ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ ಪುನೀತ್ ರಾಜ್ಕುಮಾರ್ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮೊನ್ನೆಯಷ್ಟೇ ಹಾಡಿ ನಲಿದಿದ್ದ ಅಪ್ಪ ನಿನ್ನೆ ದಿಢೀರನೇ ಮೃತಪಟ್ಟಿದ್ದು, ಇಡೀ ರಾಜ್ಯಕ್ಕೆ ಬಹು ದೊಡ್ಡ ಆಘಾತವಾಗಿದೆ. 46ನೇ ವಯಸ್ಸಿನಲ್ಲಿ ಅಪ್ಪು ಅಕಾಲಿಕವಾಗಿ ಮರಣ ಹೊಂದಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಜಿಮ್ ಮಾಡುವಾಗ ಪುನೀತ್ಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ನಟ ಜಿಮ್ ರವಿ ಅವರು ಈ ಮಾತನ್ನು ನಿರಾಕರಿಸಿದ್ದು, ಜಿಮ್ ಮಾಡಿದ್ರೆ ಹೃದಯಾಘಾತ ಆಗುತ್ತದೆ ಎಂಬುದು ಸುಳ್ಳೆಂದು ಹೇಳಿದ್ದಾರೆ.
ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಅವರು ಎಲ್ಲ ಅನಿಷ್ಟಕ್ಕೆ ಶನಿಮಾತ್ಮ ಕಾರಣವಲ್ಲ. ಹಾಗೇ ಬಾಳೇಹಣ್ಣಿನ ಸಿಪ್ಪೆಯಿಂದ ಜಾರಿ ಬಿದ್ದ ಮಾತ್ರಕ್ಕೆ ಬಾಳೇಹಣ್ಣು ತಿನ್ನುವುದನ್ನು ಬಿಡಬಾರದು. ಏಕೆಂದರೆ, ನಿನ್ನೆ ಘಟನೆ ನಡೆದಾಗ ಅಪ್ಪು ಅವರು ಜಿಮ್ನಲ್ಲಿ ಇರಲಿಲ್ಲ. ಅವರು ಮನೆಯಿಂದ ಆಸ್ಪತ್ರೆಗೆ ನಡೆದುಕೊಂಡು ಹೋಗಿದ್ದಾರೆ. ಜಿಮ್ ಮಾಡಿದ್ರೆ ಹಾರ್ಟ್ ಅಟ್ಯಾಕ್ ಹಾಗುತ್ತದೆ. ಸತ್ತು ಹೋಗುತ್ತಾರೆ ಎಂದು ನಿನ್ನೆಯಿಂದ ಅಪಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಆ ರೀತಿ ಮಾಡಬೇಡಿ. ಅದು ಶುದ್ಧ ಸುಳ್ಳು. ಜಿಮ್ ಮಾಡುವುದರಿಂದ ಹೃದಯಾಘಾತ ಆಗುವುದಿಲ್ಲ. ಕೆಲವೊಮ್ಮೆ ನಡೆದರೆ ಅದು ಕಾಕತಾಳೀಯವಷ್ಟೇ ಎಂದು ಜಿಮ್ ರವಿ ತಿಳಿಸಿದರು.
ಜಿಮ್ನಿಂದ ಅಪ್ಪು ಅವರು ಈ ರೀತಿ ಆಗಲಿಲ್ಲ. ವಿಧಿಯ ಕ್ರೂರ ಆಟಕ್ಕೆ ಅವರು ಬಲಿಯಾಗಿದ್ದಾರೆ. ಜಿಮ್ನ ಪ್ರೀತಿ ಮಾಡುವವರು ಲಕ್ಷಾಂತರ ಮಂದಿ ಇದ್ದಾರೆ. ಜಿಮ್ ಇಟ್ಟುಕೊಂಡಿರುವವರು ಇದ್ದಾರೆ. ಇದೊಂದು ಗಾಳಿ ಸುದ್ದಿಯಿಂದ ಅದನ್ನೇ ನಂಬಿ ಬದುಕುತ್ತಿರುವವರ ಮೇಲೆ ಪರಿಣಾಮ ಬೀರುತ್ತದೆ. ಅಪ್ಪು ಜಿಮ್ ಮಾಡುವಾಗ ಕುಸಿದು ಬಿದ್ದಿಲ್ಲ. ಆದರೆ, ಅಪ್ಪು ಅವರಿಗೆ ಜಿಮ್ ಅಂದ್ರೆ ತುಂಬಾ ಇಷ್ಟ. ಅವರೆಂದು ತೂಕ ತರಬೇತಿ ಮಾಡುತ್ತಿರಲಿಲ್ಲ. ದೇಹಕ್ಕೆ ಎಷ್ಟು ಬೇಕೋ ಅಷ್ಟು ವ್ಯಾಯಾಮ ಮಾತ್ರ ಮಾಡುತ್ತಿದ್ದರು. ಆದರೆ, ಜಿಮ್ನಿಂದಾಗಿ ಅವರು ಮೃತಪಟ್ಟಿಲ್ಲ ಎಂದು ಹೇಳಿದ್ದಾರೆ.
ನಿನ್ನೆಯಿಂದಲೂ ಗಾಳಿ ಸುದ್ದಿ ಹರಿದಾಡುತ್ತಿದೆ. ಇದರಿಂದ ಇಡೀ ಜನತೆಯ ಮೇಲೆ ಪರಿಣಾಮ ಬೀರುತ್ತದೆ. ಜಿಮ್ ಅನ್ನೇ ನಂಬಿ ಬದುಕುತ್ತಿರುವವರು ಈಗಾಗಲೇ ಹರಿದಾಡುತ್ತಿರುವ ಸುದ್ದಿಯಿಂದ ಹೆದರಿದ್ದಾರೆ. ಸಾಕಷ್ಟು ಕುಟುಂಬ ಅದನ್ನೇ ಅವಲಂಬಿಸಿವೆ. ದಯವಿಟ್ಟು ಅದನ್ನು ಮನಸ್ಸಿನಿಂದ ತೆಗೆದುಹಾಕಿ. ಅಪ್ಪು ಅವರು ಜಿಮ್ ಮಾಡುತ್ತಾ ಕುಸಿದು ಬಿದ್ದಿಲ್ಲ. ನಡೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಇದೊಂದು ವಿಧಿಯ ಆಟ. ಏನಾಗಿದೆ ಎಂದು ಆ ವೈದ್ಯರೇ ಹೇಳಬೇಕು. ಸಣ್ಣ ವಯಸ್ಸಿನಿಂದಲೂ ಅಪ್ಪು ಜಿಮ್ಗೆ ಹೋಗುತ್ತಿದ್ದರು. ಜಿಮ್ನಿಂದ ಅವರಿಗೆ ಹೀಗಾಗಿಲ್ಲ ಎಂದು ಮತ್ತೊಮ್ಮೆ ಹೇಳಿದರು. (ದಿಗ್ವಿಜಯ ನ್ಯೂಸ್)
ಪುನೀತ್ರನ್ನು ಪವರ್ಸ್ಟಾರ್ ಎಂದು ಕರೆಯುವುದ್ದೇಕೆ? 2014ರಲ್ಲಿ ಅಪ್ಪು ಆಡಿದ ಈ ಮಾತು ಕಣ್ಣೀರು ತರಿಸುತ್ತೆ
ಪತ್ನಿ ಜತೆ ಪುನೀತ್ ಕ್ಲಿನಿಕ್ಗೆ ಬಂದಿದ್ರು.. ತುಂಬಾ ಬೆವರುತ್ತಿದ್ದರು.. ಆಯಾಸ ಆಗಿದ್ದರು…
ಇದೆಂಥಾ ದುರ್ವಿಧಿ: ಅಪ್ಪು ವ್ಯಕ್ತಿತ್ವ ಸಾರುವ ಈ ಹಾಡಿನ ಸಾಲು ಅವರ ಅಕಾಲಿಕ ಮರಣವನ್ನೂ ನಿಜವಾಗಿಸಿ ಬಿಡ್ತು