More

    ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…

    ಬೆಂಗಳೂರು: ಚಂದನವನದ ‘ರಾಜಕುಮಾರ’, ಸಹಸ್ರಾರು ಅಭಿಮಾನಿಗಳ ‘ವೀರ ಕನ್ನಡಿಗ’ ಪುನೀತ್​ ರಾಜ್​ಕುಮಾರ್​ ಅವರು ಬಾರದೂರಿಗೆ ಪಯಣ ಬೆಳೆಸಿದ್ದು, ಕರುನಾಡು ಕಣ್ಣೀರ ಕಡಲಲ್ಲಿ ಮುಳುಗಿದೆ. ಸಾವಿಗೂ ಮುನ್ನ ಪುನೀತ್​ ಕೊನೆಯದಾಗಿ ಕರೆ ಮಾಡಿದ್ದು, ಡಾನ್ಸ್​ ಮಾಡಿದ್ದು, ಕಾರ್ಯಕ್ರಮ… ಈ ಕುರಿತ ಮಾಹಿತಿ ಇಲ್ಲಿದೆ.

    ಇಂದು ಬೆಳಗ್ಗೆ ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿದ್ದ ಪುನೀತ್​ ಅವರು ಮ್ಯಾನೇಜರ್​ಗೆ ಕರೆ ಮಾಡಿ, ‘ಎಲ್ಲಿದ್ದೀಯಾ?’ ಎಂದು ಕೇಳಿದ್ದರು. ‘ಥಿಯೇಟರ್​ನಲ್ಲಿರುವೆ’ ಎಂದ ಮ್ಯಾನೇಜರ್​ ಅನ್ನು ‘ಬೇಗ ಮನೆಗೆ ಬಾ, ರೆಡಿಯಾಗಿ ಭಜರಂಗಿ ಸಿನಿಮಾಗೆ ಹೋಗೋಣ’ ಎಂದಿದ್ದರು. ಆಮೇಲೆ ‘ಯಾಕೋ ಸ್ವಲ್ಪ ಸುಸ್ತಾಗಿದೆ, ಬೇಗ ಬಾ..’ ಎಂದೂ ಹೇಳಿದ್ದರು. ಪುನೀತ್​ರ ಮೊಬೈಲ್​ನಿಂದ ಹೋದ ಕೊನೇ ಕರೆ ಇದಾಗಿತ್ತು.

    ಸರಳ ಜೀವಿ, ಮಹಾನ್​ ಪ್ರತಿಭಾವಂತ ನಟ ಅಪ್ಪು ಅವರು ಸಾವಿಗೂ ಮುನ್ನ ಅಣ್ಣ ಶಿವರಾಜ್​ಕುಮಾರ್​ ಅವರ ಭಜರಂಗಿ-2 ಸಿನಿಮಾ ಬಿಡುಗಡೆಗೂ ಮುನ್ನ, ಅ.26ರಂದು ನಡೆದ ಕಾರ್ಯಕ್ರಮವನ್ನ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಆ ವೇದಿಕೆಯಲ್ಲಿ ಯಶ್​, ಪುನೀತ್​, ಶಿವಣ್ಣ ಸ್ಟೆಪ್​ ಹಾಕಿದ್ರು. ಇದೇ ಪುನೀತ್​ರ ಕೊನೇ ಡಾನ್ಸ್​.

    ಇಂದು ಬಿಡುಗಡೆಯಾಗಿದ್ದ ಭಜರಂಗಿ ಸಿನಿಮಾಕ್ಕೆ ಟ್ವೀಟ್​ ಮೂಲಕ ಅಪ್ಪು ಶುಭ ಕೋರಿದ್ದರು. ಶುಕ್ರವಾರ ಬೆಳಗ್ಗೆ 7.33 ನಿಮಿಷಕ್ಕೆ ಟ್ವೀಟ್​ ಮಾಡಿದ್ದರು. ಇದೇ ಅವರ ಕೊನೇ ಟ್ವೀಟ್​ ಆಯ್ತು.
    ನಿನ್ನೆ(ಗುರುವಾರ) ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್​ರ ಬರ್ತ್​ ಡೇ ಪಾರ್ಟಿಯಲ್ಲಿ ವಿಶೇಷ ಅತಿಥಿಯಾಗಿ ಪುನೀತ್​ ದಂಪತಿ ಪಾಲ್ಗೊಂಡಿದ್ದರು. ಇದು ಪುನೀತ್​ ಬದುಕಿದ್ದಾಗ ಪಾಲ್ಗೊಂಡ ಕೊನೇ ಪಾರ್ಟಿ.

    ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!

    ‘ಅಪ್ಪು’ಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಯುವಕ ಆತ್ಮಹತ್ಯೆ: ಅಭಿಮಾನಿಗಳೇ ದಯವಿಟ್ಟು ದುಡುಕಬೇಡಿ…

    ವಿಷಾದಕರ ಪರಿಸ್ಥಿತಿಯಲ್ಲಿ ಪುನೀತ್​ ರಾಜ್​ಕುಮಾರ್​: ಈ ಫೋಟೋ ನೋಡಿದ್ರೆ ಕಣ್ಣೀರು ಬರುತ್ತೆ

    ದೇವರೇ ನೀನೆಷ್ಟು ಕ್ರೂರಿ? ನನ್ನಂಥ ವಯಸ್ಸಾದವರನ್ನ ಬಿಟ್ಟು ‘ಅಪ್ಪು’ ಪ್ರಾಣವನ್ನೇಕೆ ಪಡೆದೆ…

    ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್​: ಅಪ್ಪನ ನಡೆ ಅನುಸರಿಸಿದ ಮಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts