ಬೆಂಗಳೂರು ದಕ್ಷಿಣ: ಕ್ಷೇತ್ರದ ಅಭಿವೃದ್ಧಿಗಾಗಿ ಜನಪರ ಕಾಳಜಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಷರತ್ತು ಇಲ್ಲದೆ ಬೇಷರತ್ ಸೇರ್ಪಡೆಯಾಗುವ ಮೂಲಕ ಬೆಂಬಲ ನೀಡಿರುವುದಾಗಿ ಉದ್ಯಮಿ ಆರ್.ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿಯಾಗಿದ್ದ ಅವರು ಸಂಸದ ಡಿ.ಕೆ. ಸುರೇಶ್, ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ. ರಮೇಶ್ ಸಮ್ಮುಖದಲ್ಲಿ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿ ಮಾತನಾಡಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನ್ಯ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದು ಕಾಂಗ್ರೆಸ್ ಪಕ್ಷ ಪಕ್ಷ ಬಹುಮತದಿಂದ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದರು.
ಆರ್.ಕೆ. ರಮೇಶ್, ಪಾಲಿಕೆ ಮಾಜಿ ಸದಸ್ಯ ಆಂಜಿನಪ್ಪ, ಮುಖಂಡರಾದ ಸುಂದರೇಶ್, ನರೇಂದ್ರ ಬಾಬು, ಕೆ. ಕುಮಾರ್, ಅಚ್ಯುತ್ ರಾಜ್ ಮತ್ತಿತರರು ಉಪಸ್ಥಿತರಿದ್ದರು
ಬೆಂ. ದಕ್ಷಿಣ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್. ಪ್ರಭಾಕರ್ ರೆಡ್ಡಿ ಬುಧವಾರ ಸಂಸದ ಡಿ.ಕೆ. ಸುರೇಶ್, ಕೈ ಅಭ್ಯರ್ಥಿ ಆರ್. ಕೆ.ರಮೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು ಪಾಲಿಕೆ ಮಾಜಿ ಸದಸ್ಯ ಆಂಜಿನಪ್ಪ, ಮುಖಂಡರಾದ ಸುಂದರೇಶ್, ನರೇಂದ್ರ ಬಾಬು, ಕೆ.ಕುಮಾರ್, ಅಚ್ಯುತ್ ರಾಜ್ ಇದ್ದರು.