ಗೆ ಹಿಗ್ಗಾಮುಗ್ಗಾ ಜಾಡಿಸಿದ ತಂದೆ