ಕೊಟ್ಟಾಯಂ: ಕೇರಳದ ಕರುಕಚಲ್ನಲ್ಲಿ ಕಾರಿನ ಅಡಿಯಲ್ಲಿ ಖಾಸಗಿ ಬಸ್ ಚಾಲಕನ ಮೃತದೇಹ ಪತ್ತೆ ಸಂಬಂಧ ಪೊಲೀಸ್ ತನಿಖೆಯಲ್ಲಿ ಬಸ್ ಚಾಲಕ ಕೊಲೆಯಾಗಿರುವುದು ಬಯಲಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಕೊಚುಕಂದಮ್ನ ಬಾಂಗ್ಲಾಕುನ್ನು ನಿವಾಸಿ ರಾಹುಲ್ (35) ಎಂದು ಗುರುತಿಸಲಾಗಿದೆ. ಕೊಲೆ ನಡೆದ ನಾಲ್ಕು ದಿನಗಳ ಬಳಿಕ ರಾಹುಲ್ ಮೃತದೇಹ ಪತ್ತೆಯಾಗಿದೆ. ಪ್ರಕರಣ ಸಂಬಂಧ ರಾಹುಲ್ ಸ್ನೇಹಿತರಾದ ವಿಷ್ಣು ಮತ್ತು ಸುನೀಶ್ ಎಂಬುವರನ್ನು ಬಂಧಿಸಲಾಗಿದೆ.
ಸ್ನೇಹಿತನ ಮದುವೆಗೆ ಉಡುಗೊರೆ ನೀಡುವ ವಿಚಾರದಲ್ಲಿ ಜಗಳ ನಡೆದಿದೆ ಎಂಬ ಸಣ್ಣ ಸುಳಿವು ಕೊಲೆ ರಹಸ್ಯ ಭೇದಿಸಲು ಸಹಾಯ ಮಾಡಿದೆ. ಆರೋಪಿಗಳು ರಾಹುಲ್ನನ್ನು ಕೊಲೆ ಮಾಡಿ ಆತನ ಮೃತದೇಹವನ್ನು ಕಾರಿನ ಅಡಿಯಲ್ಲಿಟ್ಟು ಪರಾರಿಯಾಗಿದ್ದರು. ರಾಹುಲ್ ಮೃತದೇಹ ಕಳೆದ ಶನಿವಾರ ಮುಂಜಾನೆ ಥಾಮಚ್ಚೇರಿ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಕಾರು ರಿಪೇರಿ ಮಾಡುವಾಗ ಕಾರು ರಾಹುಲ್ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಆರಂಭದಲ್ಲಿ ನಂಬಲಾಗಿತ್ತು. ಆತನ ಬಾಯಿ ಮತ್ತು ಮೂಗಿನಲ್ಲಿ ರಕ್ತಸ್ರಾವ ಆಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಬೇರೆಯದ್ದೇ ಕಾರಣ ಇದೆ ಎಂಬ ಸುಳಿವು ಪೊಲೀಸರಿಗೆ ದೊರೆತ್ತಿತ್ತು. ಏಕೆಂದರೆ ರಾಹುಲ್ ತಲೆಯ ಒಳಗೆ ಬಲವಾದ ಹೊಡೆತ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ರಾಹುಲ್ ಕುಟುಂಬ ಕೊಲೆ ಆಗಿರಬಹುದೆಂದು ದೂರು ದಾಖಲಿಸಿದರು.
ರಾಹುಲ್ ಶುಕ್ರವಾರ ರಾತ್ರಿ ನೆದುಂಕುನಮ್ನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ನೇಹಿತರೊಂದಿಗೆ ತೆರಳಿದ್ದ. ಇದಾದ ಬಳಿಕ ರಾತ್ರಿ 9.30ಕ್ಕೆ ಆತನ ಪತ್ನಿಗೆ ಕರೆ ಮಾಡಿದ್ದ. ಇದಾದ ಬಳಿಕ ಪಾಲಕರು ರಾಹುಲ್ಗೆ ಕರೆ ಮಾಡಿದ್ದಾರೆ. ಆದರೆ, ಯಾರೊಬ್ಬರು ಕರೆ ಸ್ವೀಕರಿಸಲಿಲ್ಲ. ಈ ಒಂದು ಹೇಳಿಕೆ ಪ್ರಕರಣಕ್ಕೆ ಮಹತ್ವದ ತಿರುವು ನೀಡಿತು. ಇದೇ ಆಧಾರದ ಮೇಲೆ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. (ಏಜೆನ್ಸೀಸ್)
9 ಮಕ್ಕಳಿದ್ದರೂ ವೃದ್ಧೆ ಬೀದಿಗೆ!; ಎರಡು ಮನೆಯಿದ್ದರೂ ಅನಾಥೆ, ಮರದ ಕೆಳಗೆ ಆಶ್ರಯ…
ನದಿ ದಡದಲ್ಲಿ ಟನ್ಗಟ್ಟಲೆ ಮೀನಿನ ರಾಶಿ! ತಿಂದರೆ ನೀವೂ ಸಾಯುತ್ತೀರ ಹುಷಾರ್ ಎಂದ ಅಧಿಕಾರಿಗಳು