ಹೈದರಾಬಾದ್: ವಿವಾಹೇತರ ಸಂಬಂಧಗಳು ಭಾರತೀಯ ಕೌಟುಂಬಿಕ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅಪ್ಪ-ಅಮ್ಮ ಮಾಡುವ ತಪ್ಪಿಗೆ ಮಕ್ಕಳ ಭವಿಷ್ಯವು ಅಡಕತ್ತರಿಯಲ್ಲಿ ಸಿಕ್ಕಿಕೊಳ್ಳುವ ಪರಿಸ್ಥಿತಿಗೆ ತಾಜಾ ಉದಾಹರಣೆಯಾಗಿ ತೆಲಂಗಾಣದಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪ್ರಿಯಕರನೊಂದಿಗೆ ಓಡಿ ಹೋಗಿರುವ ಮಹಿಳೆಯೊಬ್ಬಳು ನನಗೆ ಮಕ್ಕಳು ಬೇಡ ನನ್ನ ಬಾಯ್ಫ್ರೆಂಡ್ ಜತೆ ಇರುತ್ತೇನೆ ಎಂದಿರುವ ಅಮಾನವೀಯ ಘಟನೆ ನಡೆದಿದೆ.
ವಿವರಣೆಗೆ ಬರುವುದಾದರೆ, ತೆಲಂಗಾಣದ ವಾನಪರ್ಥಿ ಜಿಲ್ಲೆಯ ಅಮರಚಿಂತ ಮೂಲದ ಸುಜಾತಾಗೆ ಈಗಾಗಲೇ ಮದುವೆ ಆಗಿದ್ದು, 10 ವರ್ಷದ ಮಗ ಮತ್ತು 7 ವರ್ಷದ ಮಗಳಿದ್ದಾಳೆ. ಈ ಮಧ್ಯೆ ಸುಜತಾಗೆ ತಮ್ಮದೇ ಕಾಲನಿಯಲ್ಲಿ ರಾಕೇಶ್ ಎಂಬ ಯುವಕನ ಪರಿಚಯವಾಗಿದೆ. ತದನಂತರದಲ್ಲಿ ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರು ಒಟ್ಟಿಗೆ ಬಾಳುವ ನಿರ್ಧಾರಕ್ಕೂ ಬಂದಿದ್ದರು.
ಹೀಗಿರುವಾಗ ಒಂದು ತಿಂಗಳ ಹಿಂದೆ ಸುಜತಾ ತನ್ನ ಮಕ್ಕಳು ಮತ್ತು ಗಂಡನನ್ನು ಬಿಟ್ಟು ರಾಕೇಶ್ ಜತೆ ಓಡಿ ಹೋಗಿ ವಾರಂಗಲ್ನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಈ ವಿಚಾರ ಎರಡು ಮನೆಗೆ ತಿಳಿಯಿತು. ಮೇ 21ರಂದು ರಾಕೇಶ್ ಕುಟುಂಬಸ್ಥರು ವಾರಂಗಲ್ಗೆ ತೆರಳಿದ್ದಾರೆ. ಬಳಿಕ ಇಬ್ಬರಿಗೂ ಕೌನ್ಸೆಲಿಂಗ್ ನೀಡಿ ಅಮರಚಿಂತಗೆ ಕರೆತಂದಿದ್ದಾರೆ. ಸುಜಾತಳನ್ನು ಗಂಡನ ಮನೆಗೆ ಬಿಟ್ಟು, ರಾಕೇಶ್ನನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.
ಮೇ 24ರ ಸೋಮವಾರ ಬೆಳಗ್ಗೆ ಅಮರಚಿಂತದ ಪೊಲೀಸ್ ಠಾಣೆಗೆ ತೆರಳಿ ಸುಜಾತಾ ಧರಣಿ ಕುಳಿತಿದ್ದಾಳೆ. ನಾನು ರಾಕೇಶ್ನೊಂದಿಗೆ ಬದುಕಬೇಕು. ನಾವಿಬ್ಬರು ವಾರಂಗಲ್ನ ದೇವಸ್ಥಾನದಲ್ಲಿ ಮದುವೆ ಆಗಿದ್ದೇನೆ. ಎಷ್ಟೇ ಕಷ್ಟವಾದರೂ ಸರಿಯೇ ನನ್ನೊಂದಿಗೆ ಇರುತ್ತೇನೆಂದು ರಾಕೇಶ್ ಹೇಳಿದ್ದಾನೆ. ನನಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಂಡಿದ್ದಾಳೆ.
ರಾಕೇಶ್ ಕುಟುಂಬದವರು ನನ್ನ ಮೇಲೆ ಹಲ್ಲೆ ಮಾಡಿ ರಾಕೇಶ್ನನ್ನು ಎಲ್ಲಿ ಬಚ್ಚಿಟ್ಟಿದ್ದೀಯ ಎಂದು ಕೇಳುತ್ತಿದ್ದಾರೆ. ಮೊಬೈಲ್ ಪೋನ್ ಸಿಗದಂತೆ ಮಾಡಿದ್ದು, ನಾನು ರಾಕೇಶ್ ಜತೆಯಲ್ಲಿ ಮಾತನಾಡದಂತೆ ಮಾಡಿದ್ದಾರೆಂದು ದೂರು ನೀಡಿದ್ದಾಳೆ. ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಇತ್ತ ಅಮ್ಮನ ವಿವಾಹೇತರ ಸಂಬಂಧಕ್ಕೆ ಮಕ್ಕಳು ಬಲಿಪಶುಗಳಾಗಿದ್ದಾರೆ. (ಏಜೆನ್ಸೀಸ್)
ಹನಿಟ್ರ್ಯಾಪೋ? ಬ್ಲ್ಯಾಕ್ಮೇಲೋ?: ಯಾರಿಗೆ ಉರುಳಾಗುತ್ತೆ ಅಶ್ಲೀಲ ಸಿಡಿ ಪ್ರಕರಣ?
ಗಡುವು ಅಂತ್ಯ, ಮುಂದೇನು?: ಅನುಸರಿಸದಿದ್ದರೆ ತಾಣಗಳೇ ಬ್ಲಾಕ್ ಸಾಧ್ಯತೆ!