ಬೆಂಗಳೂರು: ಚಂದನವನದ ‘ರಾಜಕುಮಾರ’, ಸಹಸ್ರಾರು ಅಭಿಮಾನಿಗಳ ‘ವೀರ ಕನ್ನಡಿಗ’ ಪುನೀತ್ ರಾಜ್ಕುಮಾರ್ ಅವರು ಬಾರದೂರಿಗೆ ಪಯಣ ಬೆಳೆಸಿದ್ದು, ಕರುನಾಡು ಕಣ್ಣೀರ ಕಡಲಲ್ಲಿ ಮುಳುಗಿದೆ. ಸಾವಿಗೂ ಮುನ್ನ ಪುನೀತ್ ಕೊನೆಯದಾಗಿ ಕರೆ ಮಾಡಿದ್ದು, ಡಾನ್ಸ್ ಮಾಡಿದ್ದು, ಕಾರ್ಯಕ್ರಮ… ಈ ಕುರಿತ ಮಾಹಿತಿ ಇಲ್ಲಿದೆ.
ಇಂದು ಬೆಳಗ್ಗೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಪುನೀತ್ ಅವರು ಮ್ಯಾನೇಜರ್ಗೆ ಕರೆ ಮಾಡಿ, ‘ಎಲ್ಲಿದ್ದೀಯಾ?’ ಎಂದು ಕೇಳಿದ್ದರು. ‘ಥಿಯೇಟರ್ನಲ್ಲಿರುವೆ’ ಎಂದ ಮ್ಯಾನೇಜರ್ ಅನ್ನು ‘ಬೇಗ ಮನೆಗೆ ಬಾ, ರೆಡಿಯಾಗಿ ಭಜರಂಗಿ ಸಿನಿಮಾಗೆ ಹೋಗೋಣ’ ಎಂದಿದ್ದರು. ಆಮೇಲೆ ‘ಯಾಕೋ ಸ್ವಲ್ಪ ಸುಸ್ತಾಗಿದೆ, ಬೇಗ ಬಾ..’ ಎಂದೂ ಹೇಳಿದ್ದರು. ಪುನೀತ್ರ ಮೊಬೈಲ್ನಿಂದ ಹೋದ ಕೊನೇ ಕರೆ ಇದಾಗಿತ್ತು.
ಸರಳ ಜೀವಿ, ಮಹಾನ್ ಪ್ರತಿಭಾವಂತ ನಟ ಅಪ್ಪು ಅವರು ಸಾವಿಗೂ ಮುನ್ನ ಅಣ್ಣ ಶಿವರಾಜ್ಕುಮಾರ್ ಅವರ ಭಜರಂಗಿ-2 ಸಿನಿಮಾ ಬಿಡುಗಡೆಗೂ ಮುನ್ನ, ಅ.26ರಂದು ನಡೆದ ಕಾರ್ಯಕ್ರಮವನ್ನ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಆ ವೇದಿಕೆಯಲ್ಲಿ ಯಶ್, ಪುನೀತ್, ಶಿವಣ್ಣ ಸ್ಟೆಪ್ ಹಾಕಿದ್ರು. ಇದೇ ಪುನೀತ್ರ ಕೊನೇ ಡಾನ್ಸ್.
ಇಂದು ಬಿಡುಗಡೆಯಾಗಿದ್ದ ಭಜರಂಗಿ ಸಿನಿಮಾಕ್ಕೆ ಟ್ವೀಟ್ ಮೂಲಕ ಅಪ್ಪು ಶುಭ ಕೋರಿದ್ದರು. ಶುಕ್ರವಾರ ಬೆಳಗ್ಗೆ 7.33 ನಿಮಿಷಕ್ಕೆ ಟ್ವೀಟ್ ಮಾಡಿದ್ದರು. ಇದೇ ಅವರ ಕೊನೇ ಟ್ವೀಟ್ ಆಯ್ತು.
ನಿನ್ನೆ(ಗುರುವಾರ) ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ರ ಬರ್ತ್ ಡೇ ಪಾರ್ಟಿಯಲ್ಲಿ ವಿಶೇಷ ಅತಿಥಿಯಾಗಿ ಪುನೀತ್ ದಂಪತಿ ಪಾಲ್ಗೊಂಡಿದ್ದರು. ಇದು ಪುನೀತ್ ಬದುಕಿದ್ದಾಗ ಪಾಲ್ಗೊಂಡ ಕೊನೇ ಪಾರ್ಟಿ.
ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!
‘ಅಪ್ಪು’ಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಯುವಕ ಆತ್ಮಹತ್ಯೆ: ಅಭಿಮಾನಿಗಳೇ ದಯವಿಟ್ಟು ದುಡುಕಬೇಡಿ…
ವಿಷಾದಕರ ಪರಿಸ್ಥಿತಿಯಲ್ಲಿ ಪುನೀತ್ ರಾಜ್ಕುಮಾರ್: ಈ ಫೋಟೋ ನೋಡಿದ್ರೆ ಕಣ್ಣೀರು ಬರುತ್ತೆ
ದೇವರೇ ನೀನೆಷ್ಟು ಕ್ರೂರಿ? ನನ್ನಂಥ ವಯಸ್ಸಾದವರನ್ನ ಬಿಟ್ಟು ‘ಅಪ್ಪು’ ಪ್ರಾಣವನ್ನೇಕೆ ಪಡೆದೆ…