ಬೆಂಗಳೂರು: ಚಂದನವನದಲ್ಲಿ ಪವರ್ ಸ್ಟಾರ್ ಆಗಿ ಮಿಂಚಿದ್ದ ಮಿನುಗುತಾರೆ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ನಿನ್ನೆ ಬೆಳಗ್ಗೆ ಪುನೀತ್ಗೆ ಹೃದಯಾಘಾತ ಆದಾಗ ಆರಂಭದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟದ್ದು ಡಾ.ರಮಣರಾವ್. ಆ ವಿಷಾದನೀಯ ಕ್ಷಣದ ಬಗ್ಗೆ ಡಾ.ರಮಣರಾವ್ ನೋವಿನಿಂದಲೇ ವಿವರಿಸಿದ್ದು ಹೀಗೆ…
‘ಬೆಳಗ್ಗೆ 10 ಗಂಟೆಗೆ ಪುನೀತ್ ಕ್ಲಿನಿಕ್ಗೆ ಬಂದಿದ್ದರು. ಅವರ ಜತೆ ಪತ್ನಿಯೂ ಇದ್ದರು. ಜಿಮ್ ಮಾಡಿ ಸ್ಟೀಮ್ ತೆಗೆದುಕೊಂಡಿರುವುದಾಗಿ ಹೇಳಿದರು. ತುಂಬಾ ಬೆವರುತ್ತಿದ್ದರು. ಆಯಾಸ ಆಗಿದ್ದರು…. ಪುನೀತ್ ದೇಹವನ್ನು ತುಂಬಾ ಚೆನ್ನಾಗಿ ಇಟ್ಟುಕೊಂಡಿದ್ದರು. ಅವರಿಗೆ ಯಾವುದೇ ಕೆಟ್ಟ ಚಟ ಇರಲಿಲ್ಲ. ಇಲ್ಲಿಂದ 5 ನಿಮಿಷದಲ್ಲಿ ವಿಕ್ರಂ ಆಸ್ಪತ್ರೆ ತಲುಪಿದ್ದರು…’ ಎನ್ನುತ್ತಲೇ ರಮಣರಾವ್ ಭಾವುಕರಾದರು. ‘ಪುನೀತ್ ಮಾನಸಿಕವಾಗಿ ತುಂಬಾ ಶಾಂತವಾಗಿ ಇದ್ದರು. ಅಂದು ಡಾ.ರಾಜ್ ಆರೋಗ್ಯವನ್ನು ನಾನು ತಪಾಸಣೆ ನಡೆಸಿದ್ದೆ. ಸೋಫಾ ಮೇಲೆ ಕುಳಿತಿದ್ದಾಗಲೇ ಹೋಗಿಬಿಟ್ರು… ಪುನೀತ್ ತುಂಬಾ ಚಿಕ್ಕ ವಯಸ್ಸಿನಲ್ಲೇ ಹೀಗೆ ಆಗಿರುವುದು ನೋವಿನ ಸಂಗತಿ…’ ಎಂದು ಗದ್ಗದಿತರವಾದರು.
ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…
ಇದೆಂಥಾ ದುರ್ವಿಧಿ: ಅಪ್ಪು ವ್ಯಕ್ತಿತ್ವ ಸಾರುವ ಈ ಹಾಡಿನ ಸಾಲು ಅವರ ಅಕಾಲಿಕ ಮರಣವನ್ನೂ ನಿಜವಾಗಿಸಿ ಬಿಡ್ತು
ಕಣ್ಣೀರ ಕಡಲಲ್ಲಿ ಕರುನಾಡು: ಬದುಕಿನ ಪಯಣ ಮುಗಿಸಿದ ‘ರಾಜಕುಮಾರ’